ಭೂಲೋಕದ ಸ್ವರ್ಗ ಕೊಡಚಾದ್ರಿ ಪರ್ವತ

ಮಳೆಗಾಲದಲ್ಲಿ ಇಮ್ಮಡಿಯಾದ ಕೊಡಚಾದ್ರಿ ಸೌಂದರ್ಯ

Team Udayavani, Sep 4, 2019, 5:06 AM IST

kodachadri

ಕುಂದಾಪುರ: ಕೊಲ್ಲೂರು ಮೂಕಾಂಬಿಕೆಯು ಮೂಕಾಸುರನನ್ನು ಸಂಹರಿಸಿದ ಸ್ಥಳ, ಆದಿ ಶಂಕರಾಚಾರ್ಯರು ಧ್ಯಾನಸ್ಥರಾದ ಬೆಟ್ಟ, ಭೂಲೋಕದ ಸ್ವರ್ಗ, ಮಲೆನಾಡಿನ ಹೊನ್ನ ಶಿಖರ ಎಂಬೆಲ್ಲ ವಿಶೇಷಣಗಳಿಂದ ಕರೆಯಿಸಿಕೊಳ್ಳುವ ಅಪರೂಪದ ಪ್ರಾಣಿ – ಪಕ್ಷಿ ಸಂಕುಲ, ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಸಹಜ ಸುಂದರವಾದ ಕೊಡಚಾದ್ರಿ ಪರ್ವತಕ್ಕೆ ಕೊಡಚಾದ್ರಿಯೇ ಸಾಟಿ. ಭೂಲೋಕದ ಅಪ್ಸರೆ ಕೊಡಚಾದ್ರಿಯ ಸೌಂದರ್ಯ ಮಳೆಗಾಲದಲ್ಲಿ ಮತ್ತಷ್ಟು ಇಮ್ಮಡಿಯಾಗಿದೆ. ಬೆಟ್ಟವಿಡೀ ಹಬ್ಬಿರುವ ಹಚ್ಚ – ಹಸುರಿನ ಮರ – ಗಿಡಗಳ ಮಧ್ಯೆ ಚಾರಣ ಮಾಡುವುದೇ ಮನಸ್ಸು -ಕಣ್ಣಿಗೆ ಹಬ್ಬ.

ಪಶ್ಚಿಮಘಟ್ಟಗಳ ಸಾಲಿನಲ್ಲಿರುವ “ಕೊಡಚಾದ್ರಿ’ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1,343 ಮೀ. ಎತ್ತರದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ, ಕೊಲ್ಲೂರು ಸಮೀಪದ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಪರ್ವತವು ಮಳೆಗಾಲದಲ್ಲಿ ಮಂಜು ಮುಸುಕಿದ ವಾತಾವರಣ, ಹಸುರು – ಹಸುರಾದ ಪ್ರಕೃತಿ, ಬೆಟ್ಟ, ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಸಣ್ಣ – ಸಣ್ಣ ಜಲಪಾತಗಳಿಂದ ಸೊಬಗನ್ನು ಮತ್ತಷ್ಟು ಹೆಚ್ಚಿಸಿಕೊಂಡಂತೆ ಭಾಸವಾಗುತ್ತಿದೆ.

ಎಲ್ಲವನ್ನೂ ಮರೆಸುವ ಚಾರಣ
ಕೆಲಸದ ಒತ್ತಡ, ಮನಸ್ಸಿನ ಜಂಜಾಟ, ದೇಹಯಾಸ ಎಲ್ಲವನ್ನೂ ಮರೆಸುವ ಪ್ರಕೃತಿ ಸೌಂದರ್ಯ ಇಲ್ಲಿದೆ. ಚಾರಣಕ್ಕಿದು ಉತ್ತಮವಾದ ಸ್ಥಳ. ಇದು ಕ್ಲಿಷ್ಟಕರ ಬೆಟ್ಟವಾಗಿದ್ದರೂ, ಇಲ್ಲಿನ ಹಚ್ಚ – ಹಸುರಿನ ಮರ – ಗಿಡಗಳು, ಗಿರಿ- ಶಿಖರಗಳು ಈಗಂತೂ ತುಂಬಾನೇ ಚೆಂದವಾಗಿ ಕಾಣುತ್ತವೆ. ಸ್ನೇಹಿತರು ಅದರಲ್ಲೂ ಒಂದೇ ಮನಸ್ಥಿತಿಯವರು ಚಾರಣ ಮಾಡಿದರೆ, ತುಂಬಾ ಆನಂದಿಸಬಹುದು. ಎಲ್ಲ ಸೊತ್ತು, ಆಹಾರವನ್ನು ಅಗತ್ಯವಾಗಿ ತೆಗೆದುಕೊಂಡು ಹೋಗಿ.
– ಶಿವಾನಂದ ಸೂರ್ಗೋಳಿ, ಚಾರಣಿಗರು

