ಮೋದಿ ಉಡುಪಿ ಆಗಮನ ಹಿನ್ನೆಲೆ ಸಂಚಾರ ಬದಲಾವಣೆ
Team Udayavani, Apr 30, 2018, 1:50 PM IST
ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ, ಎಂಜಿಎಂ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಮೇ 1ರಂದು ಉಡುಪಿಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೇ 1ರಂದು ಮಧ್ಯಾಹ್ನ 12 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದ ವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ.
- ಕಾರ್ಕಳ, ಹೆಬ್ರಿ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲ ಘನ ವಾಹನಗಳು ಇಂದ್ರಾಳಿ ಜಂಕ್ಷನ್ ಸೇತುವೆ ಬಳಿ ಯು- ಟರ್ನ್ ಪಡೆದು ಮರಳಬೇಕು.
- ಮಣಿಪಾಲದಿಂದ ಉಡುಪಿಗೆ ಬರುವ ಲಘು ವಾಹನಗಳು ಇಂದ್ರಾಳಿ, ಬುಡ್ನಾರು – ಬೀಡಿನಗುಡ್ಡೆ – ಮಿಷನ್ ಕಾಂಪೌಂಡ್ ಮಾರ್ಗವಾಗಿ ಉಡುಪಿಗೆ ಬರಬೇಕು.
- ಮಂಗಳೂರಿನಿಂದ ಉಡುಪಿಗೆ ಬರುವ ಎಲ್ಲ ಬಸ್ ಹಾಗೂ ವಾಹನ ಗಳು ಅಂಬಲಪಾಡಿ, ಅಜ್ಜರಕಾಡು, ಜೋಡುಕಟ್ಟೆಗೆ ಬಂದು ಕಿನ್ನಿಮೂಲ್ಕಿ – ಬಲಾಯಿಪಾದೆ ಮಾರ್ಗವಾಗಿ ಮಂಗಳೂರಿಗೆ ಹಿಂದಿರುಗಬೇಕು.
- ಮಲ್ಪೆಯಿಂದ ಉಡುಪಿಗೆ ಬರುವ ಎಲ್ಲ ಬಸ್ ಹಾಗೂ ವಾಹನಗಳು ಕಲ್ಮಾಡಿಯಾಗಿ ಅಂಬಲಪಾಡಿ- ಅಜ್ಜರ ಕಾಡು-ಜೋಡುಕಟ್ಟೆಗೆ ಬಂದು ಅಲ್ಲಿಂದ ಕಿನ್ನಿಮೂಲ್ಕಿ ಮುಖಾಂತರ ಮಲ್ಪೆಗೆ ಹಿಂದಿರುಗಬೇಕು.
- ಅಂಬಾಗಿಲಿನಿಂದ ಉಡುಪಿಗೆ ಬರುವ ಎಲ್ಲ ಬಸ್ ಹಾಗೂ ವಾಹನ ಗಳು ಗುಂಡಿಬೈಲು ರಸಿಕ ಬಾರ್ ಜಂಕ್ಷನ್ ನಿಂದಲೇ ಯು ಟರ್ನ್ ಪಡೆದು ವಾಪಸಾಗಬೇಕು.
- ಕುಂದಾಪುರ ಕಡೆಯಿಂದ ಉಡುಪಿಗೆ ಆಗಮಿಸುವ ಬಸ್ ಹಾಗೂ ಇತರ ವಾಹನಗಳು ಕರಾವಳಿಗೆ ಬಂದು ಶಾರದಾ ಹೋಟೆಲ್ ಬಳಿಯೇ ಯು ಟರ್ನ್ ಪಡೆದು ವಾಪಸಾಗಬೇಕು.
ಇತರ ಮಾರ್ಗ ಬದಲಾವಣೆ
- ಮಣಿಪಾಲ ಟೈಗರ್ ಸರ್ಕಲ್- ಅಲೆವೂರು- ಕುಕ್ಕಿಕಟ್ಟೆ- ಬೀಡಿನಗುಡ್ಡೆ ಅಥವಾ ಕೊರಂಗ್ರಪಾಡಿ ಜಂಕ್ಷನ್- ರಾ. ಹೆದ್ದಾರಿ
- ಸಿಂಡಿಕೇಟ್ ಜಂಕ್ಷನ್ – ಡಿಸಿ ಆಫೀಸ್ ಜಂಕ್ಷನ್-ಪೆರಂಪಳ್ಳಿ-ಅಂಬಾಗಿಲು
- ಅಂಬಲಪಾಡಿ-ಜೋಡುಕಟ್ಟೆ – ಕಿನ್ನಿಮೂಲ್ಕಿ- ಬಲಾಯಿಪಾದೆ
- ಅಂಬಾಗಿಲು-ಪೆರಂಪಳ್ಳಿ ಕ್ರಾಸ್-ಮಣಿಪಾಲ
- ಮಲ್ಪೆ- ಸಿಟಿಜನ್ ಸರ್ಕಲ್- ಆಶೀರ್ವಾದ್ ಜಂಕ್ಷನ್- ಸಂತೆಕಟ್ಟೆ
- ಮಲ್ಪೆ- ಕಲ್ಮಾಡಿ- ಕಿದಿಯೂರು- ಅಂಬಲಪಾಡಿ
ಪಾರ್ಕಿಂಗ್ ಎಲ್ಲೆಲ್ಲಿ ?
