ಮೂಡಬಿದಿರೆ ಪ್ರತಿಭೆ ಗಾಯಕ ನಕಾಶ್‌ ಅಝೀಝ್: ಕರಾವಳಿ ತಾರೆಗೆ ನಾಳೆ ಉದಯವಾಣಿಯ  ಗೌರವ


Team Udayavani, Jul 27, 2022, 7:17 AM IST

thumb nakash aziz-min

ಮಣಿಪಾಲ: ಕನ್ನಡ, ಹಿಂದಿ, ತೆಲುಗು, ತಮಿಳು, ಬೆಂಗಾಲಿ, ಗುಜರಾತಿ ಸಹಿತ ವಿವಿಧ ಭಾರತೀಯ ಭಾಷೆಯ ಚಲನಚಿತ್ರಗಳಲ್ಲಿ ಗಾಯಕರಾಗಿ, ಸಂಗೀತ ಸಂಯೋಜಕರಾಗಿ ಖ್ಯಾತಿ ಗಳಿಸಿದ ಯುವಜನರ ನೆಚ್ಚಿನ ಗಾಯಕ ನಕಾಶ್‌ ಅಝೀಝ್ ಅವರು ಗುರುವಾರ ಉದಯ ವಾಣಿಯ ಕಚೇರಿಗೆ ಭೇಟಿ ನೀಡುವರು.

ಕರಾವಳಿ ಕರ್ನಾಟಕ ಪ್ರತಿಭೆಯಾಗಿರುವ ನಕಾಶ್‌ ಅವರು ಮೂಡುಬಿದರೆ ಮೂಲದವರು. ಸದ್ಯ ಮುಂಬಯಿನಲ್ಲಿ ನೆಲೆಸಿದ್ದಾರೆ. ಜು. 28ರಂದು ತೆರೆ ಕಾಣಲಿರುವ ನಟ ಸುದೀಪ್‌ ಅಭಿನಯ ವಿಕ್ರಾಂತ್‌ ರೋಣ ಸಿನೆಮಾದ ರಾ..ರಾ..ರಕ್ಕಮ್ಮ ಗೀತೆಗೆ ಇವರು ದನಿ ತುಂಬಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಗೀತೆಯೂ ಹೌದು.

ನಕಾಶ್‌ ಅವರು ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನೂರಾರು ಗೀತೆಗಳನ್ನು ಹಾಡಿದ್ದಾರೆ. ತಮಿಳು ಭಾಷೆಯ ಚಿತ್ರಗಳ ಹಾಡಿಗೂ ದನಿ ನೀಡಿದ್ದು, ಕನ್ನಡದ ತಮಸ್ಸು, ಬ್ರಹ್ಮ, ಉಪ್ಪಿ-2, ಯುವರತ್ನ, ಬಿಯಸ್ಟ್‌, ವಿಕ್ರಾಂತ್‌ ರೋಣ-ಹೀಗೆ ಹಲವು ಚಲನಚಿತ್ರಗಳಲ್ಲಿ ಗೀತೆಯನ್ನು ಹಾಡಿ, ತೆರೆಮರೆಯಲ್ಲೆ ಇದ್ದು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಬೆಂಗಾಲಿ, ಗುಜರಾತಿ ಚಿತ್ರಗಳಲ್ಲಿಯೂ ಹಾಡಿರುವ ಜತೆಗೆ ಪಾಕಿಸ್ಥಾನದ ಸಿನೆಮಾವೊಂದರಲ್ಲಿ ಗೀತೆ ಯನ್ನು ಹಾಡಿದ ಖ್ಯಾತಿಯೂ ಇವರಿಗಿದೆ. 2011ರಿಂದ ಈವರೆಗೆ ವಿವಿಧ ಸಿನೆಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಸಂಗೀತ ಸಂಯೋಜಕ ಹಾಗೂ ಗಾಯಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶಿಸಿ ಸುದೀಪ್‌ ಅಭಿನಯಿಸಿರುವ ಬಹುನಿರೀಕ್ಷಿತ ವಿಕ್ರಾಂತ ರಾಣಾ ಚಿತ್ರ ಬಿಡುಗಡೆಗೊಳ್ಳುತ್ತಿರುವ ಸಂದರ್ಭದಲ್ಲೇ ನಕಾಶ್‌ ಉದಯವಾಣಿಯಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಳ್ಳುವರು.

ನಕಾಶ್‌ ಅವರು ಹಾಡಿರುವ ಅನೇಕ ಚಿತ್ರ ಗೀತೆಗಳು ಯುವ ಜನತೆಯ ಬಾಯಲ್ಲಿ ಸದಾ ಗುಣುಗುತ್ತಿರುತ್ತವೆ. ಆದರೆ ನಕಾಶ್‌ ಕರ್ನಾಟಕ ದವರು, ಅದರಲ್ಲೂ ಕರಾವಳಿ ಮೂಲದವರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ನಕಾಶ್‌ ಅವರು ತಮ್ಮ ಕಂಠಸಿರಿಯ ಮೂಲಕ ಯುವ ಮನಸ್ಸುಗಳನ್ನು ಸೆಳೆದಿದ್ದಾರೆ. ಭಾರತೀಯ ಸಿನೆಮಾ ರಂಗದಲ್ಲಿ ತನ್ನದೇ ಸಾಧನೆ ಮಾಡಿ, ಛಾಪು ಮೂಡಿಸಿರುವ ನಕಾಶ್‌ ಅವರು ಜು. 28ರಂದು ಉದಯವಾಣಿ ಕಚೇರಿಗೆ ಆಗಮಿಸಿ ಅಭಿನಂದನೆ ಸ್ವೀಕರಿಸುತ್ತಿರುವುದು ವಿಶೇಷ.

ಕರ್ನಾಟಕದ ಕಂದ
ಕರಾವಳಿಯ ತಾರೆ
ನಕಾಶ್‌ ಅಝೀಝ್ ದೂರದ ಮುಂಬಯಿ ಯಲ್ಲಿ ಕರಾವಳಿಯ ಬಾವುಟ ಹಾರಿಸುತ್ತಿರುವ ಪ್ರತಿಭೆ. ಏಕಕಾಲದಲ್ಲಿ ಕರುನಾಡಿನ ಕಂದನಾಗಿ, ಕರಾವಳಿಯ ಪ್ರತಿಭೆಯಾಗಿರುವ ನಕಾಶ್‌ ಅವರನ್ನು ಉದಯವಾಣಿಯು “ಈ ಮಣ್ಣಿನ ಮಗ’ ಎಂದು ಪರಿಚಯಿಸುತ್ತಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.