ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಕಾರ್ಮಿಕರ ದಿನ ವಿಶೇಷ

Team Udayavani, May 1, 2024, 7:25 AM IST

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಕಾರ್ಕಳ: ಯಾವುದೇ ಅಂಗ ಸ್ವಲ್ಪ ಊನವಾದರೂ ಬದುಕೇ ಮುಗಿಯಿತು ಎಂದುಕೊಳ್ಳುವವರೇ ಹೆಚ್ಚು. ಅಂಥವರ ಎದುರು ಒಂದು ಕಾಲೇ ಇಲ್ಲದಿದ್ದರೂ ಬದುಕಿನ ಗುರಿ ಮುಟ್ಟಲು ಛಲದಿಂದ ಬದುಕು ನಡೆಸುತ್ತಿರುವ ಸ್ವಾವಲಂಬಿಯ ಪರಿಚಯ ಇಲ್ಲಿದೆ. ಇದು ಮೇ ಒಂದು -ಕಾರ್ಮಿಕ ದಿನದ ವಿಶೇಷ.

ಅವರ ಹೆಸರು ನಾರಾಯಣ ನಾಯಕ್‌. ಹಿರ್ಗಾನ ಗ್ರಾಮದ ಶಿವನಗರ ಸ.ಹಿ.ಪ್ರಾ. ಶಾಲೆ ಬಳಿಯ 5 ಸೆಂಟ್ಸ್‌ ಕಾಲನಿಯಲ್ಲಿ ವಾಸ. ಕೂಲಿಯೇ ಜೀವನಕ್ಕೆ ಆಧಾರ.

ನಾರಾಯಣ ಅವರು ಪತ್ನಿ ನಳಿನಿ ನಾಯಕ್‌ ಜತೆಗೂಡಿ ಕೂಲಿ ಕೆಲಸ ಮಾಡುತ್ತ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದರು. ಬಡತನವಿದ್ದರೂ ಸಂತೃಪ್ತ ಕುಟುಂಬವಾಗಿತ್ತು. ಆದರೆ 20 ವರ್ಷಗಳ ಹಿಂದೆ ಸಂಭವಿಸಿದ ದುರಂತ ಅವರ ಅವರ ಬದುಕನ್ನೇ ಕಂಗೆಡಿಸಿತ್ತು. ನಾರಾಯಣ ಅವರು ಲಾರಿಗೆ ಮರದ ದಿಮ್ಮಿ ಪೇರಿಸಿಡುವ ಕೆಲಸ ಮಾಡುತ್ತಿದ್ದಾಗ ಬೃಹತ್‌ ದಿಮ್ಮಿ ಎಡಕಾಲಿನ ಮೇಲೆ ಬಿದ್ದು ಎಲುಬುಗಳು ಪುಡಿಯಾದವು. ಶಸ್ತ್ರಚಿಕಿತ್ಸೆ ಮಾಡಿಸಿದ‌ರೂ ಪ್ರಯೋಜನವಾಗಲಿಲ್ಲ. ತಿಂಗಳ ಬಳಿಕ ಊನ ಹೆಚ್ಚಾದಾಗ ವೈದ್ಯರು ಕಾಲನ್ನು ಕತ್ತರಿಸಬೇಕಾದ ಅನಿವಾರ್ಯದ ಬಗ್ಗೆ ತಿಳಿಸಿದರು. ಕಾಲನ್ನು ಕಳೆದುಕೊಂಡ ನಾರಾಯಣ ಶಾಶ್ವತ ಅಂಗವಿಕಲರಾದರು. ಬದುಕಿನ ಬಂಡಿಯೂ ಮಗುಚಿತು. ಹಾಗೆಂದು ಕೊರಗುತ್ತ ಕುಳಿತರೆ ಹೊಟ್ಟೆ ತುಂಬಬೇಕಲ್ಲ. ಕೆಲವೇ ದಿನಗಳಲ್ಲೇ ಖನ್ನತೆಯಿಂದ ಹೊರಬಂದು ಬದುಕುವ ಉತ್ಸಾಹ ತೋರಿದರು. ನಿಧಾನವಾಗಿ ಕೆಲಸ ಆರಂಭಿಸಿದರು.

