ನಗರಸಭೆ: ಪುರಪಿತೃಗಳ ಭವಿಷ್ಯ ಭದ್ರತಾ ಕೊಠಡಿಯಲ್ಲಿ!


Team Udayavani, Sep 2, 2018, 6:00 AM IST

010918astro03.jpg

ಉಡುಪಿ: ಉಡುಪಿ ನಗರಸಭೆ ಮತದಾನ ಮುಗಿದಿದ್ದು, ಗೆಲ್ಲುವ ಲೆಕ್ಕಾಚಾರಗಳಲ್ಲಿ ಪ್ರಮುಖ ಪಕ್ಷಗಳು ನಿರತವಾಗಿವೆ. 35 ವಾರ್ಡ್‌(ಸ್ಥಾನ)ಗಳ ನಗರಸಭೆಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರಿದ್ದರೆ,  ಅಧಿಕಾರ ಮರಳಿ ಪಡೆಯುವ ಆತ್ಮವಿಶ್ವಾಸ ಬಿಜೆಪಿಯದ್ದು. 

“ಕಾಂಗ್ರೆಸ್‌ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ ನೀಡಿದ ಉತ್ತಮ ಆಡಳಿತ, ಪ್ರಮೋದ್‌ ಮಧ್ವರಾಜ್‌ ಅವರು ಸಚಿವರಾಗಿದ್ದಾಗ ಭಾರೀ ಮೊತ್ತದ ಅನುದಾನವನ್ನು ನಗರಕ್ಕೆ ತಂದುಕೊಟ್ಟಿರುವುದು, ಮೋದಿ ಅಲೆ ಈ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ’ ಎಂಬ ವಿಶ್ಲೇಷಣೆ ಕೈ ಪಾಳಯದ್ದು.

“26ರಿಂದ 28 ಸ್ಥಾನಗಳಲ್ಲಿ ಕಮಲ ಅರಳುವ ನಿರೀಕ್ಷೆ ಇದೆ. ಕಾಂಗ್ರೆಸ್‌ನ ದುರಾಡಳಿತ, ಶಾಸಕ ರಘುಪತಿ ಭಟ್‌ ಅವರ ಕ್ರಿಯಾಶೀಲತೆ, ಕಾರ್ಯಕರ್ತರ ಶ್ರಮ, ಮೋದಿ ಅಲೆ, ಈ ಹಿಂದೆ ಬಿಜೆಪಿ ನೀಡಿರುವ ಉತ್ತಮ ಆಡಳಿತ ಇವೆಲ್ಲವೂ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ’ ಎಂದು ಬಿಜೆಪಿಯ ಪ್ರಮುಖ ನಾಯಕರು ಲೆಕ್ಕಾಚಾರ ಮುಂದಿಡುತ್ತಿದ್ದಾರೆ. ಖಾತೆ ತೆರೆಯುವ ಪೂರ್ಣ ವಿಶ್ವಾಸ ಜೆಡಿಎಸ್‌ನದ್ದು. ಗೆಲ್ಲುವ “ಖಚಿತತೆ’ ಕೆಲವು ಪಕ್ಷೇತರರಲ್ಲಿಯೂ ಇದೆ.
 
ಮಣಿಪಾಲದಲ್ಲಿ ಕನಿಷ್ಠ ಮತದಾನ 
ನಗರಸಭೆಯಲ್ಲಿ ಸರಾಸರಿ ಶೇ. 68.52 ಮತದಾನವಾಗಿದೆ. 47,538 ಪುರುಷ ಮತದಾರರ ಪೈಕಿ 32,659 ಮಂದಿ ಮತ ಚಲಾಯಿಸಿದ್ದಾರೆ. 50,023 ಮಹಿಳಾ ಮತದಾರರ ಪೈಕಿ 34,194 ಮಂದಿ ಮತದಾನ ಮಾಡಿದ್ದಾರೆ. ಪರ್ಕಳ ವಾರ್ಡ್‌ನಲ್ಲಿ ಗರಿಷ್ಠ ಶೇ. 88.25 ಮತದಾನವಾಗಿದೆ. ಮಣಿಪಾಲದಲ್ಲಿ ಕನಿಷ್ಠ ಶೇ. 51.35 ಮತದಾನವಾಗಿದೆ. 
 