- ಉಡುಪಿ ಶಾರದಾ ಮಂಟಪ ಜಂಕ್ಷನ್ ಬಳಿಯ ಸುಧೀಂದ್ರ ಮಂಟಪ ರಸ್ತೆಯಲ್ಲಿ ಮೇ 1ರ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್ಗಾಗಿ ಅನ್ಯ ವಾಹನಗಳ ಓಡಾಟ ನಿಷೇಧಿಸಲಾಗಿದೆ.
- ಉಡುಪಿ ಗೋಸುಲಟ್ಟೆ ರಸ್ತೆ (ಎಂಜಿಎಂ ಲೇಡೀಸ್ ಹಾಸ್ಟೆಲ್ ಬಳಿ ರಸ್ತೆ) ಯಲ್ಲಿ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯ ವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್ಗಾಗಿ ಬೇರೆ ವಾಹನಗಳ ಓಡಾಟ ನಿಷೇಧಿಸಲಾಗಿದೆ.
- ಮಲ್ಪೆ ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಡಿಯಾಳಿ ಕಮಲಾಬಾೖ ಹೈಸ್ಕೂಲ್ ಮೈದಾನ, ಕಾರುಗಳಿಗೆ ಕಡಿಯಾಳಿ ಆತೀಫ್ ಹುಸೇನ್ ಎಸ್ಟೇಟ್ನಲ್ಲಿ ಪಾರ್ಕಿಂಗ್.
- ಕುಂದಾಪುರ, ಕಾರವಾರ, ಬೈಂದೂರು ಮತ್ತು ಬ್ರಹ್ಮಾವರ ಭಾಗದ ದ್ವಿಚಕ್ರ ವಾಹನಗಳಿಗೆ ಶಾರದಾ ಮಂಟಪ ಜಂಕ್ಷನ್ ಬಳಿ ಇರುವ ಸುಧೀಂದ್ರ ಮಂಟಪ ರಸ್ತೆ, ಕಾರು ಗಳಿಗೆ ರಾಜಾಂಗಣ ಪಕ್ಕದ ಪಾರ್ಕಿಂಗ್ ಸ್ಥಳ, ಬಸ್ಸುಗಳಿಗೆ ರಾಯಲ್ಗಾರ್ಡನ್ನಲ್ಲಿ ನಿಲುಗಡೆ.
- ಕಾರ್ಕಳ, ಹೆಬ್ರಿ, ಚಿಕ್ಕಮಗಳೂರು ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ಎಂಜಿಎಂ ಕಾಲೇಜು ಲೇಡೀಸ್ ಹಾಸ್ಟೆಲ್ ರಸ್ತೆ, ಕಾರುಗಳಿಗೆ ಬೀಡಿನಗುಡ್ಡೆ, ಬಸ್ಸುಗಳಿಗೆ ಮಣಿಪಾಲ ಎಂಜೆಸಿ ಮೈದಾನದಲ್ಲಿ ಪಾರ್ಕಿಂಗ್.
- ಕಾಪು, ಪಡುಬಿದ್ರಿ, ಮೂಲ್ಕಿ, ಮಂಗಳೂರಿ ನಿಂದ ಬರುವ ದ್ವಿಚಕ್ರ ವಾಹನಗಳಿಗೆ ಸುಧೀಂದ್ರ ಮಂಟಪ ರಸ್ತೆ, ಕಾರು ಮತ್ತು ಬಸ್ಸುಗಳಿಗೆ ಬೀಡಿನಗುಡ್ಡೆಯಲ್ಲಿ ನಿಲುಗಡೆ.
- ಶಾರದಾ ರೆಸಿಡೆನ್ಸಿಯಲ್ ಹಾಸ್ಟೆಲ್ ಮೈದಾನ ವಿಐಪಿ ಪಾರ್ಕಿಂಗ್ ಸ್ಥಳವಾಗಿರುತ್ತದೆ. ಟಿ.ಎಂ.ಎ ಪೈ ಆಂಗ್ಲ ಮಾಧ್ಯಮ ಶಾಲೆ ಮೈದಾನ ಮಾಧ್ಯಮದವರು, ಪಕ್ಷದ, ಇತರ ವಿಐಪಿಗಳಿಗೆ ಪಾರ್ಕಿಂಗ್ ಸ್ಥಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.