Udupi ಬಡ್ಡಿ ಸಮೇತ ಅಸಲು ಪಾವತಿಗೆ ಬಳಕೆದಾರರ ಆಯೋಗ ಸೂಚನೆ

ಕುಟುಂಬ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ : ಬಡ್ಡಿ ನೀಡದೆ ವಂಚಿಸಿದ ಅಂಚೆ ಇಲಾಖೆಗೆ ದಂಡ

Team Udayavani, May 11, 2024, 6:50 AM IST

Udupi ಬಡ್ಡಿ ಸಮೇತ ಅಸಲು ಪಾವತಿಗೆ ಬಳಕೆದಾರರ ಆಯೋಗ ಸೂಚನೆ

ಉಡುಪಿ: ಜೀವನದ ಸಂಧ್ಯಾ ಕಾಲದ ಅವಶ್ಯಕತೆಗಾಗಿ ಕುಟುಂಬ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ (ಎಚ್‌ಯುಎಫ್)ನಲ್ಲಿ ಹೂಡಿಕೆ ಮಾಡಿರುವವರಿಗೆ ಅಂಚೆ ಇಲಾಖೆ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ದಾಖಲಿಸಲು ಮುಂದಾಗಿದ್ದೇವೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕುಟುಂಬ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ ಗೆ 2005ರ ಅನಂತರ ಆರ್‌ಬಿಐ ಅವಕಾಶ ನೀಡುತ್ತಿಲ್ಲ. ಇದನ್ನು ರದ್ದು ಮಾಡಿರುವ ಬಗ್ಗೆ ಸ್ಪಷ್ಟ ಸುತ್ತೋಲೆಯನ್ನು ಹೊರಡಿಸಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು 2005ರ ಅನಂತರವೂ ಎಚ್‌ಯುಎಫ್ ಖಾತೆ ತೆರೆಯಲು ಹಾಗೂ 2005ರ ಮೊದಲು ತೆರೆದಿರುವ ಖಾತೆಯನ್ನು ವಿಸ್ತರಿಸಲು ಅವಕಾಶ ನೀಡುತ್ತಿದ್ದಾರೆ. ಇದರಿಂದ ಬಹುತೇಕರಿಗೆ ಅಂತಿಮವಾಗಿ ತಮ್ಮ ಹಣ ಪಡೆಯುವಾಗ 2005ರ ಅನಂತರದ ಬಡ್ಡಿ ಸಿಗುತ್ತಿಲ್ಲ. ಕೇವಲ ಅಸಲು ಮಾತ್ರ ನೀಡುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯ ಹಾಗೂ ಬಳಕೆದಾರರ ಆಯೋಗದ ಮೆಟ್ಟಿಲೇರಿದವರಲ್ಲಿ ಬಹುತೇಕರಿಗೆ ಜಯ ಸಿಕ್ಕಿದೆ. ಈವರೆಗೂ ಯಾವ ಆದೇಶವೂ ಬ್ಯಾಂಕ್‌ ಹಾಗೂ ಅಂಚೆ ಇಲಾಖೆ ಪರವಾಗಿ ಬಂದಿಲ್ಲ. ಇಷ್ಟಾದರೂ ಅಧಿಕಾರಿಗಳು ಇನ್ನೂ ಹಿರಿಯ ನಾಗರಿಕನ್ನು ಮೋಸ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಸ್ಪಷ್ಟ ಆದೇಶಕ್ಕಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ವಿವರ ನೀಡಿದರು.

