Kota: ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

ಅಂತಾರಾಷ್ಟ್ರೀಯ ಪಂಜ ಕುಸ್ತಿಯಲ್ಲಿ ಚಿನ್ನ ಗೆದ್ದು ಮೂರನೇ ಬಾರಿ ಸ್ಪರ್ಧೆಗೆ ಅಣಿಯಾದ ಕ್ರೀಡಾ ಸಾಧಕ ಸುರೇಶ್‌ ಪಾಂಡೇಶ್ವರ್‌

Team Udayavani, Sep 24, 2024, 3:49 PM IST

7(1)

ಕೋಟ:  ಸಾಸ್ತಾನ ಸಮೀಪದ ಪಾಂಡೇಶ್ವರ ನಿವಾಸಿ ಸುರೇಶ ಬಿ. ಅವರಿಗೆ ಪೋಲಿಯೊದಿಂದಾಗಿ ಹುಟ್ಟಿನಿಂದಲೇ ಕಾಲುಗಳಲ್ಲಿ ಬಲವಿಲ್ಲ. ಆದರೆ, ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲಕ್ಕೆ ಮಾತ್ರ ಕೊರತೆ ಇಲ್ಲ.

ಕಾಲಿನಲ್ಲಿ ಶಕ್ತಿ ಇಲ್ಲದಿದ್ದರೇನಂತೆ, ಕೈಗಳಿವೆಯಲ್ಲ ಎಂದು ಬಾಹುಬಲದ ಮೇಲೆ ನಂಬಿಕೆ ಇಟ್ಟು ಅವರು ಪಂಜ ಕುಸ್ತಿ (ಆರ್ಮ್ ರೆಸ್ಲಿಂಗ್‌) ಕ್ರೀಡೆಯನ್ನು ಆರಿಸಿಕೊಂಡರು. ಅವರ ಸಾಧನೆ ಎಷ್ಟಿದೆ ಎಂದರೆ  ಈ ಬಾರಿ ವಿಕಲಚೇತನ ವಿಭಾಗದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.  2024ರ ಸೆ.30ರಿಂದ ಅ.10 ತನಕ  ಗ್ರೀಸ್‌ನಲ್ಲಿ ನಡೆಯುವ  ಅಂತಾರಾಷ್ಟ್ರೀಯ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ಸುರೇಶ್‌ ಬಟ್ಟೆಯಂಗಡಿಯಲ್ಲಿ ಉದ್ಯೋಗಿ. ಬಾಡಿಬಿಲ್ಡ್‌ ಬಗ್ಗೆ  ಸಾಕಷ್ಟು ಆಸಕ್ತಿ ಇವರಿಗಿದೆ.  ಆರ್ಮ್ ರೆಸ್ಲಿಂಗ್‌ ಬಗ್ಗೆ ಯೂಟ್ಯೂಬ್‌ನಲ್ಲಿ  ಅಧ್ಯಯನ ನಡೆಸುತ್ತಿದ್ದ ಸಹಪಾಠಿಯೊಬ್ಬ ನೀವು ಟ್ರೈ ಮಾಡಿ ಎಂದು  ಸಲಹೆ ನೀಡಿದ್ದ. ಅದನ್ನೇ ಒಪ್ಪಿಕೊಂಡ ಸುರೇಶ್‌ 2022ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಅದೇ ವರ್ಷ  ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ  ಸ್ಪರ್ಧೆಯಲ್ಲಿ ಎಡ ಕೈ ಹಾಗೂ ಬಲ ಕೈ ಎರಡೂ ವಿಭಾಗದಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಪಡೆದು  ಫ್ರಾನ್ಸ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಆದರೆ ಅರ್ಥಿಕ ಮುಗ್ಗಟ್ಟಿನಿಂದ ಪಂದ್ಯಾಟದಲ್ಲಿ ಭಾಗವಹಿಸಲಾಗಿರಲಿಲ್ಲ.

