![basavaraj rayareddy](https://www.udayavani.com/wp-content/uploads/2024/07/rayareddy-415x229.jpg)
Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ
Team Udayavani, May 19, 2024, 6:11 PM IST
![1-aaa](https://www.udayavani.com/wp-content/uploads/2024/05/1-aaa-2-620x361.jpg)
ಕಾಪು: ಬಾವಿಗೆ ಬಿದ್ದು ಮೇಲೆ ಬರಲಾಗದೆ ಜೀವ ಭಯದಿಂದ ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯನ್ನು ಯುವಕರು ರಕ್ಷಿಸಿ ಜೀವದಾನ ನೀಡಿದ ಘಟನೆ ಮೂಳೂರಿನಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಆಹಾರ ಅರಸುತ್ತಾ ಸಂಚಾರದಲ್ಲಿದ್ದ ನವಿಲು ಶನಿವಾರ ರಾತ್ರಿಯ ವೇಳೆಗೆ ಮೂಳೂರು ತಾರಿಬೆಟ್ಟುವಿನ ಸುಲೋಚನಾ ಕರ್ಕೇರ ಎಂಬವರ ಮನೆಯ ಬಾವಿಗೆ ಬಿದ್ದಿತ್ತು. ರವಿವಾರ ಬೆಳಗ್ಗೆ 5.30 ರ ವೇಳೆಗೆ ಬಾವಿಯಿಂದ ನೀರು ಎತ್ತಲು ಮನೆಯವರು ಬಂದಾಗ ಒದ್ದಾಡುತ್ತಿದ್ದ ನವಿಲನ್ನು ಗಮನಿಸಿ ಯುವಕರಿಗೆ ವಿಷಯ ತಿಳಿಸಿದ್ದರು.
ತತ್ಕ್ಷಣ ನಿದ್ದೆಯಿಂದ ಎದ್ದು ಬಂದ ಯುವಕರು ಯಾರಾದರೂ ಬಾವಿಗೆ ಇಳಿದು ನವಿಲನ್ನು ರಕ್ಷಿಸುವವರು ಸಿಗಬಹುದೇ ಎಂದು ಪ್ರಯತ್ನಿಸಿದ್ದು ಯಾರೂ ಸಿಗದೇ ಇದ್ದಾಗ ಸ್ವತಃ ತಾವೇ ಬಾವಿಯಿಂದ ನವಿಲನ್ನು ರಕ್ಷಿಸುವ ಪ್ರಯತ್ನಕ್ಕೆ ಕೈಹಾಕಿದರು.
ತಾರಿಬೆಟ್ಟುವಿನ ಅಭಿಷೇಕ್, ತೇಜಸ್, ಶೇಖರ್, ರೋಶನ್, ರಕ್ಷಿತ್, ರಿಶಿತ್, ಧನ್ವಿತ್, ಹರ್ಷಿತ್, ಕನಿಷ್ಕ್ ಮೊದಲಾದವರು ಜತೆ ಸೇರಿಸಿ ಬಾವಿಗೆ ಬುಟ್ಟಿ ಇಳಿಸಿ, ಕೋಲಿನ ಮೂಲಕ ನವಿಲನ್ನು ಬುಟ್ಟಿಗೆ ಬರುವಂತೆ ಮಾಡಿದ್ದು, ಬಳಿಕ ಶ್ರಮ ವಹಿಸಿ ಮೇಲಕ್ಕೆತ್ತಿದ್ದಾರೆ. ಸುಮಾರು ಒಂದೂ ಕಾಲು ಘಂಟೆಯ ಶ್ರಮದ ಬಳಿಕ ನವಿಲನ್ನು ಮೇಲಕ್ಕೆತ್ತಿದ್ದು ಮೇಲೆ ಬಂದ ನವಿಲು ಸ್ವಲ್ಪ ಹೊತ್ತು ತಿರುಗಾಡಿ ಬಳಿಕ ಹಾರಿ ಹೋಗಿದೆ.
ಟಾಪ್ ನ್ಯೂಸ್
![basavaraj rayareddy](https://www.udayavani.com/wp-content/uploads/2024/07/rayareddy-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![basavaraj rayareddy](https://www.udayavani.com/wp-content/uploads/2024/07/rayareddy-150x83.jpg)
Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ
![ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್](https://www.udayavani.com/wp-content/uploads/2024/07/virat-150x83.jpg)
Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್
![rohit sharma](https://www.udayavani.com/wp-content/uploads/2024/07/rohit-150x83.jpg)
Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ
![Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…](https://www.udayavani.com/wp-content/uploads/2024/07/11-150x90.jpg)
Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…
![ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!](https://www.udayavani.com/wp-content/uploads/2024/07/10-150x90.jpg)
ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.