ಸಂಚಾರ ಪುನರಾರಂಭಿಸಲು ನಾಗರಿಕ ಆಗ್ರಹ


Team Udayavani, Jun 29, 2018, 7:05 AM IST

2806mle6.jpg

ಮಲ್ಪೆ: ಮಲ್ಪೆ ಪಡುಕರೆಯಲ್ಲಿ ಓಡಾಡುತ್ತಿದ್ದ  ನರ್ಮ್ ಬಸ್ಸು ತಿಂಗಳ ಹಿಂದೆ ಸ್ಥಗಿತಗೊಂಡಿದ್ದು ಅದು ಮತ್ತೆ ಸಂಚಾರ ಪುನರಾಂಭಿಸುವಂತೆ ಪಡುಕರೆಯ ಸಮಸ್ತ ನಾಗರಿಕರು ಜನಸ್ಪಂದನದ ನೇತೃತ್ವದಲ್ಲಿ ಸಾರಿಗೆ ಅಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.

ಯಾವುದೇ ಬಸ್‌ ಸಂಚಾರವಿಲ್ಲದ ಪಡುಕರೆಗೆ ಜನರಿಗೆ ಅತ್ಯವಶ್ಯ ಎನ್ನುವ ನೆಲೆಯಲ್ಲಿ ಪಡುಕರೆ ಯುವಕ ಮಂಡಲ ಹಾಗೂ ಜನಸ್ಪಂದನ ಪಡುಕರೆಯ ಮನವಿಯ ಮೇರೆಗೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ವಿಶೇಷ ಕಾಳಜಿಯಿಂದ ಎರಡು ನರ್ಮ್ ಬಸ್‌ ಸೇವೆಯು ಪ್ರಾರಂಭಗೊಂಡಿತ್ತು. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಹೋಗುವವರಿಗೆ ಹಾಗೂ ಹಿರಿಯರಿಗೂ ತುಂಬಾ ಅನುಕೂಲಕರವಾಗಿತ್ತು. ಆದರೆ ಇತೀ¤ಚೆಗೆ ಕೆಲವು ತಿಂಗಳುಗಳಿಂದ ಒಂದು ನರ್ಮ್ ಬಸ್‌ ಸೇವೆ ಸ್ಥಗಿತಗೊಂಡಿದೆ. 

ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಅಲ್ಲದೆ ಪಡುಕರೆ ಯುವಕ ಮಂಡಲದ ಸಹಭಾಗಿತ್ವದಲ್ಲಿ ಮಹಿಳಾ ಮಂಡಲ ವತಿಯಿಂದ ಪಡುಕರೆ ಶ್ರೀ ಜ್ಞಾನೋದಯ ಭಜನಾ ಮಂದಿರ ಬಳಿ ನರ್ಮ್ ಬಸ್‌ಗಾಗಿ ಕಾಯುವ ಜನರಿಗೆ ಬಿಸಿಲು ಮತ್ತು ಮಳೆಯ ತೊಂದರೆಯಾಗುವ ದೃಷ್ಟಿಯಿಂದ ಸುಮಾರು 60000 ರೂ. ವೆಚ್ಚದಲ್ಲಿ ಉತ್ತಮವಾದ ಬಸ್ಸು ತಂಗುದಾಣ ನಿರ್ಮಾಣಗೊಳಿಸಲಾಗಿದೆ.  ಕನಿಷ್ಟ 2 ನರ್ಮ್ ಬಸ್ಸು ಸಂಚಾರಗೊಳ್ಳದಿದ್ದಲ್ಲಿ ಈ ತಂಗುದಾಣವು ಅಷ್ಟು ಉಪಯೋಗವಾಗದು. ಆದುದರಿಂದ ಬೇರೆ ಯಾವುದೇ ಬಸ್‌ ಸಂಚಾರವಿಲ್ಲದ ಪಡುಕರೆಗೆ ಕೂಡಲೇ ಸ್ಥಗಿತಗೊಂಡಿರುವ ನರ್ಮ್ ಬಸ್‌ ಸಂಚಾರವನ್ನು ಪುನರಾಂಭಿಸುವಂತೆ ಪಡುಕರೆಯ ಸಮಸ್ತ ನಾಗರಿಕರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜನಸ್ಪಂದನ ಪಡುಕರೆಯ ಅಧ್ಯಕ್ಷ ಜಗನ್ನಾಥ ಕಡೆಕಾರ್‌, ಉಪಾಧ್ಯಕ್ಷ ಸುರೇಶ್‌ ಮೆಂಡನ್‌, ಕಾರ್ಯದರ್ಶಿ ಸುದರ್ಶನ್‌ ಸುವರ್ಣ, ಕೋಶಾಧಿಕಾರಿ ವಸಂತ್‌ ಸುವರ್ಣ, ಪದಾಧಿಕಾರಿಗಳಾದ ಅಶೋಕ್‌ ಸುವರ್ಣ, ಗಣೇಶ್‌ ಕುಂದರ್‌, ಆನಂದ ಕಾಂಚನ್‌, ಜಯಕರ ಅಮೀನ್‌, ಜನಾರ್ದನ್‌ ಬಂಗೇರ, ಸತೀಶ್‌ ಕೋಟ್ಯಾನ್‌, ಅವಿನಾಶ್‌ ಮೆಂಡನ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.