ಅವರಿಗೀಗ 65ರ ವಯಸ್ಸು. ದೇಹದ ಶಕ್ತಿ ಕುಂದಿದೆ. ಆದರೆ ಉತ್ಸಾಹ ಕುಂದಿಲ್ಲ. ಎಷ್ಟೇ ಎತ್ತರದ ಮರವಿರಲಿ, ಕ್ಷಣಾರ್ಧದಲ್ಲಿ ಏರುವಷ್ಟು ನೈಪುಣ್ಯ ಸಾಧಿಸಿದ್ದಾರೆ. ಚಕಚಕನೆ ಮರವೇರಿ ತೆಂಗು, ಅಡಿಕೆ ಕೀಳಬಲ್ಲರು. ಸೌದೆ ಒಡೆಯುವುದು, ತೆಂಗು, ಅಡಿಕೆ ಕಾಯಿ ಕೀಳುವುದ, ಮರಗಳ ಬಿಡಿಸುವುದ, ಹಟ್ಟಿಯ ಗೊಬ್ಬರ ಬಿಡಿಸುವುದು, ನಳ್ಳಿ ನೀರಿನ ಪೈಪ್‌ಗ್ಳಿಗಾಗಿ ಹೊಂಡ ತೋಡುವುದು…ಹೀಗೆ ಎಲ್ಲ ಕೆಲಸವನ್ನೂ ನಿರ್ವಹಿಸತೊಡಗಿದ್ದಾರೆ. ಆ ಮೂಲಕ ಬದುಕಿನ ಬಂಡಿಯ ನಡೆಸುತ್ತಿದ್ದಾರೆ. ಹಾಗಾಗಿ ಇವರ ಬಂಡಿಗೆ ಆತ್ಮವಿಶ್ವಾಸ ಹಾಗೂ ಛಲವೇ ಚಕ್ರಗಳು. ಜೀವನಾಸಕ್ತಿ ಹಾಗೂ ಉತ್ಸಾಹ ಇನ್ನೆರಡು ಚಕ್ರಗಳಾಗಿ ಸೇರಿ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತಿದೆ. ಇರುವುದೊಂದೇ ಭೂಮಿ ಎಂಬಂತೆ ಇರುವುದೊಂದೇ ಬದುಕು. ಅದನ್ನು ಪ್ರೀತಿಸಬೇಕು, ಬದುಕಬೇಕು ಎನ್ನುತ್ತಾರೆ ನಾರಾಯಣ.

ಶ್ರಮಿಕ ಕುಟುಂಬ
ನಾರಾಯಣ ದಂಪತಿಗೆ ಪುತ್ರ, ಮೂವರು ಪುತ್ರಿಯರು ಸೇರಿ ನಾಲ್ವರು ಮಕ್ಕಳು. ಪತ್ನಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪುತ್ರ ಕೂಡ ಅಟೋ ರಿಕ್ಷಾ ಓಡಿಸಿ ಮನೆಯ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗುತ್ತಿದ್ದಾರೆ. ಕುಟುಂಬವು ನಾರಾಯಣ ಅವರ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿದೆ. ಅಪಘಾತವಾಗಿದ್ದರೂ ಅವರಿಗೆ ಯಾವುದೇ ಪರಿಹಾರ ದೊರಕಿಲ್ಲ. ಸರಕಾರದಿಂದ ಮಾಸಾಶನ ಬಿಟ್ಟರೆ ಬೇರೆ ಯಾವುದೇ ಆರ್ಥಿಕ ನೆರವು ಈ ಕುಟುಂಬಕ್ಕೆ ಸಿಕ್ಕಿಲ್ಲ.

-ಬಾಲಕೃಷ್ಣ ಭೀಮಗುಳಿ

 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.