11 ಲಕ್ಷ ಪಾವತಿಗೆ ಆದೇಶ
ಕಾರ್ಕಳದ ಸಾಣೂರಿನ ವೆಂಕಟೇಶ ಕಾಮತ್‌ ಅವರು 2001ರಲ್ಲಿ 15 ವರ್ಷಕ್ಕೆ ಸೀಮಿತವಾಗಿ ಅಂಚೆ ಕಚೇರಿಯಲ್ಲಿ ಎಚ್‌ಯುಎಫ್ ಖಾತೆ ತೆರೆದಿದ್ದರು. 2016ರಲ್ಲಿ ತಮ್ಮ ಹಣ ಪಡೆಯಲು ಅಂಚೆ ಕಚೇರಿಗೆ ಹೋಗಿದ್ದರು. ಆಗ ಇನ್ನೂ ಐದು ವರ್ಷ ಖಾತೆಯನ್ನು ವಿಸ್ತರಿಸಲು ಅವಕಾಶ ಇದೆ ಎಂದು ಅಂಚೆ ಮಾಸ್ಟರ್‌ ತಿಳಿಸಿದ್ದರ ಹಿನ್ನೆಲೆಯಲ್ಲಿ ಖಾತೆಯ ಅವಧಿ ವಿಸ್ತರಿಸಿದ್ದರು. 2021ರಲ್ಲೂ ಮತ್ತೆ ಐದು ವರ್ಷ ವಿಸ್ತರಣೆಗೆ ಸಲಹೆ ನೀಡಿದ್ದರು. ಅದರಂತೆ ವೆಂಕಟೇಶ್‌ ಕಾಮತ್‌ ಅವರು ಇನ್ನೂ ಐದು ವರ್ಷ ವಿಸ್ತರಿಸಿ, ತಮ್ಮ ತಿಂಗಳ ¸ಆಾಪು¤ ಕಟ್ಟುತ್ತಾ ಬಂದಿದ್ದಾರೆ. 2023ರ ಜೂನ್‌ 22ರಂದು ವೆಂಕಟೇಶ್‌ ಕಾಮತ್‌ ಅವರಿಗೆ ಅಂಚೆ ಇಲಾಖೆ ನೋಟಿಸ್‌ ನೀಡಿ ತತ್‌ಕ್ಷಣವೇ ಖಾತೆ ಮುಕ್ತಾಯಗೊಳಿಸಲು ತಿಳಿಸಿದೆ. ಅನಂತರ ಖಾತೆ ಮುಕ್ತಾಯಕ್ಕೆ ಹೋದಾಗ ಬಡ್ಡಿ ಸಹಿತ 32,63,902 ರೂ.ಗಳನ್ನು ಅಂಚೆ ಇಲಾಖೆ ಪಾವತಿ ಮಾಡಬೇಕಿತ್ತು. ಬದಲಾಗಿ ಬಡ್ಡಿ ಹಣ 10,44,286 ರೂ. ನೀಡದೇ ಉಳಿದ 22,19,616 ರೂ.ಗಳನ್ನು ಮಾತ್ರ ನೀಡಿದೆ.ಅಂಚೆ ಇಲಾಖೆ ಅಧಿಕಾರಿಗಳು ಮಾಡಿದ ಮೋಸದ ಅರಿವಾಗ ವೆಂಕಟೇಶ್‌ ಕಾಮತ್‌ ಅವರು ಪ್ರತಿಷ್ಠಾನಕ್ಕೆ ದೂರು ನೀಡಿದರು.

ಅದರಂತೆ ಜಿಲ್ಲಾ ಬಳಕೆದಾರರ ಆಯೋಗದಲ್ಲಿ ದಾವೆ ಹೂಡಲಾಯಿತು. ಅರ್ಜಿ ವಿಚಾರಣೆ ನಡೆಸಿದ ಆಯೋಗ ಬಡ್ಡಿ ಹಣ 11,00,444 ರೂ. ಜತೆಗೆ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ 50,000 ದಂಡ, ವ್ಯಾಜ್ಯದ ಖರ್ಚು 10,000 ರೂ. ನೀಡಲು ಅಂಚೆ ಇಲಾಖೆಗೆ ಆದೇಶಿಸಿದೆ ಎಂದು ಡಾ| ರವೀಂದ್ರನಾಥ್‌ ಶಾನುಭಾಗ್‌ ಅವರು ತಿಳಿಸಿದರು.

