![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Aug 1, 2022, 1:37 AM IST
ಮಲ್ಪೆ: ಈಗ ಪುಷ್ಯ ನಕ್ಷತ್ರವಾದರೂ ಕರಾವಳಿಯಲ್ಲಿ ಮಳೆ ಇಲ್ಲ. ರವಿವಾರ ಶುಭ್ರ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಮಲ್ಪೆ ಮತ್ತು ಉಳಿದೆಡೆಯ ಬೀಚ್ಗಳಿಗೆ ಜನರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಬಾರಿ ಮಳೆಗಾಲದಲ್ಲೂ ವಾರಾಂತ್ಯ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿದ್ದರು.
ಶನಿವಾರ, ರವಿವಾರ ಎರಡೂ ದಿನ ಮಳೆ ಇಲ್ಲದೆ ಶುಭ್ರ ವಾತಾವರಣ ಇದ್ದುದರಿಂದ ಪ್ರವಾಸಿಗರ ಜತೆಗೆ ಸ್ಥಳೀಯರು ಕೂಡ ಕಡಲ ತೀರಕ್ಕೆ ಆಗಮಿಸಿದ್ದರು. ನೆಟ್ ಅಳವಡಿಸಿರುವುದರಿಂದ ಆಗಮಿಸಿದ ಜನರು ದೂರದಿಂದಲೇ ಸಮುದ್ರವನ್ನು ವೀಕ್ಷಿಸಬೇಕಾಯಿತು. ಕಣ್ಣು ತಪ್ಪಿಸಿ ನೀರಿಗಿಳಿಯುವುದು ಕಂಡುಬಂದಲ್ಲಿ ಜೀವ ರಕ್ಷಕ ತಂಡದವರು ಎವಿಟಿ ಬೈಕ್ ಮೂಲಕ ಸಂಚರಿಸುತ್ತ ಸೈರನ್ ಹಾಕಿ ನೀರಿನಿಂದ ಮೇಲೆ ಕಳುಹಿಸುತ್ತಿದ್ದರು.
ಪಡುಕರೆ ಬೀಚ್ನಲ್ಲೂ ಜನ
ಮಳೆ ಬಿಡುವು ನೀಡಿರುವ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಹೆಚ್ಚಿನ ಪ್ರವಾಸಿಗರು ಕರಾವಳಿಗೆ ಆಗಮಿಸುತ್ತಿದ್ದು, ಮಲ್ಪೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ಸಾಗುತ್ತಿವೆ. ಇತ್ತ ಪಡುಕರೆ ಬೀಚ್, ಮಲ್ಪೆ ಸೀ ವಾಕ್, ಕದಿಕೆ ಆಸರೆ ಬೀಚ್, ಕೋಡಿಬೆಂಗ್ರೆ ಡೆಲ್ಟಾ ಬೀಚ್ಗೂ ಜನ ಬರುತ್ತಿರುವುದು ಕಂಡುಬಂದಿದೆ.
You seem to have an Ad Blocker on.
To continue reading, please turn it off or whitelist Udayavani.