![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 16, 2022, 10:50 AM IST
ಕಾರ್ಕಳ : ಸಚಿವ ವಿ. ಸುನಿಲ್ಕುಮಾರ್ ಪ್ರಯಾಣಿಸುತ್ತಿದ್ದ ವೇಳೆ ದಾರಿ ಮಧ್ಯೆ ಅಪಘಾತವೊಂದು ಸಂಭವಿಸಿ ಗಾಯಗೊಂಡಿದ್ದ ಯುವಕ ನೋರ್ವನನ್ನು ಆಸ್ಪತ್ರೆಗೆ ಸಾಗಿಸಲು ತನ್ನ ಕಾರು ಬಿಟ್ಟುಕೊಟ್ಟು ಬೈಕ್ ಏರಿ ತೆರಳಿ ಮಾನವೀಯತೆ ತೋರಿದ್ದಾರೆ.
ಶನಿವಾರ ಉಡುಪಿಯಲ್ಲಿ ಕಾರ್ಯ ಕ್ರಮ ಮುಗಿಸಿ ಕಾರ್ಕಳದ ಕಡೆಗೆ ಸಚಿವರು ತೆರಳುತಿದ್ದ ವೇಳೆ ಗುಂಡಡ್ಕ ಸರ್ಕಲ್ ಬಳಿ ಕಾರು ಮತ್ತು ಬೈಕ್ ಅಪಘಾತ ಸಂಭವಿಸಿ ಯುವಕನೋರ್ವ ಗಂಭೀರ ಗಾಯಗೊಂಡು ರಕ್ತ ಸೋರುತ್ತ ಬಿದ್ದಿರುವುದನ್ನು ಗಮನಿಸಿದರು. ತತ್ಕ್ಷಣವೇ ಚಾಲಕನಿಗೆ ಕಾರನ್ನು ನಿಲ್ಲಿಸುವಂತೆ ಸೂಚಿಸಿ ಗಾಯಾಳುವಿನ ಬಳಿ ತೆರಳಿ ಸಾಂತ್ವನ ಹೇಳಿದ ಆತನನ್ನು ಆಸ್ಪತ್ರೆಗೊಯ್ಯಲು ತನ್ನ ಕಾರು ನೀಡಿದರು.
ಬಳಿಕ ದ್ವಿಚಕ್ರ ವಾಹನದಲ್ಲಿ ತಮ್ಮ ನಿವಾಸಕ್ಕೆ ತೆರಳಿದರು. ಸಚಿವರ ಗನ್ಮ್ಯಾನ್ ಪ್ರಭಾಕರ, ಸ್ಥಳೀಯ ಯುವಕ ವಿನಯ್ ಮತ್ತು ಕಾರು ಚಾಲಕ ಮಂಜುನಾಥ ಗಾಯಾಳುವನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಇದನ್ನೂ ಓದಿ : ಉಡುಪಿ ಜಿಲ್ಲೆಯಲ್ಲಿ ಚರ್ಮಗಂಟು ಸೋಂಕು ದೃಢಪಟ್ಟಿಲ್ಲ: ಪಶು ಸಂಗೋಪನೆ ಇಲಾಖೆ ಸ್ಪಷ್ಟನೆ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.