ಟೂರಿಸ್ಟ್ ವಾಹನಗಳಿಗೆ ಕೇರಳದಲ್ಲಿ ಬಿಗಿ ನಿಯಮ
Team Udayavani, Dec 31, 2022, 5:30 AM IST
ಉಡುಪಿ : ಟೂರಿಸ್ಟ್ ವಾಹನಗಳಿಗೆ ಕೇರಳ ರಾಜ್ಯದಲ್ಲಿ ಎರಡು ತಿಂಗಳುಗಳಿಂದ ಬಿಗಿ ನಿಯಮ ವಿಧಿಸಿರುವುದರಿಂದ ರಾಜ್ಯದ ಬಸ್ಗಳು ಅತ್ತ ತೆರಳಲು ಹಿಂದೇಟು ಹಾಕುತ್ತಿವೆ.
ಕೇರಳದಲ್ಲಿ ಟೂರಿಸ್ಟ್ ಬಸ್ಗಳ ನಿಯಮಾವಳಿಯಂತೆ ಬಿಳಿ ಹಾಗೂ ಹಳದಿ ಮಿಶ್ರಿತ ಬಿಳಿ ಬಣ್ಣವನ್ನು ಒಳಗೊಂಡಿರಬೇಕು. ಆದರೆ ಈಗಾಗಲೇ ಶೇ. 90ರಷ್ಟು ಬಸ್ಗಳು ತಮ್ಮದೇ ಆದ ಬಣ್ಣವನ್ನು ಬಳಿದು ಸಿಂಗರಿಸಿಕೊಂಡಿವೆ. ಜತೆಗೆ ಬಸ್ನ ಹೊರಭಾಗದಲ್ಲಿ ಹೆಚ್ಚುವರಿ ಲೈಟ್ಗಳನ್ನೂ ಅಳವಡಿಸಲಾಗುತ್ತಿದೆ. ಜತೆಗೆ ಡಿಜೆ ಸದ್ದು. ಈ ಎಲ್ಲ ಅಂಶಗಳು ಅಪಘಾತಕ್ಕೆ ಕಾರಣವಾಗುತ್ತಿವೆ ಎಂಬ ಅಂಶವನ್ನು ಇಟ್ಟುಕೊಂಡು ಕೇರಳ ಸರಕಾರ ಟೂರಿಸ್ಟ್ ಬಸ್ಗಳಿಗೆ ಬಿಗಿ ನಿಯಮವನ್ನು ಜಾರಿಗೊಳಿಸಿದೆ.
ಕೇರಳಕ್ಕೆ ತೆರಳಲು ಹಿಂದೇಟು
ಕೇರಳದ ಈ ನಿಯಮ ದಿಂದ ಬೇಸತ್ತಿರುವ ರಾಜ್ಯದ ಟೂರಿಸ್ಟ್ ಬಸ್ಗಳು ಕೇರಳಕ್ಕೆ ತೆರಳಲು ಹಿಂದೇಟು ಹಾಕು ತ್ತಿವೆ. ದೇವರ ನಾಡು ಎಂದು ಕರೆಯಲ್ಪ ಡುವ ಕೇರಳಕ್ಕೆ ಕರ್ನಾಟಕ ರಾಜ್ಯ ಸಹಿತ ಇತರೆಡೆಗಳಿಂದ ಅತ್ಯಧಿಕ ಮಂದಿ ಪ್ರವಾಸಿಗರು ತೆರಳು ತ್ತಾರೆ. ಪ್ರಸ್ತುತ ಕೇರಳ ಸಂಪರ್ಕಿಸುವ ಗಡಿಭಾಗ ದವರೆಗೆ ಅವಿಭಜಿತ ದ.ಕ. ಜಿಲ್ಲೆಯ ಬಸ್ಗಳು ತೆರಳಿ ಅನಂತರ ಕೇರಳದ ಬಸ್ಗಳಿಗೆ ಪಾಸಿಂಗ್ ನೀಡುವ ವ್ಯವಸ್ಥೆಯನ್ನೂ ಕೆಲವರು ರೂಢಿಸಿಕೊಂಡಿದ್ದಾರೆ. ರಾಜ್ಯದ ಕೆಲವು ಬಸ್ಗಳಿಗೆ ಈಗಾಗಲೇ ಎಚ್ಚರಿಕೆ ನೀಡಿ 5 ಸಾವಿರ ರೂ.ಗಳವರೆಗೆ ದಂಡವನ್ನೂ ವಿಧಿಸಲಾಗಿದೆ.