ವಿಶೇಷವೇನು?
ಪಶ್ಚಿಮ ಘಟ್ಟದ ಸೌಂದರ್ಯದ ಜತೆಗೆ ಶಂಕರಾಚಾರ್ಯರು ಧ್ಯಾನಕ್ಕೆ ಕುಳಿತ ಸ್ಥಳದಲ್ಲಿ ಶಿಲೆಯಿಂದಲೇ ನಿರ್ಮಿಸಲಾದ ಕಲ್ಲಿನ ಮಂಟಪ “ಸರ್ವಜ್ಞ ಪೀಠ’ ವಿದೆ. ಪಕ್ಕದಲ್ಲೇ ನಿಸರ್ಗದತ್ತ “ಗಣೇಶನ ಗುಹಾಲಯ’ವಿದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ಕಣ್ಣಿಗೆ ರಸದೌತಣ. ಬೆಟ್ಟದ ಮೇಲಿನಿಂದ ಸುಮಾರು 5 ಕಿ.ಮೀ. ಕೆಳಗೆ ನಡೆದುಕೊಂಡು ಬಂದರೆ “ಹಿಡ್ಲುಮನೆ’ ಜಲಪಾತವಿದೆ. ಇಲ್ಲಿ ಮೂಕಾಂಬಿಕಾ ದೇವಿಯ ಮಂದಿರವೊಂದಿದೆ. ಪಕ್ಕದಲ್ಲೇ ಸುಮಾರು 40 ಅಡಿ ಎತ್ತರದ ಕಬ್ಬಿಣದ ಐತಿಹಾಸಿಕ ತ್ರಿಶೂಲವೊಂದಿದೆ.

ಹೋಗುವುದು ಹೇಗೆ?
ಕೊಲ್ಲೂರಿನಿಂದ ಜೀಪ್‌ಗ್ಳು ಬಾಡಿಗೆ ಮಾಡುತ್ತಿದ್ದು, ಕೊಲ್ಲೂರು, ನಿಟ್ಟೂರು ಮತ್ತು ಹೊಸನಗರದಿಂದ ಕೊಡಚಾದ್ರಿಯ ದೇವಸ್ಥಾನದವರೆಗೆ ಹೋಗುತ್ತವೆ. ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕಿ.ಮೀ. ಕಡಿದಾದ ಮಣ್ಣಿನ ರಸ್ತೆಯ ಮೂಲಕ ಸಂಚರಿಸಬೇಕು. ಕಾರು, ಬೈಕ್‌ ಇತ್ಯಾದಿ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ. ಚಾರಣ ಮಾಡುವುದಾದರೆ ಹೋಗಿ ಬರಲು ಸುಮಾರು 18 ಕಿ.ಮೀ. ಅಂತರವಿದೆ. ಚಾರಣಿಗರು ಅಲ್ಲೇ ಉಳಿದುಕೊಳ್ಳುವುದಾದರೆ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರಗಳಲ್ಲಿ ಮುಂಗಡ ಅನುಮತಿ ಪಡೆಯಬೇಕು. ಜೀಪ್‌ಗ್ಳು ರಾತ್ರಿ ಹೊತ್ತು ಅಲ್ಲಿ ಉಳಿದುಕೊಳ್ಳಲು ಅರಣ್ಯ ಇಲಾಖೆ ಅನುಮತಿಯಿಲ್ಲ. ಆದರೆ ಜೀಪ್‌ನಲ್ಲಿ ಹೋದವರು ಅಲ್ಲಿ ಉಳಿದುಕೊಂಡು, ಮರು ದಿನ ಬರಬಹುದು. ಹೋಗಿ ಬರುವುದಾದರೆ ಬೆಳಗ್ಗೆ 6 ರಿಂದ ಸಂಜೆ 6.30ರವರೆಗೆ ಮಾತ್ರ ಅನುಮತಿಯಿದೆ. ರಾತ್ರಿ ಉಳಿದುಕೊಳ್ಳುವವರು ಮುಂಚಿತವಾಗಿ ತಿಳಿಸಿದರೆ ಊಟದ ವ್ಯವಸ್ಥೆಯೂ ಇದೆ.

ಬರಹ: ಪ್ರಶಾಂತ್‌ ಪಾದೆ
ಚಿತ್ರ: ವಿ.ಬಿ. ಬೆಳ್ವೆ

ಟಾಪ್ ನ್ಯೂಸ್

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

14

Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್‌ ಪತ್ನಿ ರಾದ್ಧಾಂತ

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

sand

Kundapura: ಮರಳು ಅಕ್ರಮ ಸಾಗಾಟ ಪತ್ತೆ

4

Kundapura: ಕೆಲಸವಿಲ್ಲದೆ ಜುಗುಪ್ಸೆ: ಯುವಕ ಆತ್ಮಹತ್ಯೆ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

5

Koteshwara: ಎಂಬಿಬಿಎಸ್‌ ಮುಗಿಸಿದ್ದ ವಿದ್ಯಾರ್ಥಿ ಕೆರೆಗೆ ಹಾರಿ ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.