ಕುಂದಾಪುರ: ತೆರಾಲಿ ಪೂರ್ವಭಾವಿ ಭಾತೃತ್ವ ಬಾಂಧವ್ಯ ದಿನ


Team Udayavani, Nov 26, 2019, 5:18 AM IST

bandavya-dina

ಕುಂದಾಪುರ: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅತ್ಯಂತ ಪುರಾತನವಾದ ಈ ವರ್ಷ 450 ವರ್ಷದ ಸಂಭ್ರಮಾಚರಣೆಯ ಪವಿತ್ರ ರೋಜರಿ ಮಾತೆಗೆ ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನಡೆಯುವ ಕೊಂಪ್ರಿ ಆಯ್ತಾರ್‌ ಭಾತೃ ಬಾಂಧವ್ಯ ದಿನವನ್ನು ವಿಶ್ವಾಸದ ಯಾತ್ರೆಯಲ್ಲಿ ಯೇಸು ಪ್ರಭುವಿನ ಜತೆ ಎಂಬ ಧ್ಯೇಯದೊಂದಿಗೆ ಪರಮ ಪ್ರಸಾದದ ಆರಾಧನೆ ರವಿವಾರದಂದು ನಡೆಯಿತು.

ರೋಜರಿ ಮಾತಾ ದೇವಾಲಯದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ಅಪಾರ ಭಕ್ತರು ಮತ್ತು ಅನೇಕ ಧರ್ಮದ ಭಗಿನಿಯರು ಬಣ್ಣದ ಮೇಣದ ಬತ್ತಿಗಳನ್ನು ಬೆಳಗಿಸಿದರು. ಪರಮ ಪ್ರಸಾದದ ಪುರಮೆರವಣಿಗೆಯು ಭಕ್ತಿ ಗಾಯನ, ಸಂಗೀತ, ಬ್ಯಾಂಡ್‌, ಬಣ್ಣ ಬಣ್ಣದ ಕೊಡೆಗಳ ಜತೆ ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದೊಂದಿಗೆ ನೆರವೇರಿತು. ಸಂತ ಮೇರಿಸ್‌ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನಡೆಯಿತು.

ಧಾರ್ಮಿಕ ವಿಧಿಯನ್ನು ನಡೆಸಿದ ಶಿವಮೊಗ್ಗ ಧರ್ಮಪ್ರಾಂತ್ಯದ ಕಬ್ಳೆ ಚರ್ಚ್‌ನ ಧರ್ಮಗುರು ಫಾ| ರಿಚಾರ್ಡ್‌ ಪಾಯ್ಸ , ದ್ರವ್ಯ ಮತ್ತು ಯೇಸು ಸ್ವಾಮಿಗೆ ಜತೆ ಜತೆಯಾಗಿ ನಾವು ಸೇವೆ ಮಾಡಲು ಸಾಧ್ಯವಿಲ್ಲ. ಪ್ರಾಪಂಚಿಕ ಸುಖದ ಜತೆ ಯೇಸುವಿನ ಭಕ್ತಿ ಆಚರಿಸಲು ಅಸಾಧ್ಯ. ಅಲ್ಲಿ ಪರಿಶುದ್ಧ ವಿಶ್ವಾಸ ಇರುವುದಿಲ್ಲ. ನಮ್ಮ ಪರಿಶುದ್ಧ ವಿಶ್ವಾಸಕ್ಕಾಗಿ ಯೇಸು ಸ್ವಾಮಿ ಕಾಯುತ್ತಿದ್ದಾರೆ. ನಾವು ನಮ್ಮ ಜೀವಿತದಲ್ಲಿ ಯೇಸುವಿಗೆ ಮೊದಲ ಆದ್ಯತೆ ನೀಡಬೇಕು. ಜೀವ-ಮರಣ, ನ್ಯಾಯ-ಅನ್ಯಾಯ, ನೀತಿ-ಅನೀತಿ ಇದರಲ್ಲಿ ಯಾವುದು ಉತ್ತಮವೆಂದು ಆಯ್ಕೆ ಮಾಡಿಕೊಳ್ಳುವುದು ನಿಮ್ಮದಾಗಿದೆ ಎಂದು ಸಂದೇಶ ನೀಡಿದರು.

ನವೆಂಬರ್‌ ನಾಲ್ಕನೇ ರವಿವಾರ ಪ್ರಪಂಚಾದ್ಯಂತ ಯೇಸುವನ್ನು ಕ್ರಿಸ್ತ ರಾಜನೆಂಬ ಹಬ್ಬ ಆಚರಿಸಲು ಪರಮ ಪ್ರಸಾದದ ಸಂಭ್ರಮ ಆಚರಿಸಲು ಆರಂಭವಾಗಿ ಕೆಲವು ದಶಕಗಳಾದವು. ಆದರೆ 450 ವರ್ಷ ಇತಿಹಾಸ ಇರುವ ಕುಂದಾಪುರ ಕ್ರೈಸ್ತ ಪವಿತ್ರ ಸಭೆ ಇದಕ್ಕಿಂತ ಹಿಂದೆಯೇ ಹಲವಾರು ವರ್ಷಗಳ ಮೊದಲೇ ನವೆಂಬರ್‌ ನಾಲ್ಕನೆ ರವಿವಾರ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿ ತೆರಾಲಿಯ ಪೂರ್ವಭಾವಿಯಾಗಿ ಭಾÅತೃ ಬಾಂಧವ್ಯದ ರವಿವಾರ ಹಾಗೂ ಪರಮಪ್ರಸಾದದ ಸಂಭ್ರಮ ಆಚರಿಸುವುದು ನಡೆಯುತ್ತ ಬಂದಿದೆ.

ಈ ಧಾರ್ಮಿಕ ವಿಧಿಯ ನೆರವೇರಿಕೆಯಲ್ಲಿ ಕುಂದಾಪುರ ರೋಜರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಫಾ| ಸ್ಟ್ಯಾನಿ ತಾವ್ರೊ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ವಂದಿಸಿದರು. ಸಹಾಯಕ ಧರ್ಮಗುರು ಫಾ| ವಿಜಯ್‌ ಡಿ’ಸೋಜಾ ದಿನದ ಮಹತ್ವ ತಿಳಿಸಿದರು. ಸಂತ ಮೇರಿಸ್‌ ಜೂ.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಫಾ| ಪ್ರವೀಣ್‌ ಅಮೃತ್‌ ಮಾರ್ಟಿಸ್‌ ಸಹಕರಿಸಿದರು.

ಈ ಪ್ರಾರ್ಥನ ವಿಧಿಯಲ್ಲಿ ಹಲವು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್‌ ಡಿ’ಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್‌ ಡಿ’ಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿ’ಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.