Malpe; ಬಲರಾಮನ ಪ್ರತಿಷ್ಠೆ ಹಿಂದೂ ರಾಷ್ಟ್ರದ ಪ್ರೇರಕ ಶಕ್ತಿಯಾಗಲಿ: ಪಲಿಮಾರು ಶ್ರೀ

ಶ್ರೀ ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವ

Team Udayavani, Mar 21, 2024, 1:19 AM IST

Malpe; ಬಲರಾಮನ ಪ್ರತಿಷ್ಠೆ ಹಿಂದೂ ರಾಷ್ಟ್ರದ ಪ್ರೇರಕ ಶಕ್ತಿಯಾಗಲಿ: ಪಲಿಮಾರು ಶ್ರೀ

ಮಲ್ಪೆ: ಊರಿನ ದೇವಸ್ಥಾನಗಳು ನಮ್ಮದೇ ಎಂಬ ಭಾವನೆ ಎಲ್ಲರಲ್ಲೂ ಸಮೃದ್ಧವಾಗಿ ಮೂಡಬೇಕು. ಆಯೋದ್ಯೆಯಲ್ಲಿ ರಾಮ ದೇವಸ್ಥಾನವು ಹೇಗೆ ಹಿಂದೂ ರಾಷ್ಟ್ರವಾಗಲು ಕಾರಣವಾಗಿದೆಯೋ ಅದೇ ರೀತಿ ವಡಭಾಂಡೇಶ್ವರದಲ್ಲಿ ಬಲರಾಮ ದೇವರ ಪ್ರತಿಷ್ಠೆಯೂ ಹಿಂದೂ ರಾಷ್ಟ್ರಕ್ಕೆ ಕಾರಣವಾಗಲಿ. ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡ ಮಾತೆಯರು, ಯುವಜನತೆ ಸೇರಿದಂತೆ ಎಲ್ಲರಿಗೂ ದೇವರ ಅನುಗ್ರಹ ದೊರೆಯಲಿ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ಅವರು ಮಂಗಳವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಹೊರಕಾಣಿಕೆ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಅಪೂರ್ವ ಕಾರ್ಯ
ಧಾರ್ಮಿಕ ಚಿಂತಕ ಕೆ.ಎಲ್‌. ಕುಂಡಂತಾಯ ಮಾತನಾಡಿ, ಬಲರಾಮ ದೇವಸ್ಥಾನದ ಜೀರ್ಣೋದ್ಧಾರ ಕೆಲಸದಲ್ಲಿ ಪ್ರಾಚೀನತೆಗೆ ಆಧಾರವಾಗಬಲ್ಲ ಪೂರ್ವದ ವಿನ್ಯಾಸ, ಇತಿಹಾಸ, ಒಟ್ಟಿನಲ್ಲಿ ಮೂಲ ಸ್ವರೂಪವನ್ನು ಇಟ್ಟುಕೊಂಡು ಯಥಾವ‌ತ್ತಾಗಿ ನಿರ್ಮಿಸಲಾಗಿದೆ. ಕೆಲವೊಂದು ಭಿನ್ನಗೊಂಡ ಶಿಲೆಯ ಭಾಗಗಳನ್ನು ಹೊಸತಾಗಿ ನಿರ್ಮಿಸಿ ಮರುಜೋಡಣೆ ಮಾಡಲಾಗಿದೆ ಇದು ಬಹಳ ಅಪರೂಪದ ಕೆಲಸವಾಗಿದೆ ಎಂದರು.

ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್‌ ಕಡೆಕಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಇಸ್ಕಾನ್‌ ಮಂಗಳೂರು ವಿಭಾಗದ ಉಪಾಧ್ಯಕ್ಷ ಸನಂದನದಾಸ್‌ ಪ್ರಭು, ಮಲ್ಪೆ ಮತೊÕéàದ್ಯಮಿ ರಮೇಶ್‌ ಕೋಟ್ಯಾನ್‌, ಉದ್ಯಮಿಗಳಾದ ದಯಾನಂದ ಶೆಟ್ಟಿ ಕೊಜಕುಳಿ, ಅಶೋಕ್‌ ಶೆಟ್ಟಿ ಕೊಜಕುಳಿ, ಉಡುಪಿ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್‌. ಸಾಲ್ಯಾನ್‌, ವಡಭಾಂಡೇಶ್ವರ ಭಕ್ತವೃಂದದ ಅಧ್ಯಕ್ಷ ಹರೀಶ್‌ ಕಾಂಚನ್‌, ದೇವಸ್ಥಾನದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ, ಮೊಕ್ತೇಸರ ಟಿ. ಶ್ರೀನಿವಾಸ ಭಟ್‌, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ ಮೂಲಿಗಾರ್‌, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ವೇದಿಕೆ ಸಂಚಾಲಕರಾದ ವಿಕ್ರಮ ಟಿ. ಶ್ರಿಯಾನ್‌, ಬಾಲಕೃಷ್ಣ ಮೆಂಡನ್‌ ಉಪಸ್ಥಿತರಿದ್ದರು.

ದೇವಸ್ಥಾನದ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್‌ ಸ್ವಾಗತಿಸಿದರು. ಡಾ| ವಂಶಿಕೃಷ್ಣ ಆಚಾರ್ಯ ಪುರೋಹಿತ್‌ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸುನೀತಾ ಗಿರೀಶ್‌ ಕೆದ್ಲಾಯ ಅವರಿಂದ ವೀಣಾ ವಾದನ, ಮಂದಾರ್ತಿ ಸಮರ್ಪಣ ಮತ್ತು ತಂಡದವರಿಂದ ಭರತನಾಟ್ಯ ನಡೆಯಿತು.

ಬಲರಾಮ ಕೃಷಿಯ ಪ್ರತೀಕ
ಕೃಷಿ ಪ್ರಧಾನ ದೇಶ ನಮ್ಮದು. ಉಳುಮೆ ಮಾಡುವ ನೇಗಿಲು, ಭತ್ತ ಕುಟ್ಟುವ ಒನಕೆ ಈ ಎರಡೂ ಆಯುಧ ಗಳು ಕೃಷಿಗೆ ಸಂಬಂಧಿಸಿದವು. ಬಲರಾಮನ ಕೈಯಲ್ಲಿರುವ ಆಯುಧ ನೇಗಿಲು ಮತ್ತು ಒನಕೆ, ಇಂದು ಬಲರಾಮನ ಆಯುಧದ ಪ್ರತೀಕವಾಗಿ ತಂದ ಭತ್ತ ಮತ್ತು ತರಕಾರಿಗಳು ಹೊರೆಕಾಣಿಕೆ ಮೂಲಕ ದೇವರಿಗೆ ಸಮರ್ಪಿತ ವಾಗಿವೆ. ಕೃಷಿ ಸಂಸ್ಕೃತಿಯನ್ನು ಪ್ರೀತಿಸುವ ಬಲರಾಮ ನಮ್ಮ ಈ ನಾಡಿನಲ್ಲಿಯೂ ಕೃಷಿಯನ್ನು ಸಂಪದ್ಭರಿತ ವಾಗಿಸಲಿ ಎಂದು ಪಲಿಮಾರು ಶ್ರೀಗಳು ಹೇಳಿದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.