![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 21, 2022, 6:40 AM IST
ಕಾರ್ಕಳ: ಸಮನ್ವಯ, ಬಾಂಧವ್ಯ, ಅಭಿಮಾನದ ಮೂಲಕ ಎಲ್ಲರನ್ನು ಒಗ್ಗೂಡಿಸುವುದೇ ಕಾರ್ಕಳ ಉತ್ಸವದ ಆಶಯವಾಗಿತ್ತು. ಸಂಘಟಿತ ಪ್ರಯತ್ನದಿಂದ ಅದಾಗಿದೆ. ಇದೇ ಉತ್ಸಾಹದೊಂದಿಗೆ ಸ್ವರ್ಣ ಕಾರ್ಕಳ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಸ್ವರಾಜ್ ಮೈದಾನದಲ್ಲಿ ರವಿವಾರ ಸಂಜೆ ನಡೆದ ಕಾರ್ಕಳ ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಉತ್ಸವ ಯಶಸ್ಸಿಗೆ ದುಡಿದ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಉತ್ಸವ ಯಶಸ್ಸಿನ ಹಿಂದೆ ಇಲಾಖೆಗಳ ಅಧಿಕಾರಿಗಳು, 37 ಸಮಿತಿಗಳು ಸ್ವಯಂ ಸೇವಕರು. ಇದಕ್ಕೆಲ್ಲ ಮಕುಟ ಪ್ರಾಯವೆಂಬಂತೆ ಸ್ವತ್ಛತೆಯ ವಿಭಾಗ ದವರು ಎಲ್ಲರೂ ಸೇರಿ ಹಗಲು ರಾತ್ರಿ ಪಟ್ಟ ಪರಿಶ್ರಮದ ಪರಿಣಾಮವಾಗಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಅತ್ಯಂತಚೆನ್ನಾಗಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ. ತಾಲೂಕಿನ ಎಲ್ಲ ಮನೆಯ ವರು ಉತ್ಸವದಲ್ಲಿ ಪಾಲ್ಗೊಂಡ ಬಗ್ಗೆ ಅಭಿಮಾನವಿದೆ ಎಂದರು.
ನಳಿನ್ ಶ್ಲಾಘನೆ
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಾರ್ಕಳ ಸಹಿತ ನಾಡಿನ ಜನತೆ ಶಾಶ್ವತವಾಗಿ ನೆನಪಿಡುವಂತೆ ಕಾರ್ಕಳ ಉತ್ಸವ ನಡೆದಿದೆ. ಕನ್ನಡ, ಸಂಸ್ಕೃತಿ ಸಚಿವರಾಗಿ ಇದುವರೆಗೆ ಯಾರೂ ಮಾಡದ ಕಾರ್ಯವನ್ನು ಸುನಿಲ್ ಮಾಡಿದ್ದು, ಇಲಾಖೆಯ ಮಹತ್ವ ಹೆಚ್ಚಾಗಿದೆ ಎಂದು ಶ್ಲಾಘಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮೂಡುಬಿದಿರೆ ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ. ಸಿಇಒ ಡಾ| ನವೀನ್ ಭಟ್ ವೇದಿಕೆಯಲ್ಲಿದ್ದರು.
ಸಮ್ಮಾನ
ಬಾಲಪ್ರತಿಭೆ, ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಸೌಮ್ಯಾ ಪ್ರಭು, ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ, ಕಲಾವಿದೆ ವಂದನಾ ರೈ ಸಹಿತ ಹಲವರನ್ನು ಸಮ್ಮಾನಿಸಲಾಯಿತು.
ಪ್ರವೀಣ್ ಸಾಲ್ಯಾನ್ ಸ್ವಾಗತಿಸಿ, ಸಂಗಿತಾ ಕುಲಾಲ್ ನಿರೂಪಿಸಿದರು. ಶಿಕ್ಷಕ ವಸಂತ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸುಡುಮದ್ದು ಪ್ರದರ್ಶನ ನಡೆದು ಮೈದಾನವನ್ನು ನೂರಾರು ಸ್ವಯಂ ಸೇವಕರು ಏಕಕಾಲದಲ್ಲಿಸ್ವಚ್ಛಗೊಳಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.