ಕಾರ್ಕಳ ಉತ್ಸವ: ಮುಂದುವರಿದ ಮೆರವಣಿಗೆ


Team Udayavani, Mar 20, 2022, 4:10 AM IST

ಕಾರ್ಕಳ ಉತ್ಸವ: ಮುಂದುವರಿದ ಮೆರವಣಿಗೆ

ಕಾರ್ಕಳ: ಉತ್ಸವದಲ್ಲಿ ಕಾರ್ಕಳದ ಪ್ರತೀ ಮನೆಯ ವ್ಯಕ್ತಿ ಉತ್ಸವದಲ್ಲಿ  ಭಾಗಿಯಾಗಬೇಕು ಎನ್ನುವ ಸಚಿವ ವಿ.ಸುನಿಲ್‌ಕುಮಾರ್‌ ಅವರ  ಕಲ್ಪನೆ  ನಿರೀಕ್ಷೆಗೂ  ಮೀರಿ ಯಶಸ್ವಿಯಾಗಿದೆ.

ಕಾರ್ಕಳ ಉತ್ಸವದ ಮಳಿಗೆಗೆ ಭೇಟಿ ನೀಡುವವರ ಸಂಖ್ಯೆ  ಏರುತ್ತಲೇ ಇದೆ. ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಸಚಿವರು ಸಾಂಸ್ಕೃತಿಕ ಹೊರತುಪಡಿಸಿ ವಸ್ತುಪ್ರದರ್ಶನ, ಆಹಾರೋತ್ಸವ, ದೀಪಾ ಲಂಕಾರ, ಬೋಟಿಂಗ್‌ ಇವುಗಳನ್ನು  ಎರಡು ದಿನ ವಿಸ್ತರಿಸಿ ಅವಕಾಶ ಕಲ್ಪಿಸಿದ್ದಾರೆ.

ಇಂದು ಕೊನೆಗೊಳ್ಳಬೇಕಿತ್ತು :

ಮಾ. 10ರಿಂದ ಆರಂಭಗೊಂಡು ಕಲೆ, ಸಂಸ್ಕೃತಿ ಜತೆಗೆ ಹಲವು ಆಯಾಮ ಗಳ ಕಾರ್ಕಳ ಉತ್ಸವ ಮಾ.20ಕ್ಕೆ  ಕೊನೆಯಾಗಬೇಕಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಹಲವು ವೈವಿಧ್ಯಗಳು  ಗತವೈಭವದ ರೀತಿ ನಡೆದು ಜನರನ್ನು ಉತ್ಸಹ ಆಕರ್ಷಿಸುತ್ತಿದೆ. ವಿದ್ಯುತ್‌ ಅಲಂಕಾರ ಎಲ್ಲವೂ  ಜನಮಾನಸದಲ್ಲಿ  ಉಳಿಯುವಂತೆ ಮಾಡಿದೆ.  ಪ್ರತಿನಿತ್ಯ 50 ಸಾವಿರಕ್ಕೂ ಅಧಿಕ ಮಂದಿ ಸ್ವರಾಜ್‌ ಮೈದಾನ, ವಿವಿಧ ಮಳಿಗೆ, ಬೋಟಿಂಗ್‌ಗೆ ಆಗಮಿಸುತ್ತಿದ್ದಾರೆ. ಇದನ್ನು ಮನಗಂಡು ಮಾ. 22ರ ವರೆಗೆ  ಮುಂದುವರಿಸಲಾಗಿದೆ.

ಶ್ರಮದ ಧ್ಯೋತಕದಿಂದ ಮಾದರಿ :

ಕಾರ್ಕಳ ಉತ್ಸವದ ಯಶಸ್ವಿನಲ್ಲಿ ಸಂಘ ಸಂಸ್ಥೆಗಳು, ನಾಗರಿಕರ ಜತೆಗೆ ಪೊಲೀಸ್‌, ಮೆಸ್ಕಾಂ, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಮಕ್ಕಳು ಹೀಗೆ ಸ್ವಯಂ ಸೇವಕರು  ಶಕ್ತಿ ಮೀರಿ ದುಡಿಯುತ್ತಿದ್ದು, ಅವರೆಲ್ಲರ ಶ್ರಮದ ಧ್ಯೋತಕ ಕಾರ್ಕಳ ಉತ್ಸವ ನಾಡಿಗೆ ಮಾದರಿಯಾಗಿ ಸಾಗುತ್ತಿದೆ.

ಗಮನ ಸೆಳೆವ‌ ಕುದುರೆ ಗಾಡಿಗಳು :

ಎಲ್ಲೋ ಕಾಣುತ್ತಿದ್ದ  ಕುದುರೆ ಗಾಡಿಗಳನ್ನು ಕಾರ್ಕಳದಲ್ಲಿ  ನೋಡುವ ಅವಕಾಶ  ಉತ್ಸವದ ಸಂದರ್ಭ ದೊರಕಿದೆ. ಕಾರ್ಕಳ ಉತ್ಸವದ ಆರಂಭದಿಂದ ಮೈಸೂರಿನ ಹತ್ತು ಕುದುರೆ ಬಂಡಿಗಳು ನಗರದಲ್ಲಿ ಅತ್ತಿತ್ತ ಓಡಾಡುತ್ತ ಗಮನ ಸೆಳೆಯುತ್ತಿವೆ. ಗೌಜಿ ಗದ್ದಲಗಳ ನಡುವೆ  ಕುದುರೆ ಬಂಡಿಗಳ ಓಡಾಟ ಸಾರ್ವಜನಿಕರಿಗೆ ಮುದ ನೀಡುತ್ತಿವೆ. ನಮ್ಮೂರಿನ ಜನತೆ  ಎಲ್ಲವನ್ನು ಕಾಣಬೇಕು ಎನ್ನುವ ಕಾರಣಕ್ಕೆ ಸಚಿವರು ಮೈಸೂರಿನಿಂದ 10 ಕುದುರೆ ಬಂಡಿಗಳನ್ನು ತರಿಸಿದ್ದರು. ಕುದುರೆಗಳು ಅನಂತಶಯನ, ಸ್ವರಾಜ್‌ ಮೈದಾನ ಪರಿಸರ, ಇಲ್ಲಿನ ರಸ್ತೆಯುದ್ದಕ್ಕೂ ಸವಾರಿ ಮಾಡುತ್ತಿದೆ. ಪ್ರಯಾಣ ಉಚಿತವಾಗಿದೆ.

