MAHE; ಎಫ್ಐಸಿಸಿಐ ‘ವರ್ಷದ ಅತ್ಯುತ್ತಮ ವಿವಿ ಪ್ರಶಸ್ತಿ’ ಪಡೆದ ಮಾಹೆ


Team Udayavani, Oct 19, 2024, 8:44 PM IST

1-weqwewqewq

ಮಣಿಪಾಲ: 19 ನೇ ಎಫ್ಐಸಿಸಿಐ  ಉನ್ನತ ಶಿಕ್ಷಣ ಶೃಂಗಸಭೆ 2024 ರಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಗೆ (MAHE) ಪ್ರತಿಷ್ಠಿತ ”ಎಫ್ ಐಸಿಸಿಐ ವರ್ಷದ ಅತ್ಯುತ್ತಮ ವಿಶ್ವವಿದ್ಯಾಲಯ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ನವದೆಹಲಿಯ ಅಂಬೇಡ್ಕ ರ್ ಇಂಟರ್ ನ್ಯಾಶನಲ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ  ಭಾರತದ ಬ್ರಿಟಿಷ್ ಹೈ ಕಮಿಷನರ್ ಲಿಂಡಿ ಕ್ಯಾಮರೂನ್, ಎಫ್ಐಸಿಸಿಐ ಯ ಮಹಾನಿರ್ದೇಶಕರಾದ ಜ್ಯೋತಿ ವಿಜ್, ಮತ್ತು ಸಿಂಬಯೋಸಿಸ್ ಇಂಟರ್‌ನ್ಯಾಶನಲ್ ಯೂನಿವರ್ಸಿಟಿಯ ಸಹಕುಲಾಧಿಪತಿ  ಡಾ.ವಿದ್ಯಾ ಯರ್ವಾಡೇಕರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಹೆ  ಪರವಾಗಿ ಸಹ ಕುಲಪತಿ(ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ್ ಅವರು ಮಾಹೆಯ ವಿಶೇಷ ನಿಯೋಗದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ನಿಯೋಗದಲ್ಲಿಎಂಐಟಿ ಮಣಿಪಾಲದ ಪ್ರೊ.ವಿನೋದ್ ಕಾಮತ್, ಟ್ಯಾಪ್ಮಿ ಮಣಿಪಾಲದ ಡಾ.ಗುರುದತ್ ನಾಯಕ್, ಹಿಲ್ಡಾ ಕರ್ನೆಲಿಯೊ, ಮಾಹೆ ಮಣಿಪಾಲ ಮಾರ್ಕೆಟಿಂಗ್ ಸಹಾಯಕ ನಿರ್ದೇಶಕಿ ಅರ್ಚನಾ ನಾಯಕ್ ಮತ್ತು ಮಾಹೆ ಬೆಂಗಳೂರಿನ ಸಹಾಯಕ ನಿರ್ದೇಶಕಿ ದಿವ್ಯ ದರ್ಶಿನಿ ಕೆ. ಉಪಸ್ಥಿತರಿದ್ದರು.

ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಪ್ರಶಸ್ತಿ ಪಡೆದ ಕುರಿತು ಸಂತಸ ಹಂಚಿಕೊಂಡಿದ್ದು “ಮಾಹೆಯಲ್ಲಿ, ನಾವು ಜ್ಞಾನವನ್ನು ನೀಡುವುದರ ಜತೆಗೆ ಜಗತ್ತಿನಲ್ಲಿ ಮಹತ್ವದ ಬದಲಾವಣೆಯನ್ನು ಮಾಡಬಲ್ಲ ವ್ಯಕ್ತಿಗಳನ್ನು ರೂಪಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತೇವೆ. ಈ ಪ್ರಶಸ್ತಿಯು ನಮ್ಮಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸಂಸ್ಥೆಯನ್ನು ಮುನ್ನಡೆಸುವ ದೃಷ್ಟಿಕೋನ ಮತ್ತು ನಾಯಕತ್ವವು ನಮ್ಮ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬಂದಿಗಳಿಗೆ ಅರ್ಪಿಸುತ್ತೇವೆ. ಅವರ ಸಮರ್ಪಣೆ ಮತ್ತು ಪರಿಶ್ರಮವು ಮಾಹೆಯನ್ನು ಜಾಗತಿಕ ಖ್ಯಾತಿಯ ಸಂಸ್ಥೆಯನ್ನಾಗಿ ಮಾಡಿದೆ” ಎಂದರು.

