ಕುಂಭಾಸಿ ಮಕ್ಕಳ ಮನೆ: ಬುಟ್ಟಿ ತಯಾರಿಕೆ ಕಲಿಕೆ ಕಾರ್ಯಾಗಾರ
ಕೊರಗ ಸಮುದಾಯದ ಯುವಕರಿಗೆ ತರಬೇತಿ
Team Udayavani, Jul 18, 2019, 5:26 AM IST
ತೆಕ್ಕಟ್ಟೆ : ಕೊರಗ ಸಮುದಾಯ ಕಲೆ ಮತ್ತು ಸಂಸ್ಕೃತಿಗೆ ಅದರದ್ದೇ ಆದ ವಿಶಿಷ್ಟತೆ ಇದೆ. ಪ್ರಕೃತಿಯಲ್ಲಿನ ಲಭ್ಯ ವಸ್ತುಗಳನ್ನೇ ಬಳಸಿಕೊಂಡು ಸಾಂಪ್ರದಾಯಿಕ, ಆಕರ್ಷಕ ಶೈಲಿಯ ದಿನಬಳಕೆಯ, ಆಲಂಕಾರಿಕ ವಸ್ತುಗಳನ್ನು ತಯಾರಿಸುವುದರಲ್ಲಿ ಅವರು ಸಿದ್ಧಹಸ್ತರು. ಆಧುನಿಕ ಕಾಲದಲ್ಲಿ ಇಂತಹ ಉತ್ಪನ್ನಗಳ ನಿರ್ಮಾಣ, ಕೌಶಲ ಕ್ಷೀಣಿಸುತ್ತಿದ್ದು, ಅದರ ಉಳಿವಿಗಾಗಿ ಇಲ್ಲೊಂದು ಕಡೆ ಸದ್ದಿಲ್ಲದೆ ಕೆಲಸ ನಡೆಯುತ್ತಿದೆ.
ಬುಟ್ಟಿ ತಯಾರಿಕೆ ಕಲಿಕೆ
ಈ ನಿಟ್ಟಿನಲ್ಲಿ ಕೊರಗ ಶ್ರೇಯೋಭಿವೃದ್ಧಿ ಸಂಘ (ರಿ.) ಕುಂದಾಪುರ, ಜಿಲ್ಲಾ ಕೊರಗ ಸಂಘಟನೆ ಉಡುಪಿ, ಐಟಿಡಿಪಿ ಉಡುಪಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಮಕ್ಕಳ ಮನೆ ಕುಂಭಾಸಿ ಇವರ ಜಂಟಿ ಆಶ್ರಯದಲ್ಲಿ ಕುಂಭಾಸಿ ಮಕ್ಕಳ ಮನೆಯಲ್ಲಿ ಸಾಂಪ್ರದಾಯಿಕ ಹಾಗೂ ನವೀನ ವಿನ್ಯಾಸದ ಬುಟ್ಟಿ ತಯಾರಿಕಾ ಕಲಿಕೆ ಸನಿವಾಸ ನಡೆಯುತ್ತಿದ್ದು, ಈ ಶಿಬಿರಕ್ಕೆ ಜು.15ರಂದು ಚಾಲನೆ ದೊರಕಿದೆ.
