ಜೀವ ಪಣಕ್ಕಿಟ್ಟು ಸಂಚರಿಸಬೇಕಾದ ಅನಿವಾರ್ಯತೆ


Team Udayavani, Aug 20, 2018, 6:00 AM IST

1808ra3e-1.jpg

ಪಡುಬಿದ್ರಿ: ಪಡುಬಿದ್ರಿ ಬೆಳೆಯುತ್ತಿರುವ ಪಟ್ಟಣ ಪ್ರದೇಶವಾಗಿದ್ದು ಸದ್ಯದಲ್ಲೇ ರಾಜಕೀಯ ಇಚ್ಛಾಶಕ್ತಿಯಿದ್ದಲ್ಲಿ  ಪ. ಪಂ. ಮಟ್ಟಕ್ಕೇರಲೂ ಉದ್ಯುಕ್ತವಾಗಿರುವ ಊರು. ಇದು ಪಶ್ಚಿಮ ಕರಾವಳಿಯ ರಾಷ್ಟ್ರೀಯ ಹೆದ್ದಾರಿ-6 ಹಾಗೂ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿ 1 ಸಂದಿಸುವ ಸ್ಥಳವೂ ಹೌದು. ಆದರೆ ಇಲ್ಲಿನ ಮುಖ್ಯ ಭಾಗದ ಜಂಕ್ಷನ್‌ನಿಂದ  ಕಾರ್ಕಳಕ್ಕೆ ಹೋಗಬೇಕಾಗಿರುವವರು ಜೀವ ಪಣಕ್ಕಿಟ್ಟು ಸಾಗಬೇಕಾದ ಸ್ಥಿತಿಯಿದೆ.

ಹೆದ್ದಾರಿ-ರಾಜ್ಯ ಹೆದ್ದಾರಿ ಜಂಕ್ಷನ್‌ ಕುರಿತ 
ಚಿತ್ರಣವೇ ಸ್ಪಷ್ಟವಾಗಿಲ್ಲ

ಎಲ್ಲಿಯೂ ವಿಳಂಬವಾಗದ ಹೆದ್ದಾರಿ ಚತುಃಷ್ಪಥ ಕಾಮಗಾರಿ ಪಡುಬಿದ್ರಿಯಲ್ಲಿ ವರ್ಷಾನು ಗಟ್ಟಲೆಯಾಗಿ ಆಮೆ ನಡಿಗೆಯಲ್ಲೇ ಸಾಗುತ್ತಿದೆ. ರಾಜ್ಯ ಹೆದ್ದಾರಿ 1ರ ದ್ವಿಪಥ ಕಾರ್ಯವು ಆರ್‌. ಎನ್‌. ಶೆಟ್ಟಿ ಕಂಪೆನಿ ಮೂಲಕವಾಗಿ ಕೆಶಿಪ್‌ ಮುಖಾಂತರ ನಡೆದಿದೆ. ಈ ರಸ್ತೆಯ ಮೂಲಕ ಜಿಲ್ಲೆಯ ಎರಡು ಬೃಹತ್‌ ಯೋಜನೆಗಳಾದ ಉಡುಪಿ ಪವರ್‌ ಕಾರ್ಪೊರೇಶನ್‌ ಮತ್ತು ಸುಜ್ಲಾನ್‌ ಕಂಪೆನಿಗಳಿಗೆ ಸಾಗಬೇಕಾದ ಬೃಹತ್‌ ವಾಹನಗಳು, ಟ್ರೇಲರುಗಳು ಸಾಗಬೇಕಾಗಿದೆ. ಪಡುಬಿದ್ರಿಯಲ್ಲಿ ಇದ್ದಲ್ಲೇ ಹೆದ್ದಾರಿ ಚತುಃಷ್ಪಥಗೊಳಿಸುವ ಕಾಮಗಾರಿ ಈಗ ನಡೆಯುತ್ತಿದೆ. ಈ ನಡುವೆ ಕಾರ್ಕಳ ರಾಜ್ಯ ಹೆದ್ದಾರಿಗೆ ಅನೇಕ ಘನ ವಾಹನಗಳು ಮಂಗಳೂರು ಭಾಗದಿಂದ ಆಗಮಿಸಿ ಪಡುಬಿದ್ರಿಯಲ್ಲಿ ಕಾರ್ಕಳ ರಸ್ತೆಗೆ ಹೇಗೆ ತಿರುಗಿ ಸಾಗಬೇಕೆಂಬ ಚಿತ್ರಣವು ಇದುವರೆಗೂ ಸ್ಪಷ್ಟಗೊಂಡಿಲ್ಲ. 

ಯರ್ರಾಬಿರ್ರಿ ವಾಹನ ಸಂಚಾರ – ಪಾದಚಾರಿಗಳಿಗೆ ಸಂಚಾರ
ಸಂಚಾರ ದಟ್ಟಣೆಯ ವೇಳೆಗಳಲ್ಲಿ ಈಗಲೂ ವಾಹನದಟ್ಟಣೆಯುಂಟಾಗಿ ಬಸ್ಸು, ಲಾರಿ, ಕಾರು, ರಿಕ್ಷಾ, ದ್ವಿಚಕ್ರ ಸವಾರರ ಒತ್ತಡಗಳಿಂದ ಈ ಪ್ರದೇಶವು ಪಾದಚಾರಿಗಳ ಸಂಚಾರಕ್ಕೇ ಎರವಾಗುತ್ತಿದೆ.
 