ಕೇರಳದಲ್ಲಿ ಮಾರುಕಟ್ಟೆಗೆ ಹೊಡೆತ
ಕರ್ನಾಟಕದ ಹೆಚ್ಚಿನ ಬಸ್ಗಳು ಹಾಗೂ ಇತರ ವಾಹನಗಳ ಆಲೆóàಷನ್ ಹೆಚ್ಚಾಗಿ ಕೇರಳ ಹಾಗೂ ತಮಿಳುನಾಡುವಿನಲ್ಲಿ ಮಾಡಲಾ ಗುತ್ತದೆ. ಕಡಿಮೆ ವೆಚ್ಚಕ್ಕೆ ಹೆಚ್ಚಿನ ಪರಿಕರಗಳನ್ನು ನೀಡುತ್ತಾರೆ ಎಂಬ ಕಾರಣಕ್ಕಾಗಿ. ಆದರೆ ಸಂಚಾರ ನಿಯಮಾವಳಿಗೆ ಸಂಬಂಧಿಸಿದಂತೆ ಕಠಿನ ಕಾನೂನು ಜಾರಿಗೆ ತಂದ ಪರಿಣಾಮ ಅಲ್ಲಿನ ಪೈಂಟಿಂಗ್, ಆಲೆóàಷನ್ ಅಂಗಡಿಗಳೂ ವ್ಯಾಪಾರ ವಿಲ್ಲದೆ ಕಂಗೆಟ್ಟು ಹೋಗಿವೆ.
ಮಡಿಕೇರಿಯಲ್ಲಿಯೂ ಕಠಿನ ನಿಯಮ
ಕೇರಳದಂತೆ ಮಡಿಕೇರಿಯಲ್ಲಿಯೂ ಟೂರಿಸ್ಟ್ ಬಸ್ಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಲೈಟಿಂಗ್, ಡಿಜೆಗಳನ್ನು ಗುರುತಿಸಿ ದಂಡ ಹಾಕಲಾಗುತ್ತಿದೆ. ಕೆಲವು ಬಸ್ಗಳ ಲೈಟಿಂಗ್ಗಳನ್ನೂ ಸ್ಥಳದಲ್ಲಿಯೇ ತೆರವು ಮಾಡಿದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಟೂರಿಸ್ಟ್ ಬಸ್ ಮಾಲಕರು.
ಯಾಕಾಗಿ ಬಿಗಿ ನಿಯಮ?
ಈ ವರ್ಷದ ಅಕ್ಟೋಬರ್ನಲ್ಲಿ ಕೇರಳದ ವಾಳಯಾರ್-ವಡಕ್ಕಂಚೇರಿ ರಸ್ತೆಯಲ್ಲಿ ಟೂರಿಸ್ಟ್ ಬಸ್ ಹಾಗೂ ಸರಕಾರಿ ಬಸ್ನ ನಡುವೆ ಢಿಕ್ಕಿ ಸಂಭವಿಸಿ ಐವರು ಶಾಲಾ ಮಕ್ಕಳು ಹಾಗೂ 9 ಮಂದಿ ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು ಗಂಭೀರವಾಗಿ ತೆಗೆದು ಕೊಂಡ ಸರಕಾರ ಟೂರಿಸ್ಟ್ ಬಸ್ಗಳಿಗೆ ಕಲರ್ ಕೋಡಿಂಗ್ ಸಹಿತ ಕೆಲವೊಂದು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ಏಕರೂಪದ ನಿಯಮಾವಳಿ ಅಗತ್ಯ
ಟೂರಿಸ್ಟ್ ಬಸ್ಗಳ ನಿರ್ವಹಣೆ ಬಲು ದುಬಾರಿಯಾಗಿದೆ. ಪ್ರವಾಸೋ ದ್ಯಮಕ್ಕೆ ಟೂರಿಸ್ಟ್ ವಾಹನಗಳೇ ಆಧಾರವಾಗಿರುವ ಈ ಸಂದರ್ಭದಲ್ಲಿ ಇತರ ರಾಜ್ಯಗಳಲ್ಲಿ ನಮ್ಮ ವಾಹನಗಳಿಗೆ ದಂಡ ಹಾಕಿದರೆ ಅದು ಬಹುದೊಡ್ಡ ಹೊರೆ ಎನಿಸುತ್ತದೆ. ಕರ್ನಾಟಕಕ್ಕೆ ಹೋಲಿಸಿದರೆ ಕೇರಳದಲ್ಲಿ ತೆರಿಗೆ ಕಡಿಮೆ. ಟೂರಿಸ್ಟ್ ನಿಯಮಾವಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಏಕರೂಪದ ತೆರಿಗೆ ಹಾಗೂ ನಿಯಮಾವಳಿಗಳು ಬಂದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.
– ರಾಕೇಶ್, ಕಾರ್ಯದರ್ಶಿ, ದ.ಕ. ಟೂರಿಸ್ಟ್ ಬಸ್ಅಸೋಸಿಯೇಶನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Test Cricket : ಮೆಂಡಿಸ್ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.