ಸಂಪ್ರದಾಯಕ್ಕೆ ಆಧುನಿಕ ಸ್ಪರ್ಶ
ಕುಂದಾಪುರ ಹಾಗೂ ಉಡುಪಿ ತಾಲೂಕಿನ ಕೊರಗ ಸಮುದಾಯದ ಸುಮಾರು 15 ಮಂದಿಗೂ ಅಧಿಕ ಯುವಕ ಯುವತಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದು 1 ತಿಂಗಳು ಸಂಪನ್ಮೂಲ ವ್ಯಕ್ತಿಗಳಾದ ಬಾಬು ಕೊರಗ ಜಪ್ತಿ, ದೀಪಾ ಹಾಗೂ ಕೇರಳ ಮೂಲದ ಬಿದಿರು ಕಲಾವಿದರಿಂದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಪಡೆಯಲಿದ್ದಾರೆ. ಗೃಹೋಪಯೋಗಿ ವಸ್ತುಗಳಾದ ಹೂವಿನ ಕುಂಡ, ಲೈಟ್ಶೇಡ್, ಫ್ರೂಟ್ ಟ್ರೇ, ಹೇರ್ ಬ್ಯಾಂಡ್, ಬಿದಿರಿನ ಚಮಚ, ಪೆನ್ ಹೋಲ್ಡರ್, ಪಾತ್ರೆಗಳನ್ನು ಇರಿಸುವ ಬುಟ್ಟಿ ಮುಂತಾದ ವಸ್ತುಗಳನ್ನು ತಯಾರಿಸುವುದರೊಂದಿಗೆ ಹೊಸತನ ಹುಡುಕುವಲ್ಲಿ ಅಧ್ಯಯನ ಶೀಲರಾಗಿದ್ದಾರೆ.
ಮೂಲ ವಸ್ತುಗಳ ಕೊರತೆ
ನಮ್ಮ ಕುಲ ಕಸುಬು ಬುಟ್ಟಿ ತಯಾರಿಕೆ ಮಾಡುವಲ್ಲಿ ನನ್ನ ತಂದೆ ತಾಯಿ ಅತ್ಯಂತ ಪರಿಣತರಾಗಿದ್ದು ಅದರಲ್ಲಿಯೇ ಜೀವನ ನಿರ್ವಹಿಸುತ್ತಿದ್ದರು. ಕಷ್ಟವಿದ್ದರಿಂದ ಶಾಲೆಗೆ ಹೋಗಿಲ್ಲ. ಹಿಂದೆ ಕುಂದಾಪುರ ಸಂತೆಗೆ ಬಿದಿರಿನಿಂದ ಮಾಡಿದ ಬುಟ್ಟಿ, ಗೆರಸಿ, ಸಿಬಲು , ಹೆಡಿಗೆ ಮಾರಲು ಹೋಗುತ್ತಿದ್ದೆವು. ಕಳೆದ 20 ವರ್ಷಗಳಿಂದ ಬುಟ್ಟಿ ತಯಾರಿಸುತ್ತಿದ್ದೇವೆ. ಆದರೆ ಬದಲಾದ ಕಾಲದಲ್ಲಿ ತಯಾರಿಕೆಗೆ ಬೇಕಾದಂತಹ ಮೂಲ ವಸ್ತುಗಳ ಕೊರತೆ ಎದುರಿಸುತ್ತಿದ್ದೇವೆ.
-ಬಾಬು ಕೊರಗ ಜಪ್ತಿ, ಹಿರಿಯ ಸಂಪನ್ಮೂಲ ವ್ಯಕ್ತಿ
ಉಳಿಯುವಿಕೆಗಾಗಿ ಕಾರ್ಯಾಗಾರ
ಕೊರಗ ಸಮುದಾಯ ಕಲೆ ಮತ್ತು ಸಂಸ್ಕೃತಿಗಳ ಉಳಿವಿಗಾಗಿ ಶಿಕ್ಷಣದ ಜತೆಗೆ ಇಂತಹ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಇಂತಹ ಕಾರ್ಯಾಗಾರವನ್ನು ಆಯೋಜಿಸಿದ್ದೇವೆ. ಇಂತಹ ಕಲೆಗಳು ಅಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
-ಗಣೇಶ್ ವಿ., ಅಧ್ಯಕ್ಷರು, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್ ಸ್ಪೋರ್ಟ್ಸ್ ಮತ್ತೆ ಆರಂಭ
Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ
Basroor- ಕುಂದಾಪುರ ಹೆದ್ದಾರಿ ಬದಿ ಹುಲ್ಲು ಕಟಾವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.