ಎಲ್ಲಿ ಎಷ್ಟು ಮತದಾನ?
ಕೊಳ ವಾರ್ಡ್‌ನಲ್ಲಿ 75.78, ವಡಭಾಂಡೇಶ್ವರದಲ್ಲಿ ಶೇ.74.49, ಮಲ್ಪೆ ಸೆಂಟ್ರಲ್‌ನಲ್ಲಿ ಶೇ.64.86, ಕೊಡವೂರಿನಲ್ಲಿ ಶೇ.78.42, ಕಲ್ಮಾಡಿಯಲ್ಲಿ ಶೇ. 79.26, ಮೂಡುಬೆಟ್ಟಿನಲ್ಲಿ ಶೇ. 75.78, ಕೊಡಂಕೂರಿನಲ್ಲಿ ಶೇ .73.96, ನಿಟ್ಟೂರಿನಲ್ಲಿ  ಶೇ. 75.63, ಸುಬ್ರಹ್ಮಣ್ಯ ನಗರದಲ್ಲಿ ಶೇ. 72.20, ಗೋಪಾಲಪುರದಲ್ಲಿ ಶೇ. 63.96, ಕಕ್ಕುಂಜೆಯಲ್ಲಿ ಶೇ 67.81, ಕರಂಬಳ್ಳಿಯಲ್ಲಿ ಶೇ. 70.28, ಮೂಡುಪೆರಂಪಳ್ಳಿಯಲ್ಲಿ ಶೇ. 71.05, ಸರಳೇಬೆಟ್ಟಿನಲ್ಲಿ  ಶೇ. 77.73, ಸೆಟ್ಟಿಬೆಟ್ಟಿನಲ್ಲಿ ಶೇ. 70.20, ಪರ್ಕಳದಲ್ಲಿ ಶೇ. 68.25, ಈಶ್ವರನಗರದಲ್ಲಿ ಶೇ. 66.46, ಸಗ್ರಿಯಲ್ಲಿ ಶೇ. 66.39, ಇಂದ್ರಾಳಿಯಲ್ಲಿ ಶೇ. 67.33, ಇಂದಿರಾನಗರದಲ್ಲಿ ಶೇ. 74.67, ಬಡಗುಬೆಟ್ಟಿನಲ್ಲಿ ಶೇ . 69.84, ಚಿಟಾ³ಡಿಯಲ್ಲಿ ಶೇ.  69.33, ಕಸ್ತೂರ್ಬಾನಗರದಲ್ಲಿ ಶೇ. 66.33, ಕುಂಜಿ ಬೆಟ್ಟಿನಲ್ಲಿ ಶೇ. 67.57, ಕಡಿಯಾಳಿಯಲ್ಲಿ ಶೇ. 71.01, ಗುಂಡಿಬೈಲಿನಲ್ಲಿ  ಶೇ. 68.53, ಬನ್ನಂಜೆಯಲ್ಲಿ ಶೇ. 63.10, ತೆಂಕಪೇಟೆಯಲ್ಲಿ ಶೇ. 55.44, ಒಳಕಾಡಿನಲ್ಲಿ ಶೇ. 59.85, ಬೈಲೂರಿನಲ್ಲಿ ಶೇ. 66.23, ಕಿನ್ನಿಮೂಲ್ಕಿ ಯಲ್ಲಿ ಶೇ. 61.61, ಅಜ್ಜರಕಾಡಿನಲ್ಲಿ ಶೇ 58.24, ಶಿರಿಬೀಡಿನಲ್ಲಿ ಶೇ. 65.06, ಅಂಬಲಪಾಡಿಯಲ್ಲಿ ಶೇ. 64.24 ಮತದಾನವಾಗಿದೆ.

ನಿಷೇಧಾಜ್ಞೆ 
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ,  ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮತ ಎಣಿಕೆ ಸೆ. 3ರಂದು ಉಡುಪಿ ಕುಂಜಿಬೆಟ್ಟು ಟಿ.ಎ.ಪೈ ಆಂ.ಮಾ.ಶಾಲೆ, ಕುಂದಾಪುರ ಮತ್ತು ಕಾರ್ಕಳ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ. ಈ ವ್ಯಾಪ್ತಿಯಲ್ಲಿ  ಸೆ. 3ರ ಬೆಳಗ್ಗೆ 6ರಿಂದ ಸೆ. 4ರ ಬೆಳಗ್ಗೆ 6ರ ವರೆಗೆ ಸೆಕ್ಷನ್‌ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. 

8ರಿಂದ ಮತ ಎಣಿಕೆ ಆರಂಭ 
ಉಡುಪಿ ನಗರಸಭೆ ಮತ್ತು ಸಾಲಿಗ್ರಾಮ ಪ.ಪಂ.ನ ಮತ ಎಣಿಕೆ ಸೋಮವಾರ ಬೆಳಗ್ಗೆ 8ರಂದ ಕುಂಜಿಬೆಟ್ಟು  ಟಿ.ಎಂ.ಎ ಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿದ್ದು ಮಧ್ಯಾಹ್ನ 12 ಗಂಟೆಯೊಳಗೆ ಫ‌ಲಿತಾಂಶ ಪೂರ್ಣ ಪ್ರಕಟಗೊಳ್ಳುವ ನಿರೀಕ್ಷೆ ಇದೆ. 

ಟಾಪ್ ನ್ಯೂಸ್

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.