![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 2, 2022, 10:36 PM IST
ಕಾರ್ಕಳ : ನಾಲ್ವರು ಸಹೋದರಿಯರಿದ್ದರೂ, ತಂದೆ-ತಾಯಿಗೆ ತಾನೊಬ್ಬನೇ ಪುತ್ರನಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಬಗ್ಗೆ ಸೂಡ ಗ್ರಾಮದ ಶಂಕರ ಮೇರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಯಿಲ ಆಸ್ಲರ್ ಅವರಿಗೆ ಸೂಡಾ ಗ್ರಾಮದಲ್ಲಿ ಸರ್ವೆ ನಂಬ್ರ 224/1 ರಲ್ಲಿ 2 ಎಕ್ರೆ 26 ಸೆಂಟ್ಸ್ ಜಾಗ ಸಾಗುವಳಿ ಚೀಟಿ ಮೂಲಕ ಮಂಜೂರಾಗಿದ್ದು, ಮಾಯಿಲ ಅಸ್ಲರ್ ಅವರು ಜೀವಿತ ಕಾಲದಲ್ಲಿ ಜಾಗವನ್ನು ಯಾವುದೇ ದಾಖಲೆಗಳನ್ನು ಮಾಡಿಸದೇ ಮೃತಪಟ್ಟಿದ್ದರು. ಶಂಕರ, ಭಾಗಿರಥಿ, ಭವಾನಿ, ಗುಲಾಬಿ, ವಿನೋದಾ ಅವರ ಮಕ್ಕಳಾಗಿದ್ದರು.
ಅವರಲ್ಲಿ ಶಂಕರ ತಾನೊಬ್ಬನೇ ಪುತ್ರನಿರುವುದಾಗಿ ಊರಿನ ಸ್ಥಳೀಯರ ಜತೆ ಸೇರಿ ಸುಳ್ಳು ದಾಖಲೆಯನ್ನು ಸೃಷ್ಠಿಸಿ ಸಹೋದರಿಯರಿಗೆ ಮೋಸ, ವಂಚನೆ ಮಾಡಿದ್ದಾಗಿ ಸಹೋದರಿ ಭಾಗೀರಥಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉಡುಪಿ: ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ ಪ್ರಕರಣ : ಎರಡು ಆಡಿಯೋ ಪೊಲೀಸ್ ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.