ಚಿನ್ನ ತಂದ ಕೀರ್ತಿವಂತ
2023ರ ಎಪ್ರಿಲ್‌ನಲ್ಲಿ  ರಾಜ್ಯ ಮಟ್ಟದಲ್ಲಿ ಗೆದ್ದು, ಮೇನಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್‌ ಶಿಪ್‌ ಎರಡು ಬೆಳ್ಳಿ ಪದಕ ಧರಿಸಿದರು.  ಅಕ್ಟೋಬರ್‌ನಲ್ಲಿ  ಮಲೇಶಿಯಾದಲ್ಲಿ  ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಬಲ ಮತ್ತು ಎಡ ಎರಡೂ ಕೈಗಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು.  ಈಗ ಮೂರನೇ ಬಾರಿಗೆ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಯಿಸಿ ಗ್ರೀಸ್‌ನಲ್ಲಿ ನಡೆಯುವ ಚಾಂಪಿಯನ್‌ಶಿಪ್‌ಗೆ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಭಾರತದ ಬೇರೆ-ಬೇರೆ ರಾಜ್ಯದಿಂದ 30 ಮಂದಿ ಈ ಸ್ಪರ್ಧೆಯಲ್ಲಿದ್ದಾರೆ. ಕರ್ನಾಟಕದಿಂದ ಸುರೇಶ್‌ ಒಬ್ಬರೇ.

ಆರ್ಥಿಕ ಬಲ ಬೇಕಾಗಿದೆ
ಹಣವಿಲ್ಲದ ಕಾರಣಕ್ಕಾಗಿ ಹಿಂದೆ ಫ್ರಾನ್ಸ್‌ ಕೂಟವನ್ನು ಮಿಸ್‌ ಮಾಡಿಕೊಂಡಿದ್ದ ಸುರೇಶ್‌ ಅವರಿಗೆ ಈ ಬಾರಿಯೂ ಅನಿಶ್ಚಿತತೆ ಕಾಡಿದೆ. ಕ್ರೀಡಾಪ್ರೇಮಿಗಳು ಸಹಕಾರ ನೀಡಿದರೆ ಇವರ ಕ್ರೀಡಾಯಾನ ಮುಂದುವರಿಯಲಿದೆ. ಕ್ರೀಡಾಭಿಮಾನಿಗಳು, ಸಹೃದಯರು ಅವರನ್ನು ಸಂಪರ್ಕಿಸಿ (ಸಂಪರ್ಕ ಸಂಖ್ಯೆ: 9986550577) ಬೆಂಬಲಿಸಬಹುದು.

ಏನಿದು ತೋಳ್ಬಲದ ಪಂಜ ಕುಸ್ತಿ?
ಪಂಜ ಕುಸ್ತಿಯಲ್ಲಿ ಇಬ್ಬರು ಸ್ಪರ್ಧಿಗಳು ಎದುರು-ಬದುರಾಗಿ ಕುಳಿತು ಅಥವಾ ನಿಂತು ಪರಸ್ಪರರು ಒಂದು ಕೈ ಬಳಸಿ ಬಲಪ್ರಯೋಗ ಮಾಡುತ್ತಾರೆ. ಯಾರು ಮೊದಲಿಗೆ ಎದುರಾಳಿಯ ಕೈ ಭಾಗಿಸುತ್ತಾರೋ ಅವರು ಪಂದ್ಯದ ವಿಜೇತರು. ಎರಡೂ ಕೈಗಳ ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಒಲಂಪಿಕ್‌ ಸೇರಿದಂತೆ, ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲೂ ಇದನ್ನು ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆ ಇದೆ. 2022ರಲ್ಲಿ ಮೈಸೂರು ದಸರಾದ ಕ್ರೀಡಾಕೂಟದಲ್ಲಿ ಸುರೇಶ್‌ ಚಿನ್ನದ ಪದಕ ಪಡೆದಿದ್ದರು.