ಉಪಕುಲಪತಿ  ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಸಂಭ್ರಮ ಹಂಚಿಕೊಂಡು “ಈ ಪ್ರಶಸ್ತಿಯು ಪ್ರತಿಯೊಬ್ಬ ಸದಸ್ಯರ ಅವಿರತ ಶ್ರೇಷ್ಠತೆಯ ಅನ್ವೇಷಣೆಗೆ ಸಾಕ್ಷಿಯಾಗಿದೆ. ಮಾಹೆ ಸಮುದಾಯದ ನಾವೀನ್ಯತೆ, ಸಂಶೋಧನೆ ಮತ್ತು ಶೈಕ್ಷಣಿಕಪ್ರತಿಭೆಯನ್ನು ಬೆಳೆಸುವ ನಮ್ಮ ಬದ್ಧತೆಯು ಎಫ್ ಐ ಸಿ ಸಿ ಐ  ಯಿಂದಗುರುತಿಸಲ್ಪಟ್ಟಿರುವುದಕ್ಕೆ ನಾವು ಅಪಾರವಾಗಿ ಹೆಮ್ಮೆಪಡುತ್ತೇವೆ ಮತ್ತುಈ ಪುರಸ್ಕಾರವು ಉನ್ನತ ಶಿಕ್ಷಣದಲ್ಲಿ ಹೊಸ ಮಾನದಂಡಗಳನ್ನುಸ್ಥಾಪಿಸಲು ನಮಗೆ ಸ್ಫೂರ್ತಿ ನೀಡುತ್ತದೆ.ಶೈಕ್ಷಣಿಕ ಉತ್ಕೃಷ್ಟತೆ, ನವೀನ ಅಭ್ಯಾಸಗಳು, ಅಧ್ಯಾಪಕರ ಅಭಿವೃದ್ಧಿ, ವಿದ್ಯಾರ್ಥಿ ತೊಡಗಿಸಿಕೊಳ್ಳುವಿಕೆ ಮತ್ತು ಸಮಾಜದ ಬೆಳವಣಿಗೆಗೆಕೊಡುಗೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ವಿಶ್ವವಿದ್ಯಾಲಯಗಳನ್ನು ಪ್ರಶಸ್ತಿಗುರುತಿಸುತ್ತದೆ. ಸಂಶೋಧನೆ, ಜಾಗತಿಕ ಸಹಯೋಗಗಳು ಮತ್ತುಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾಹೆಯ ನಿರಂತರದಾಪುಗಾಲುಗಳು ಈ ಪ್ರತಿಷ್ಠಿತ ಪುರಸ್ಕಾರವನ್ನು ಗಳಿಸುವಲ್ಲಿ ಮಹತ್ವದಪಾತ್ರವನ್ನು ವಹಿಸಿವೆ” ಎಂದರು.

ಟಾಪ್ ನ್ಯೂಸ್

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು

1-navyaa

BJP; ವಯನಾಡ್ ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್ ಕಣಕ್ಕೆ

13

Job Fair : ಶಿರೂರು ಗುಡ್ಡ ಕುಸಿತದಲ್ಲಿ ಪಾಲಕರನ್ನು ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ

cOurt

Mangaluru: ಅಪ್ರಾಪ್ತೆಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಆರೋಪ ಸಾಬೀತು, ಶಿಕ್ಷೆ ಪ್ರಕಟ

BJP 2

By-Election; ಶಿಗ್ಗಾವಿಗೆ ಭರತ್, ಸಂಡೂರಿಗೆ ಬಂಗಾರು ಹನುಮಂತು: ಬಿಜೆಪಿ ಘೋಷಣೆ

JMM-Congress

Jharkhand Polls: ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಮೈತ್ರಿ ಅಂತಿಮ

1-a-vasu

Vasundhra Oswal; ಭಾರತೀಯ ಬಿಲಿಯನೇರ್ ನ ಪುತ್ರಿ ಉಗಾಂಡಾದಲ್ಲಿ ವಶಕ್ಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Manipal: ಗಾಂಜಾ ಸೇವನೆ: ಓರ್ವ ಅರೆಸ್ಟ್‌  

Malpe: ಅಕ್ರಮ ಮರಳು ವಶ; ಆರೋಪಿಗಳು ಪರಾರಿ

Malpe: ಅಕ್ರಮ ಮರಳು ವಶ; ಆರೋಪಿಗಳು ಪರಾರಿ

6

Badanidiyoor: ಆತಂಕ ಮೂಡಿಸಿದ ಆಗಂತುಕ 

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Udupi: Scooter caught fire near petrol pump

Udupi: ಪೆಟ್ರೋಲ್‌ ಪಂಪ್‌ ಬಳಿಯೇ ಹೊತ್ತಿ ಉರಿದ ಸ್ಕೂಟರ್‌; ತಪ್ಪಿದ ಭಾರೀ ಅನಾಹುತ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

22

Aranthodu: ಲಾರಿ -ರಿಕ್ಷಾ ಢಿಕ್ಕಿ: ದಂಪತಿಗೆ ಗಂಭೀರ ಗಾಯ

Life sentence: ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಹತ್ಯೆ ಪ್ರಕರಣ: ಜೀವಾವಧಿ ಶಿಕ್ಷೆ ಪ್ರಕಟ

Life sentence: ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಹತ್ಯೆ ಪ್ರಕರಣ: ಜೀವಾವಧಿ ಶಿಕ್ಷೆ ಪ್ರಕಟ

ಎಂಎಸ್‌ಇಝಡ್‌: ಕಾಣೆಯಾಗಿದ್ದ ಭದ್ರತಾ ಸಿಬಂದಿ ಆತ್ಮಹತ್ಯೆ

ಎಂಎಸ್‌ಇಝಡ್‌: ಕಾಣೆಯಾಗಿದ್ದ ಭದ್ರತಾ ಸಿಬಂದಿ ಆತ್ಮಹತ್ಯೆ

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು

ಮಂಗಳೂರಿನಲ್ಲಿ ರಕ್ಷಿಸಲ್ಪಟ್ಟಿದ್ದ ಮದ್ದೂರಿನ ಮಹಿಳೆ 15 ವರ್ಷ ಬಳಿಕ ಕುಟುಂಬ ಸೇರಿದರು! 

ಮಂಗಳೂರಿನಲ್ಲಿ ರಕ್ಷಿಸಲ್ಪಟ್ಟಿದ್ದ ಮದ್ದೂರಿನ ಮಹಿಳೆ 15 ವರ್ಷ ಬಳಿಕ ಕುಟುಂಬ ಸೇರಿದರು! 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.