Ekadashi ಪ್ರಥಮನ ಏಕಾದಶಿ: ಭಕ್ತರಿಗೆ ತಪ್ತಮುದ್ರಾಧಾರಣೆ


Team Udayavani, Jul 17, 2024, 11:43 PM IST

Ekadashi ಪ್ರಥಮನ ಏಕಾದಶಿ: ಭಕ್ತರಿಗೆ ತಪ್ತಮುದ್ರಾಧಾರಣೆ

ಉಡುಪಿ/ಮಂಗಳೂರು: ಉಡುಪಿ ಶ್ರೀಕೃಷ್ಣಮಠ ಮತ್ತಿತರ ಕಡೆ ವಿವಿಧ ಮಠಾಧೀಶರು ಬುಧವಾರ ಪ್ರಥಮನ ಏಕಾದಶಿಯಂದು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.

ಶ್ರೀಕೃಷ್ಣ ಮಠದಲ್ಲಿ ಪರ್ಯಾಯ  ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಬೆಳಗ್ಗಿನಿಂದ ಅಪರಾಹ್ನದ ವರೆಗೆ ಮತ್ತು ಸಂಜೆ ವೇಳೆ ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು.

ಜನನಿಬಿಡತೆ ಹಿನ್ನೆಲೆಯಲ್ಲಿ ಭೋಜನ ಶಾಲೆಯಲ್ಲಿ ಮುದ್ರಾಧಾರಣೆಯನ್ನು ನಡೆಸಲಾಯಿತು. ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಮಠಾಧೀಶರು ಭಕ್ತರ ತೋಳಿನಲ್ಲಿ ಮುದ್ರಿಸಿದರು. ಈ ಪ್ರಯುಕ್ತ ಬೆಳಗ್ಗೆ 8 ಗಂಟೆಯೊಳಗೆ ಮಹಾಪೂಜೆಯನ್ನು ನೆರವೇರಿಸಲಾಯಿತು.

ಶಯನಿ ಏಕಾದಶಿ ಪ್ರಯುಕ್ತ ಹಲವು ದೇವಸ್ಥಾನಗಳಲ್ಲಿ ನಿರಂತರ ಭಜನೆ, ಪೂಜಾದಿಗಳು ನಡೆದವು. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಮಠಗಳಲ್ಲಿ, ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅದ ಮಾರು ಮೂಲಮಠ, ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಸುಬ್ರಹ್ಮಣ್ಯ ಮಠಾಧೀಶರು ಉಜಿರೆ ಜನಾ ರ್ದನ ದೇವ ಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಮಜಲು ಮಾರು ಉಮಾಮಹೇಶ್ವರ ದೇವಸ್ಥಾನ, ಸುಬ್ರಹ್ಮಣ್ಯ ಮಠ, ಸುಳ್ಯದ ರಾಘವೇಂದ್ರ ಮಠದಲ್ಲಿ, ಚಿತ್ರಾಪುರ ಮಠಾಧೀಶರು ಸುರತ್ಕಲ್‌ ಸಮೀಪದ ಚಿತ್ರಾಪುರ ಮಠ, ಎಲ್ಲೂರು ಕೆಮುಂಡೇಲು ಪಾಂಡುರಂಗ ಭಜನ ಮಂಡಳಿಯಲ್ಲಿ, ಗೃಹಸ್ಥರು ಮುದ್ರಾಧಾರಣೆ ನಡೆಸುವ ಏಕೈಕ ಸ್ಥಳವಾದ ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ನರಹರಿ ಉಪಾಧ್ಯಾಯರು ಮುದ್ರಾಧಾರಣೆ ನಡೆಸಿದರು.

ಕಾಣಿಯೂರು ಶ್ರೀಗಳು ತಿರುವನಂತಪುರ, ತ್ರಿಶೂರ್‌ನಲ್ಲಿ, ಅದಮಾರು ಹಿರಿಯ ಶ್ರೀಗಳು ಬೆಂಗಳೂರಿನ ಬಸವನಗುಡಿ ಪುತ್ತಿಗೆ ಮಠದಲ್ಲಿ, ಸಂಜೆ ಬಳ್ಳಾರಿಯಲ್ಲಿ, ಸೋದೆ ಶ್ರೀಗಳು ಬೆಂಗಳೂರಿನ ಶ್ರೀಕೃಷ್ಣವಾದಿರಾಜ ಮಂದಿರದಲ್ಲಿ, ಪೇಜಾವರ ಶ್ರೀಗಳು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಚೆನ್ನೈ ಟಿ. ನಗರ ರಾಘವೇಂದ್ರ ಮಠ, ಪಲಿಮಾರು ಉಭಯ ಮಠಾಧೀಶರು ಬೆಂಗಳೂರು ಮಲ್ಲೇಶ್ವರದ ಪಲಿಮಾರು ಮಠ, ಮೈಸೂರು, ಕೆ.ಆರ್‌. ನಗರದಲ್ಲಿ, ಭಂಡಾರಕೇರಿ ಶ್ರೀಗಳು ಹುಬ್ಬಳ್ಳಿ ರಾಘವೇಂದ್ರ ಮಠದಲ್ಲಿ ಮುದ್ರಾಧಾರಣೆ ನಡೆಸಿದರು.

