10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ : ಕಿಕ್ಕಿರಿದ ಪ್ರೇಕ್ಷಕರು

ಉಪ ವೇದಿಕೆಗಳಲ್ಲಿಯೂ ಜನವೋ ಜನ

Team Udayavani, Mar 21, 2022, 3:24 PM IST

10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ

ಕಾರ್ಕಳ : ಕಾರ್ಕಳ ಉತ್ಸವದ ಪ್ರಯುಕ್ತ ಗಾಂಧಿ ಮೈದಾನ, ಸ್ವರಾಜ್‌ ಮೈದಾನ ಹಾಗೂ ನಗರದ ನಾಲ್ಕು ಉಪ ವೇದಿಕೆಗಳಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾ.20ರಂದು ರಾತ್ರಿ ವರ್ಣರಂಜಿತ ತೆರೆ ಬಿದ್ದಿದೆ.

ಗಾಂಧಿ ಮೈದಾನದ ವೇದಿಕೆಯಲ್ಲಿ ಮಾ.10ರಂದು ಯಕ್ಷರಂಗಾಯಣ ದೂತ ವಾಕ್ಯ ನಾಟಕ ಪ್ರದರ್ಶನದ ಮೂಲಕ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರ ಹತ್ತು ದಿನಗಳ ಕಾಲ ನಡೆದು ಸಾಂಸ್ಕೃತಿಕ ಲೋಕವನ್ನೆ ಸೃಷ್ಟಿಸಿತ್ತು. ಸ್ಥಳೀಯ ಕಲಾವಿದರಷ್ಟೇ ಅಲ್ಲದೆ ನಾದಸ್ವರ, ತುಳು ನೃತ್ಯ ರೂಪಕ, ಜನಪದ ವೈಭವ, ಮಕ್ಕಳ ಮಾಯಲೋಕ, ಬೊಂಬೆಯಾಟ, ಕೊಂಕಣಿ ಭಾವಗೀತೆ, ದೇಶಭಕ್ತಿ ಗೀತೆ, ತುಳುನಾಡ ಜನಪದ ವೈಭವ, ಕನ್ನಡ ಹಾಸ್ಯ, ಗುಜರಾತ್‌, ಮಧ್ಯಪ್ರದೇಶ, ಒಡಿಶಾ ರಾಜ್ಯಗಳ ಕಲಾವಿದರ ಜಾನಪದ ನೃತ್ಯಗಳು, ನಿನಾದ್‌ ಕೊಲ್ಹಾಪುರ ಮಹಾರಾಷ್ಟ್ರ ತಂಡದ ಜಾಗೋ ಹಿಂದೂಸ್ಥಾನಿ, ದೇಶಭಕ್ತಿಗೀತೆ ಗಮನ ಸೆಳೆದವು. ಯಕ್ಷ ವೈಭವ, ಗಾನ ನಾಟ್ಯ ಹಾಸ್ಯ ತಾಳಮದ್ದಲೆ, ಪ್ರಾಣೇಶ್‌ ಸಹಿತ ನಾಡಿನ ಪ್ರಸಿದ್ಧ ಹಾಸ್ಯ ಕಲಾವಿದರ ಹಾಸ್ಯ ಕಾರ್ಯಕ್ರಮ, ರಾಜಸ್ಥಾನದ ಚಡಯ್‌ ನೃತ್ಯ, ತೇರತಾಲಿ, ಕಾಶ್ಮೀರದ ರೌಫ್, ವಚನಾಗಿಯ, ಮಹಾರಾಷ್ಟ್ರದ ತರ್ಪಾ ನೃತ್ಯ, ತುಳು ನಾಟಕ, ಬಲೆ ತೆಲಿಪಾಲೆ, ಮಸ್ಕಿರಿ ಕುಡ್ಲದ -ತುಳು ಹಾಸ್ಯಗಳು, ಗಾಂಧಿ ಮೈದಾನದ ದಿ| ಗೋಪಾಲ ಭಂಡಾರಿ ವೇದಿಕೆಯಲ್ಲಿ ನಡೆದು ಕಲಾಸಕ್ತರನ್ನು ಮುದಗೊಳಿಸಿತು.

