![Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು](https://www.udayavani.com/wp-content/uploads/2024/07/gold-415x252.jpg)
Manipal: ಆನ್ಲೈನ್ ಮೂಲಕ ಸಾವಿರಾರು ರೂ.ವಂಚನೆ
Team Udayavani, Oct 25, 2023, 11:22 PM IST
![Manipal: ಆನ್ಲೈನ್ ಮೂಲಕ ಸಾವಿರಾರು ರೂ.ವಂಚನೆ](https://www.udayavani.com/wp-content/uploads/2023/10/FRAUD-7-620x465.jpg)
ಮಣಿಪಾಲ: ಕೆವೈಸಿ ಖಾತೆ ಬ್ಲಾಕ್ ಆಗಿದೆ ಎಂದು ತಿಳಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ವರ್ಗಾವಣೆಯಾದ ಘಟನೆ ನಡೆದಿದೆ.
ಮಣಿಪಾಲದ ನೆಹರೂ ನಗರದ ನಿವಾಸಿ ಮಂಜುನಾಥ ನಾಗಪ್ಪ ಅವರ ಮೊಬೈಲ್ ನಂಬರ್ಗೆ ಬೇರೊಂದು ಸಂಖ್ಯೆಯಿಂದ ಅವರ ಕೆವೈಸಿ ಅಕೌಂಟ್ ಬ್ಲಾಕ್ ಆಗಿರುವ ಬಗ್ಗೆ ಸಂದೇಶ ಬಂದಿತ್ತು. ಅದರಂತೆ ಮೆಸೇಜ್ನಲ್ಲಿರುವ ಮೊಬೈಲ್ ಸಂಖ್ಯೆಗೆ ಅವರು ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ಕೇಳಿದಂತೆ ಒಟಿಪಿ ನೀಡಿದ್ದರು. ಕೂಡಲೇ ಇವರ ಕೆನರಾ ಬ್ಯಾಂಕ್ ಅಕೌಂಟ್ನಿಂದ 23,300 ರೂ. ವರ್ಗಾವಣೆಗೊಂಡಿದೆ.
ಇನ್ನೊಂದು ಘಟನೆಯಲ್ಲಿ ಮಣಿಪಾಲದ ನಿವಾಸಿ ಜಗದೀಶ ಅವರ ಎಸ್ಬಿಐ ಮಣಿಪಾಲ ಶಾಖೆಯ ಅಕೌಂಟ್ನಿಂದ ಅಪರಿಚಿತರು 30,000 ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಟಾಪ್ ನ್ಯೂಸ್
![Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು](https://www.udayavani.com/wp-content/uploads/2024/07/gold-415x252.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.