4ನೇ ಶನಿವಾರ ಸರಕಾರಿ ರಜೆ, ಸರಕಾರಿ ಕಚೇರಿಗಳಲ್ಲಿ ಜನಸಂಖ್ಯೆ ವಿರಳ
Team Udayavani, Jun 23, 2019, 5:40 AM IST
ಕುಂದಾಪುರ: ರಾಜ್ಯ ಸರಕಾರದ ಆದೇಶದಂತೆ 4ನೇ ಶನಿವಾರವೂ ಕೂಡ ಸರಕಾರಿ ರಜೆ ಘೋಷಿಸಲಾಗಿದ್ದು, ಅದರಂತೆ ನಾಲ್ಕನೇ ಶನಿವಾರವಾದ ಜೂ.22ರಂದು ಕುಂದಾಪುರದ ತಾ. ಪಂ. ಹಾಗೂ ಮಿನಿ ವಿಧಾನಸೌಧಕ್ಕೂ ರಜೆ ಸಾರಲಾಗಿದ್ದು, ಇದರಿಂದ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ.
ಮಿನಿ ವಿಧಾನಸೌಧದಲ್ಲಿ ಹಿಂದಿನ ದಿನಗಳಲ್ಲಿ ಬಂದಿದ್ದ ಜನರಿಗೆ ಈ ಮೊದಲೇ 4ನೇ ಶನಿವಾರ ರಜೆ ಎಂದು ತಿಳಿಸಿದ್ದರಿಂದ ಆಧಾರ್ ತಿದ್ದುಪಡಿ, ಪಡಿತರ ಚೀಟಿ ತಿದ್ದುಪಡಿ, ಜಾಗದ ನೋಂದಣಿ ಸಹಿತ ಯಾವುದೇ ಕೆಲಸಕ್ಕೆ ಆಗಮಿಸುವವರ ಸಂಖ್ಯೆ ವಿರಳವಾಗಿತ್ತು. ಆದರೂ ಮಿನಿ ವಿಧಾನಸೌಧದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಗ್ರಾಮೀಣ ಭಾಗದಿಂದ ರಜೆ ವಿಷಯ ತಿಳಿಯದೇ 4-5 ಜನ ಬಂದಿರಬಹುದು ಎನ್ನುವುದು ಇಲ್ಲಿದ್ದ ಸಿಬಂದಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಇನ್ನು ಮಿನಿವಿಧಾನಸೌಧದಲ್ಲಿ ‘ಇಂದು ರಜೆ’ ಎಂದು ತಿಳಿಸುವ ಫಲಕವನ್ನು ಹೊರಗಡೆ ಹಾಕಲಾಗಿತ್ತು. ಆದರೆ ಕುಂದಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಾತ್ರ ಈ ತರಹ ರಜೆ ಎಂದು ಬಂದವರಿಗೆ ತಿಳಿಸುವ ಯಾವುದೇ ನೋಟಿಸ್ಗಳನ್ನು ಹಾಕಿರ ಲಿಲ್ಲ. ಇದರಿಂದ ತೀರಾ ಗ್ರಾಮೀಣ ಪ್ರದೇಶಗಳಿಂದ ಬಂದವರಿಗೆ ಕಚೇರಿಗೆ ಬೀಗ ಹಾಕಿರುವುದು ಯಾಕೆಂದು ತಿಳಿಯದೇ ಹಾಗೇ ವಾಪಸು ಹೋದ ನಿದರ್ಶನಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.