ಇದನ್ನೂ ಓದಿ :ಆಧುನಿಕತೆ ಭರಾಟೆಯಲ್ಲಿ ಸ್ವಂತಿಕೆ ಮಸುಕಾಗದಿರಲಿ: ಅಪ್ಪಣ್ಣ ಹೆಗ್ಡೆ

ಮಾ.18ರಿಂದ ಸ್ವರಾಜ್‌ ಮೈದಾನದಲ್ಲಿ ಸ್ವಾಂತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಜಯ್‌ ವಾರಿಯರ್‌ ಒಳಗೊಂಡ‌ ನಾಡಿನ ಹೆಸರಾಂತ ಹಿನ್ನೆಲೆ ಗಾಯಕರ ದೇಶಭಕ್ತಿಗೀತೆ ನೃತ್ಯ ವೈವಿಧ್ಯಗಳು ನಡೆದರೆ, ಮಾ.19ರಂದು ಪ್ರಸಿದ್ಧ ಕಲಾವಿದರಿಂದ ಸಂಗೀತ ರಸಸಂಜೆ ಮತ್ತು ನೃತ್ಯ ವೈವಿಧ್ಯಗಳು ಜರಗಿದವು. ಮಾ. 20ರಂದು ರಾತ್ರಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ, ಬೆಂಗಳೂರಿನ ಪ್ರಭಾತ್‌ ಕಲಾವಿದರಿಂದ ಕರುನಾಡ ವೈಭವ ನೆರವೇರಿತು. ಬಳಿಕ ಆಕರ್ಷಕ ಸುಡುಮದ್ದು ಪ್ರದರ್ಶನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು.

ಉಪವೇದಿಕೆಗಳಲ್ಲೂ ರಸದೌತಣ
ಮಾ.10ರಿಂದ 17ರ ತನಕ ಗಾಂಧಿ ಮೈದಾನ, ಮಾ.18ರಿಂದ 20ರ ತನಕ ಸ್ವರಾಜ್‌ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಬಸ್‌ಸ್ಟಾಂಡ್‌, ಜೋಡುರಸ್ತೆ, ಗೊಮ್ಮಟಬೆಟ್ಟ, ಕೋಟಿ ಚೆನ್ನಯ ಥೀಂ ಪಾರ್ಕ್‌ ಇಲ್ಲಿನ ಉಪವೇದಿಕೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯಗಳು ನಡೆದವು.

ಜನ ಪ್ರವಾಹ
ಸ್ವರಾಜ್‌ ಮೈದಾನದ ದಿ| ಜಸ್ಟೀಸ್‌ ಕೆ.ಎಸ್‌. ಹೆಗ್ಡೆ ವೇದಿಕೆಯಲ್ಲಿ ಮಾ.19ರಂದು ರಾತ್ರಿ ನಡೆದ ಸಂಗೀತ ರಸ ಸಂಜೆ, ಮತ್ತು ನೃತ್ಯ ವೈವಿಧ್ಯ ವೀಕ್ಷಿಸಲು ಎಲ್ಲೆಡೆಯಿಂದ ಲಕ್ಷಾಂತರ ಮಂದಿ ಆಗಮಿಸಿದ್ದರು, ಖ್ಯಾತ ಗಾಯಕರಾದ ಗುರುಕಿರಣ್‌, ವಿಜಯಪ್ರಕಾಶ್‌, ಹೇಮಂತ್‌, ಅನುರಾಧಾ ಭಟ್‌, ಶಮಿತಾ ಮಲಾ°ಡ್‌, ನಿಹಾಲ್‌ ತಾವ್ರೋ, ದೀಪಿಕಾ ಶ್ರೀಕಾಂತ್‌, ಹರ್ಷ, ಅಂಕಿತಾ ಚಂದು ಅವರ ಗಾಯನಕ್ಕೆ ಜನ ಮರುಳಾಗಿ ಹುಚ್ಚೆದ್ದು ಕುಣಿದರು. ಮೈದಾನ ತುಂಬಿ ತುಳುಕುತ್ತಿತ್ತು. ಪೊಲೀಸರು, ಸ್ವಯಂ ಸೇವಕರು ಕಿಕ್ಕಿರಿದ ಜನಸಂದಣಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಹರಸಾಹಸ ಪಡಬೇಕಾಯಿತು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.