ಕೊಡೇರಿ: ಅವಧಿ ಮುಗಿದರೂ ಮುಗಿಯದ ಬ್ರೇಕ್ ವಾಟರ್ ಕಾಮಗಾರಿ
ಅರ್ಧದಷ್ಟೂ ಮುಗಿಯದ ಕಾಮಗಾರಿ ; ಈ ವರ್ಷದ ಜನವರಿಗೆ ಅಂತಿಮ ಗಡುವು
Team Udayavani, Jun 1, 2019, 6:00 AM IST
ಕೊಡೇರಿ ಬಂದರಿನ ದಕ್ಷಿಣ ಭಾಗದಲ್ಲಿ ನಡೆಯುತ್ತಿರುವ ಬ್ರೇಕ್ ವಾಟರ್ ಕಾಮಗಾರಿ.
ಕಿರಿಮಂಜೇಶ್ವರ: ಕೊಡೇರಿ ಮೀನುಗಾರಿಕಾ ಬಂದರಿನಲ್ಲಿ ಕಡಲ್ಕೊರೆತ ತಡೆಗಾಗಿ 33 ಕೋ.ರೂ. ವೆಚ್ಚದಲ್ಲಿ 2016 ರಲ್ಲಿ ಆರಂಭಗೊಂಡ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಯ ಗಡುವು ಈ ವರ್ಷದ ಜನವರಿಗೆ ಅಂತ್ಯವಾದರೂ, ಕಾಮಗಾರಿ ಮಾತ್ರ ಇನ್ನು ಅರ್ಧದಷ್ಟು ಕೂಡ ಮುಗಿದಿಲ್ಲ.
ಕೊಡೇರಿಯಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯಿಂದ ಬ್ರೇಕ್ ವಾಟರ್ ಕಾಮಗಾರಿಗೆ 33 ಕೋ.ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು, 2016 ರ ಡಿ. 22 ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇಲ್ಲಿನ ಬಂದರಿನ ದಕ್ಷಿಣ ಭಾಗ ಹಾಗೂ ಉತ್ತರ ಭಾಗದಲ್ಲಿ ತಲಾ 200 ಮೀಟರ್ ಉದ್ದದ ಬ್ರೇಕ್ ವಾಟರ್ ನಿರ್ಮಾಣ ಯೋಜನೆಯಿದೆ.
ಆದರೆ ಈಗ ದಕ್ಷಿಣ ಭಾಗದ ಕಾಮಗಾರಿ ಮಾತ್ರ ನಡೆಯುತ್ತಿದ್ದು, ಅದು ಕೂಡ 80- 100 ಮೀ. ಅಷ್ಟೇ ಮುಗಿದಿದೆ. ಅಂದರೆ ಈ ವರ್ಷದ ಜನವರಿಗೆ ಕಾಮಗಾರಿ ಮುಗಿಸಲು ಗಡುವು ನೀಡಿದರೂ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ ಅರ್ಧ ದಷ್ಟೂ ಕಾಮಗಾರಿ ಮುಗಿಸಿಲ್ಲ ಎನ್ನುವ ಆರೋಪ ಇಲ್ಲಿನ ಮೀನುಗಾರರದ್ದು.
ಹೂಳೆತ್ತಿಲ್ಲ
ಈ 33 ಕೋ.ರೂ. ಅನುದಾನದಲ್ಲಿ ಬಂದರಿನ ಎರಡೂ ಬದಿಯ ಬ್ರೇಕ್ ವಾಟರ್ ಮಧ್ಯದಲ್ಲಿರುವ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ಕೂಡ ತೆಗೆಯಬೇಕು ಎನ್ನುವ ಕರಾರು ಕೂಡ ಆಗಿದೆ. ಆದರೆ ಈವರೆಗೆ ಹೂಳು ತೆಗೆಯಲು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಮುಂದಾಗಿಲ್ಲ.
ಮೀನುಗಾರರಿಗೆ ಸಮಸ್ಯೆ
ಬ್ರೇಕ್ ವಾಟರ್ ಕಾಮಗಾರಿ ಮುಗಿಯದೇ ಇರುವುದರಿಂದ, ಅದಲ್ಲದೆ ಅಳಿವೆ ಭಾಗದಲ್ಲಿ ತುಂಬಿರುವ ಹೂಳನ್ನು ಕೂಡ ತೆಗೆಯದ ಕಾರಣ, ಮೀನುಗಾರರು ಸಮಸ್ಯೆ ಎದುರಿಸಲಿದ್ದಾರೆ. ಕೊಡೇರಿಯಲ್ಲಿ 9-10 ಮಾಟು ಬಲೆ ಜೋಡಿ, 100 ಕ್ಕೂ ಮಿಕ್ಕಿ ದೋಣಿಗಳಿದ್ದು, ಸುಮಾರು 400 – 500 ಮೀನುಗಾರರು ಇಲ್ಲಿದ್ದಾರೆ. ಇದು ಸಹಜ ಬಂದರು ಆಗಿರುವುದರಿಂದ ಉಪ್ಪುಂದ ಭಾಗದವರು ಇಲ್ಲಿಗೆ ಬರುತ್ತಾರೆ. ಇವರಿಗೆಲ್ಲ ಮುಂದಿನ ಮೀನುಗಾರಿಕಾ ಋತುವಿನಲ್ಲಿ ಸಮಸ್ಯೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Flipkart Big Billion Day ಸೆ. 27 ರಿಂದ ಆರಂಭ
FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.