ಮೇಲ್ಮನವಿಯ ಬೆದರಿಕೆ
ಆಯೋಗ ಆದೇಶಿಸಿದರೂ ಅಂಚೆ ಇಲಾಖೆಯಿಂದ ಹಣ ಇನ್ನೂ ವೆಂಕಟೇಶ ಕಾಮತ್‌ ಅವರಿಗೆ ಬಂದಿಲ್ಲ. ಬದಲಾಗಿ ರಾಜ್ಯ ಬಳಕೆದಾರರ ಆಯೋಗಕ್ಕೆ ಮೇಲ್ಮನವಿ ಹಾಕಿದ್ದೇವೆ ಎಂಬಿತ್ಯಾದಿ ಬೆದರಿಕೆಗಳ ಮೂಲಕ ಭಯ ಹುಟ್ಟಿಸುತ್ತಿದ್ದಾರೆ. ಈ ರೀತಿ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ ಮತ್ತು ಎಲ್ಲವೂ ಹಿರಿಯ ನಾಗರಿಕರಿಗೆ ಆಗಿರುವ ಅನ್ಯಾಯವಾಗಿದೆ. ಮೇಲ್ಮನವಿ ಹೋದರೂ ರಾಷ್ಟ್ರೀಯ ಬಳಕೆದಾರರ ಆಯೋಗದಲ್ಲಿ ಅಂಚೆ ಇಲಾಖೆಯ ಪರವಾಗಿ ತೀರ್ಪು ಬರಲು ಸಾಧ್ಯವೇ ಇಲ್ಲ. ಅಧಿಕಾರಿಗಳು ತಪ್ಪು ಮಾಡಿರುವುದು ಇದರಲ್ಲಿ ಸ್ಪಷ್ಟವಾಗಿದೆ ಮತ್ತು ಅದಕ್ಕೆ ಎಲ್ಲ ದಾಖಲೆಗಳು ಇವೆ. ಈ ರೀತಿಯ ಎಲ್ಲ ಮೋಸಗಳಿಗೂ ತಾರ್ಕಿಕ ಅಂತ್ಯ ಹಾಡಲು ಸುಪ್ರೀಂ ಕೋರ್ಟ್‌ಗೆ ಮೇಲ್ಮವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು.

ಜೀವನದ ಸಂಧ್ಯಾಕಾಲದ ಅವಶ್ಯಕತೆಗಾಗಿ ಅನೇಕರು ಬ್ಯಾಂಕ್‌ ಮತ್ತು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುತ್ತಾರೆ. ನಿಯಮಗಳು ತಿಳಿದಿರುವ ಅಧಿಕಾರಿಗಳೇ ಈ ರೀತಿ ನಮ್ಮನ್ನು ಮೋಸ ಮಾಡುತ್ತಿದ್ದಾರೆ. ನಮ್ಮ ಹಣವನ್ನು ಬಡ್ಡಿ ಸಹಿತ ನಮಗೆ ನೀಡಲು ಸಾಕಷ್ಟು ಸಮಸ್ಯೆ ಮಾಡುತ್ತಿದ್ದಾರೆ. ಸಾಮಾನ್ಯರಿಗೆ ನ್ಯಾಯಾಲಯಕ್ಕೆ ಅಲೆದಾಡುವುದು ಕಷ್ಟವಾಗುತ್ತದೆ. ನಿಯಮಾನುಸಾರವಾಗಿಯೇ ಹಣ ಪಾವತಿ ಮಾಡಿರುವುದು ಮತ್ತು ಪಾಸ್‌ ಬುಕ್‌ನಲ್ಲಿ ಅದನ್ನು ಎಂಟ್ರಿ ಮಾಡಿರುವುದು ಸೇರಿದಂತೆ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಆದರೂ ಅಸಲು ನೀಡಿ ಬಡ್ಡಿ ನೀಡುತ್ತಿಲ್ಲ. ಆಯೋಗಕ್ಕೂ ಎಲ್ಲ ದಾಖಲೆ ನೀಡಿದ್ದೇನೆ. ಆದರೂ ವಿನಃ ಕಾರಣ ಹೆದರಿಸುತ್ತಿದ್ದಾರೆ ಎಂದು ವೆಂಕಟೇಶ್‌ ಕಾಮತ್‌ ಅವರು ನೋವು ತೋಡಿಕೊಂಡರು.

 

ಟಾಪ್ ನ್ಯೂಸ್

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Scanning Center ಭ್ರೂಣಪತ್ತೆ ತಡೆಗೆ ಅಧಿಕಾರಿಗಳು ಎಚ್ಚರದಿಂದಿರಿ

Scanning Center ಭ್ರೂಣಪತ್ತೆ ತಡೆಗೆ ಅಧಿಕಾರಿಗಳು ಎಚ್ಚರದಿಂದಿರಿ

KKota Srinivas Poojary ಕರ್ನಾಟಕದಲ್ಲಿ ಗೊಂದಲದ ರಾಜಕಾರಣ

Kota Srinivas Poojary ಕರ್ನಾಟಕದಲ್ಲಿ ಗೊಂದಲದ ರಾಜಕಾರಣ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

shivamogga

Shimoga; ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಸಚಿವ ಕುಮಾರಸ್ವಾಮಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.