ರಾಷ್ಟ್ರೀಯ ಹೆದ್ದಾರಿ ಚತುಃಷ್ಪಥದ ಪಶ್ಚಿಮ ಭಾಗವನ್ನು ಪಲ್ಲವಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಎದುರಿನವರೆಗೆ ತಾತ್ಕಾಲಿಕವಾಗಿ ತೆರೆಯಲಾಗಿದೆ. ಈ ಭಾಗದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆಯ ಭಾಗದಿಂದ ವಾಹನಗಳು ಬರುತ್ತಾ ಹೆದ್ದಾರಿಯನ್ನು ಪ್ರವೇಶಿಸಿ ಉಡುಪಿ, ಕಾರ್ಕಳದತ್ತ ಅಥವಾ ಮಂಗಳೂರಿನ ಕಡೆಗೆ ಸಾಗಬೇಕಿರುತ್ತದೆ. ಹೆದ್ದಾರಿಯಲ್ಲೇ ಮಂಗಳೂರಿನಿಂದ ಸಾಗಿ ಬಂದ ವಾಹನಗಳು ಕಾರ್ಕಳದತ್ತಲೋ ಅಥವಾ ಉಡುಪಿಯತ್ತಲೋ ಹೋಗಬೇಕು. ಈ ಮಧ್ಯೆ ಉಡುಪಿ, ಕಾರ್ಕಳದಿಂದ ಬರುವ ವಾಹನಗಳು ಪಲ್ಲವಿ ಬಾರ್‌ ಎಂಡ್‌ ರೆಸ್ಟೋರೆಂಟ್‌ ಎದುರಿನಿಂದ ಉಡುಪಿಯತ್ತ ತಿರುವು ಪಡೆದುಕೊಳ್ಳುತ್ತಿರುತ್ತವೆ. ಈ ಮಧ್ಯೆಯೇ ಪಾದಚಾರಿಗಳು ರಸ್ತೆ ದಾಟುತ್ತಿರುತ್ತಾರೆ. ಇಂತಹ‌ ಸನ್ನಿವೇಶದಲ್ಲಿ ವಾಹನಗಳು ತಮ್ಮ ಸರ್ಕಸ್‌ ಮುಂದುವರಿಸುತ್ತಾ ಸಾಗಬೇಕು. ಇದು ಈಗಿನ ಪರಿಸ್ಥಿತಿಯಾದರೆ ಇಲ್ಲಿನ ಬೃಹತ್‌ ಯೋಜನೆಗಳಿಗೆ ಸಾಗಬೇಕಾದ ಟ್ರೇಲರ್‌ಗಳ ಸಹಿತ ಘನ ವಾಹನಗಳು ಯಾವ ರೀತಿ ಸಾಗಬೇಕೆನ್ನುವುದು ಇದುವರೆಗೂ ಅಸ್ಪಷ್ಟವಾಗಿದೆ.

ಮಾಹಿತಿ,ಸ್ಪಷ್ಟ ಚಿತ್ರಣ ಇಲ್ಲ 
ಕಾರ್ಕಳ ಜಂಕ್ಷನ್‌ನಲ್ಲಿ ಸದ್ಯಕ್ಕೆ ವಾಹನದಟ್ಟಣೆಯನ್ನು ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ಗ‌ಳನ್ನು ನಿಯೋಜಿಸಿ ನಿಭಾಯಿಸುತ್ತಿದ್ದೇವೆ. ಆದರೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಇಲಾಖೆಗೂ ಕಗ್ಗಂಟಿನ ಸನ್ನಿವೇಶವಿದೆ. ಹೆದ್ದಾರಿ ಮತ್ತು ಕಾರ್ಕಳ ಜಂಕ್ಷನ್‌ ತಿರುವುಗಳು ಯಾವ ರೀತಿಯಾಗಿರುತ್ತವೆ ಎಂಬ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಕ್ಷೆಯ ಬಗೆಗೆ ಒಂದಿನಿತೂ ತಮ್ಮ ಅರಿವಿಗೆ ಬಂದಿಲ್ಲ. ನವಯುಗ ನಿರ್ಮಾಣ ಕಂಪೆನಿಯೂ ಬಾಯಿ ಬಿಡುತ್ತಿಲ್ಲ .
– ಸತೀಶ್‌, 
ಪಿಎಸ್‌ಐ,ಪಡುಬಿದ್ರಿ ಠಾಣೆ

ಪಡುಬಿದ್ರಿಯಲ್ಲಿ ತೀರಾ ಇಕ್ಕಟ್ಟಿನಲ್ಲಿ ವಾಹನ ಸವಾರರಿಗೆ ದುಃಸಪ್ನವಾಗಿರುವ ರಾಷ್ಟ್ರೀಯ ಹೆದ್ದಾರಿ -ರಾಜ್ಯ ಹೆದ್ದಾರಿ ಸಂದಿಸುವ ಮುಖ್ಯ ಜಂಕ್ಷನ್‌.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.