ಕಾಡು-ನಾಡಿನ  ಸೊಗಸಿನ ಸವಿ :

ಉತ್ಸವದ ಹಲವು ವಸ್ತು ಪ್ರದರ್ಶನಗಳ ಪೈಕಿ ಅರಣ್ಯ ಇಲಾಖೆಯ ನಿಸರ್ಗಧಾಮ ಗಮನ  ಸೆಳೆಯುತ್ತಿದೆ. ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳ ವೈವಿಧ್ಯಮಯ ನೋಟ, ಜುಳು ಜುಳು ಹರಿಯುವ ನದಿ, ಕಳೆದ ದಿನಗಳ ಜೀವನ ಶೈಲಿ, ಅರಣ್ಯ ಇಲಾಖೆಯ ಮಾದರಿಗಳು, ಸಂಸ್ಕೃತಿಯ ಹೆಂಚಿನ ಮನೆ, ಹುಲ್ಲಿನ  ಮನೆ, ಸ್ಲಾéಬ್‌ ಮನೆ ಮಾದರಿಗಳು, ಅರಣ್ಯ ಇಲಾಖೆ ಕಚೇರಿ, ನರ್ಸರಿ, ಪಂಚಾಯತ್‌  ಕಟ್ಟೆ, ಎಲೆ ಉದುರುವ ಕಾಡು, ಗುಹೆ, ಗುಡ್ಡ ಕಾಡು, ಪರ್ವತ,  ಪಾಲ್ಸ್‌, ನಾಗಬನ,  ತೂಗು ಸೇತುವೆ,  ನೀರಿನ ಝರಿ, ಫಾರೆಸ್ಟ್‌ ರೇಂಜ್‌ ಆಫೀಸ್‌, ವಿಲೇಜ್‌ ಫಾರೆಸ್ಟ್‌  ಆಫೀಸ್‌,  ಶಾಲೆ,  ಗುಡಿಸಲು ಮನೆ,  ಹೊಲಗದ್ದೆ, ಟಿಂಬರ್‌ ಡಿಪೋ, ನಕ್ಷತ್ರವನ, ನವಗ್ರಹ ವನ, ಗುಡಿಕೈಗಾರಿಕೆ, ಶೋಲಾ ಅರಣ್ಯ, ಪಕ್ಷಿಧಾಮ, ಹುಲ್ಲುಗಾವಲು, ಒಣ ಅರಣ್ಯ, ನದಿಮೂಲಗಳು,  ವೀಕ್ಷಣ ಗೋಪುರ ಇನ್ನು ಅನೇಕ ಮಾದರಿಗಳಿವೆ. ಅರಣ್ಯದಲ್ಲಿ ಮಳೆ ನೀರು ಭೂಮಿಯಲ್ಲಿ ಇಂಗಲು ಚೆಕ್‌ ಡ್ಯಾಂ ಮಾದರಿಯೂ ನೈಜತೆಗೆ ಹತ್ತಿರವಾಗಿ ಕಾಣಿಸುತ್ತಿದೆ.

ಮುಂದೆ ಮೆರವಣಿಗೆ;  ಹಿಂದಿನಿಂದ ಪರಿಸರ ಸ್ವತ್ಛ ! :

ಉತ್ಸವದಲ್ಲಿ ಸ್ವತ್ಛತೆಗೆ ಮೊದಲಿನಿಂದಲೂ ಬಹು ಆದ್ಯತೆ ನೀಡುತ್ತ ಬರಲಾಗಿದೆ. ಮಾ.18ರಂದು ಉತ್ಸವ ಮೆರವಣಿಗೆ ಮುಂದೆ ಸಾಗುತ್ತಿದ್ದರೆ ಅದರ ಹಿಂದಿನಿಂದ ಸ್ವತ್ಛತೆಯ ಸ್ವಯಂ ಸೇವಕರು, ಶ್ರಮಿಕರು ಕಸವನ್ನು  ಎತ್ತುತ್ತಿದ್ದರು. ಅಷ್ಟೊಂದು ಜನ ಸೇರುವ  ಸ್ಥಳ ಮೆರವಣಿಗೆ ಸಾಗಿದ ಮರು ಕ್ಷಣ ದಾರಿಯಲ್ಲಾಗಲಿ ಎಲ್ಲಿಯೂ ಕಸ ಕಣ್ಣಿಗೆ ಬೀಳಲಿಲ್ಲ. ಇಂತಹದ್ದೊಂದು  ಅಚ್ಚುಕಟ್ಟುತನಕ್ಕೆ  ಎಲ್ಲರ  ಮೆಚ್ಚುಗೆಗೆ  ಕಾರಣವಾಗಿದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.