Kaup: ಎಲ್ಲೂರು ಬಳಿ ಗುಡ್ಡ ಕುಸಿತ ಭೀತಿ
ಉಚ್ಚಿಲ -ಪಣಿಯೂರು- ಮುದರಂಗಡಿ ರಸ್ತೆ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ
Team Udayavani, Aug 13, 2024, 3:50 PM IST
ಕಾಪು: ಉಚ್ಚಿಲ – ಎಲ್ಲೂರು – ಮುದರಂಗಡಿ ರಸ್ತೆಯ ಎಲ್ಲೂರು ಬಳಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಕಳೆದ ಕೆಲವು ದಿನಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಎಲ್ಲೂರು ವಿಶ್ವೇಶ್ವರ ದೇವಸ್ಥಾನದ ಬಳಿಯಿಂದ ಸಾಗುವ ಲೋಕೋಪಯೋಗಿ ರಸ್ತೆಯ ಪಕ್ಕದಲ್ಲಿ ಸೇತುವೆ ಸಮೀಪದ ಎತ್ತರ ಪ್ರದೇಶದ ಗುಡ್ಡವು ರಸ್ತೆಯಂಚಿನವರೆಗೆ ಕುಸಿದಿದೆ.
ಗುಡ್ಡ ಕುಸಿತದ ಕಾರಣ ಗುಡ್ಡದ ಮಣ್ಣು ರಸ್ತೆಯ ಅಂಚಿನವರೆಗೂ ಬಿದ್ದಿದ್ದು ಮಳೆ ಕಡಿಮೆಯಾದ ಪರಿಣಾಮ ಗುಡ ಕುಸಿತಕ್ಕೆ ಸದ್ಯಕ್ಕೆ ಬ್ರೇಕ್ ಸಿಕ್ಕಿದೆ. ಇನ್ನಷ್ಟು ಜರಿದು ಬಿದ್ದಲ್ಲಿ ಮಣ್ಣಿನೊಂದಿಗೆ ಗುಡ್ಡದ ಮೇಲಿರುವ ಮರಗಳು ಕೂಡ ಕುಸಿದು ಬೀಳುವ ಅಪಾಯವಿದ್ದು ಹೀಗೆ ಆದಲ್ಲಿ ರಾ.ಹೆ. 66ರ ಉಚ್ಚಿಲ – ಪಣಿಯೂರು – ಎಲ್ಲೂರು – ಮುದರಂಗಡಿ ರಸ್ತೆಯಲ್ಲಿನ ಸಂಚಾರಕ್ಕೆ ತೊಡಕಾಗುವ ಸಾಧ್ಯತೆಗಳಿವೆ. ಗುಡ್ಡ ಕುಸಿತದ ಪ್ರದೇಶಕ್ಕೆ ತಾಗಿಕೊಂಡೇ ವಿದ್ಯುತ್ ಕಂಬಗಳೂ ಇದ್ದು ವಿದ್ಯುತ್ ಕಂಬ ಮತ್ತು ವಿದ್ಯುತ್ ಲೈನ್ಗೂ ಅಪಾಯವುಂಟಾಗುವ ಸಾಧ್ಯತೆಗಳಿವೆ.
ಮತ್ತೆ ಮಳೆ ಬಂದಲ್ಲಿ ಇನ್ನಷ್ಟು ಜರಿತದ ಭೀತಿ ಎದುರಾಗಿದ್ದು ಪೂರ್ಣ ಕುಸಿದು, ಅಪಾಯ ಎದುರಾಗುವ ಮೊದಲು ಇದಕ್ಕೊಂದು ತಾತ್ಕಾಲಿಕ ಪರಿಹಾರ ನೀಡುವುದು ಅತೀ ಅಗತ್ಯವಾಗಿದೆ.
ಅಪಾಯದ ಭೀತಿಯ ಬಗ್ಗೆ ಸ್ಥಳೀಯರು ಮತ್ತು ಪಣಿಯೂರು-ಎಲ್ಲೂರು ನಡುವಿನ ರಸ್ತೆ ಸಂಚಾರಿಗಳು ಈಗಾಗಲೇ ಎಲ್ಲೂರು ಗ್ರಾ.ಪಂ. ಗಮನಕ್ಕೆ ತಂದಿದ್ದು ಗ್ರಾ.ಪಂ. ಕೂಡಲೇ ಎಚ್ಚೆತ್ತುಕೊಂಡು ತುರ್ತು ಕೆಲಸ ಮಾಡಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಪರಿಶೀಲನೆ; ಮರಗಳು, ಮಣ್ಣು ತೆರವಿಗೆ ಪ್ರಯತ್ನ
ಎಲ್ಲೂರು ದೇವಸ್ಥಾನದ ಬಳಿಯ ರಸ್ತೆಯ ಗುಡ್ಡ ಕುಸಿತದ ವಿಚಾರವನ್ನು ಈಗಾಗಲೇ ಗಮನಿಸಿದ್ದು ಪರಿಶೀಲಿಸಲಾಗಿದೆ. ಇದು ಖಾಸಗಿಯವರಿಗೆ ಸೇರಿದ ಜಾಗವಾಗಿದ್ದು, ಗುಡ್ಡ ತೆರವುಗೊಳಿಸುವುದು ಅಸಾಧ್ಯದ ಮಾತಾಗಿದೆ. ಗುಡ್ಡದ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವಿಗಾಗಿ ಮರ ತೆರವು ಕಾರ್ಮಿಕರನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಮಳೆಯ ಸಂದರ್ಭದಲ್ಲಿ ಮರ ತೆರವು ಕಾರ್ಯಾಚರಣೆ ಅಪಾಯಕಾರಿಯಾಗಿ ಪರಿಣಮಿಸಲಿದ್ದು ಮಳೆ ಸಂಪೂರ್ಣವಾಗಿ ನಿಂತ ಬಳಿಕ ಕಾರ್ಮಿಕರನ್ನು ಗೊತ್ತುಪಡಿಸಿಕೊಂಡು ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸಿ, ಕುಸಿದ ಮಣ್ಣನ್ನು ತೆರವುಗೊಳಿಸಲಾಗುವುದು.
-ರವಿರಾಜ್ ರಾವ್ ಎಲ್ಲೂರು, ಅಧ್ಯಕ್ಷರು, ಎಲ್ಲೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.