ಟಾಪ್ ನ್ಯೂಸ್

CM-preess

MUDA Scam: ಹೈಕೋರ್ಟ್‌ ಅಭಿಯೋಜನೆಯ ತಿರಸ್ಕರಿಸಿ, ತನಿಖೆಗಷ್ಟೇ ಅನುಮತಿ ಕೊಟ್ಟಿದೆ: ಸಿಎಂ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

10-hubli

Hubli: ಸಿದ್ದರಾಮಯ್ಯ ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರೆಯದೆ ರಾಜೀನಾಮೆ ನೀಡಲಿ: ಜೋಶಿ

Belagavi: ಮೌಲ್ಯಮಾಪನ ಬಹಿಷ್ಕರಿಸಿ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಸದಸ್ಯರಿಂದ ಪ್ರತಿಭಟನೆ

Belagavi: ಮೌಲ್ಯಮಾಪನ ಬಹಿಷ್ಕರಿಸಿ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಸದಸ್ಯರಿಂದ ಪ್ರತಿಭಟನೆ

8-udupi

Udupi: ಶಾರ್ಟ್ ಸರ್ಕ್ಯೂಟ್; ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

Gujarat: 6 ವರ್ಷದ ವಿದ್ಯಾರ್ಥಿನಿ ಮೇಲೆ ರೇ*ಪ್‌ ಗೆ ಪ್ರತಿರೋಧ-ಹತ್ಯೆ: ಪ್ರಾಂಶುಪಾಲನ ಬಂಧನ

Gujarat: 6 ವರ್ಷದ ವಿದ್ಯಾರ್ಥಿನಿ ಮೇಲೆ ರೇ*ಪ್‌ ಗೆ ಪ್ರತಿರೋಧ-ಹತ್ಯೆ: ಪ್ರಾಂಶುಪಾಲನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-udupi

Udupi: ಶಾರ್ಟ್ ಸರ್ಕ್ಯೂಟ್; ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

Siddapura: ಬೀಡಾಡಿ ದನಗಳಿಂದ ವಾಹನ ಸವಾರರಿಗೆ ಆತಂಕ

Siddapura: ಬೀಡಾಡಿ ದನಗಳಿಂದ ವಾಹನ ಸವಾರರಿಗೆ ಆತಂಕ

5

Karkala: ಒಳಚರಂಡಿ ಅಲ್ಲ ಹೊರ ಚರಂಡಿಯಾಗಿಬಿಟ್ಟಿದೆ!

4

UGD: ಈ ಸಾರಿಯಾದರೂ ಮುಗಿಸಿಬಿಡಿ!; ಹೊಸ ಆಡಳಿತ ಹಳೆ ಸವಾಲು

ಅಂತಾರಾಷ್ಟ್ರೀಯ ಪಂಜ ಕುಸ್ತಿ:ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

ಅಂತಾರಾಷ್ಟ್ರೀಯ ಪಂಜ ಕುಸ್ತಿ:ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-preess

MUDA Scam: ಹೈಕೋರ್ಟ್‌ ಅಭಿಯೋಜನೆಯ ತಿರಸ್ಕರಿಸಿ, ತನಿಖೆಗಷ್ಟೇ ಅನುಮತಿ ಕೊಟ್ಟಿದೆ: ಸಿಎಂ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

16

Mangaluru: ಕೆಟ್ಟು ಹೋದ ಒಳಹಾದಿ, ಸಂಚಾರ ಸಂಕಷ್ಟ

Mangaluru: ಜಾಗ ಗುರುತಿಸಿದ್ದರೂ ತ್ಯಾಜ್ಯ ವಿಲೇವಾರಿಗೆ ಪರದಾಟ

Mangaluru: ಜಾಗ ಗುರುತಿಸಿದ್ದರೂ ತ್ಯಾಜ್ಯ ವಿಲೇವಾರಿಗೆ ಪರದಾಟ

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.