ಟಾಪ್ ನ್ಯೂಸ್

Accident-Logo

Accident: ದುಬಾೖಯಲ್ಲಿ ಅಪಘಾತ: ಗೋಕಾಕದ ನಾಲ್ವರ ಸಾವು

Ravikumar

MUDAದಲ್ಲಿ ನಡೆದ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಎಂಎಲ್‌ಸಿ ರವಿಕುಮಾರ್‌

DK-Shiva-Kumar

By Election: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ. ಶಿವಕುಮಾರ್‌ ಪುನರುಚ್ಚಾರ

Rastra-pathi-Bhavan

CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮಾಡಿದ್ದ ಮನವಿಗೆ ಸ್ಪಂದನೆ

air india

Air India ಜತೆ ವಿಲೀನ: ಸೆ.3ರ ಬಳಿಕ ವಿಸ್ತಾರ ಟಿಕೆಟ್‌ ಬುಕ್ಕಿಂಗ್‌ ಇಲ್ಲ!

Supreme Court

Supreme Court: ಇತ್ಯರ್ಥಕ್ಕೆ ಬಾಕಿ ಉಳಿದಿವೆ 83 ಸಾವಿರ ಪ್ರಕರಣಗಳು

Congress-Symbol

AICC: ರಾಜ್ಯಕ್ಕೆ ಕಾಂಗ್ರೆಸ್‌ನಿಂದ ನಾಲ್ವರು ಕಾರ್ಯದರ್ಶಿಗಳ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಗೀತಾರ್ಥ ಚಿಂತನೆ- 22: ದುಷ್ಟರಿಗೆ ಬೆಂಬಲ ಕೊಡುವುದೂ ಅಧರ್ಮ

Udupi ಗೀತಾರ್ಥ ಚಿಂತನೆ- 22: ದುಷ್ಟರಿಗೆ ಬೆಂಬಲ ಕೊಡುವುದೂ ಅಧರ್ಮ

Karkala ಅತ್ಯಾಚಾರ ಪ್ರಕರಣ: ಬಗೆದಷ್ಟೂ ವಿಸ್ತರಿಸುತ್ತಿದೆ ಡ್ರಗ್ಸ್‌ ಜಾಲ

Karkala ಅತ್ಯಾಚಾರ ಪ್ರಕರಣ: ಬಗೆದಷ್ಟೂ ವಿಸ್ತರಿಸುತ್ತಿದೆ ಡ್ರಗ್ಸ್‌ ಜಾಲ

Fraud Case ಟ್ರೇಡಿಂಗ್‌ ಲಾಭಾಂಶ 2 ಲಕ್ಷ ರೂ. ವಂಚನೆ

Fraud Case ಟ್ರೇಡಿಂಗ್‌ ಲಾಭಾಂಶ 2 ಲಕ್ಷ ರೂ. ವಂಚನೆ

Udupi ಇಂದ್ರಾಳಿ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Udupi ಇಂದ್ರಾಳಿ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

1-arif-kk

Udupi;ಕೃಷ್ಣಮಾಸೋತ್ಸವ ಸಮಾರೋಪ:ಕೇರಳ ರಾಜ್ಯಪಾಲ ಆರೀಫ್ ಖಾನ್ ಶ್ರೀಕೃಷ್ಣ ಮಠಕ್ಕೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Accident-Logo

Accident: ದುಬಾೖಯಲ್ಲಿ ಅಪಘಾತ: ಗೋಕಾಕದ ನಾಲ್ವರ ಸಾವು

Ravikumar

MUDAದಲ್ಲಿ ನಡೆದ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಎಂಎಲ್‌ಸಿ ರವಿಕುಮಾರ್‌

DK-Shiva-Kumar

By Election: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ. ಶಿವಕುಮಾರ್‌ ಪುನರುಚ್ಚಾರ

Rastra-pathi-Bhavan

CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮಾಡಿದ್ದ ಮನವಿಗೆ ಸ್ಪಂದನೆ

Parliment New

Waqf Act: ಜನರ ಸಲಹೆ ಸ್ವೀಕಾರಕ್ಕೆ ಜೆಪಿಸಿ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.