ಪೂರ್ಣಗೊಳ್ಳದ ಕಾಮಗಾರಿಯಿಂದ ಗ್ರಾಮಸ್ಥರ ನಿರೀಕ್ಷೆ ಹುಸಿ

ನಿರುಪಯೋಗಿ ಸನ್ಯಾಸಿ ಬೆಟ್ಟು ನೂತನ ಕಿರು ಸೇತುವೆ

Team Udayavani, Sep 7, 2019, 5:30 AM IST

0609KLRE4

ಕೊಲ್ಲೂರು: ಚಿತ್ತೂರು ಗ್ರಾ.ಪಂ. ವ್ಯಾಪ್ತಿಯ ಸನ್ಯಾಸಿಬೆಟ್ಟಿನಲ್ಲಿನ ಹೊಳೆ ದಾಟಲು ನಿರ್ಮಾಣ ಗೊಂಡಿರುವ ಕಿರು ಸೇತುವೆ ಬಳಕೆಗೆ ಬಾರದೇ ನಿರುಪಯೋಗಿ ಆಗಿದ್ದು ಗ್ರಾಮಸ್ಥರ ಬಹಳಷ್ಟು ವರ್ಷಗಳ ನಿರೀಕ್ಷೆ ಹುಸಿಯಾಗಿದೆ.

10 ಲಕ್ಷ ರೂ. ವೆಚ್ಚದ ಕಿರುಸೇತುವೆ
ಸುಮಾರು 3 ವರುಷಗಳ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಕಿರುಸೇತುವೆ ಪೂರ್ಣಗೊಳ್ಳದಿರುವುದು ಆ ಭಾಗದ ನಿವಾಸಿಗಳಿಗೆ ನಿತ್ಯ ಗೋಳಿನ ಕತೆಯಾಗಿದೆ. ಬಹಳಷ್ಟು ನಿರೀಕ್ಷೆ ಹಾಗೂ ಆತಂಕದ ವಾತಾವರಣದಿಂದ ಮುಕ್ತಿ ದೊರಕೀತು ಎಂಬ ಆಶಾಭಾವನೆಯಿಂದ ಜೀವಿಸುತ್ತಿರುವ ಮಂದಿಗೆ ನಿರಾಶೆಯಾಗಿದೆ.

ಜೀವ ಬಲಿತೆಗೆದ ಸನ್ಯಾಸಿ ಬೆಟ್ಟು
ಹೊಳೆಯ ಮರದ ದಿಣ್ಣೆ ಮಾರ್ಗ
ಸನ್ಯಾಸಿಬೆಟ್ಟು ಪರಿಸರದಲ್ಲಿ ವಾಸವಾಗಿರುವ 8,10 ಕುಟುಂಬಗಳಿಗೆ ಚಿತ್ತೂರು ಪೇಟೆಗೆ ಬರಲು ದಾಟಬೇಕಾದ ಹೊಳೆಗೆ ಮರದ ದಿಣ್ಣೆ ಜೋಡಿಸಿ ವ್ಯವಸ್ಥೆ ಗೊಳಿಸಲಾಗಿತ್ತು. ಮಳೆಗಾಲದಲ್ಲಿ ಮರದ ದಿಣ್ಣೆಯ ಮೇಲೆ ಸರ್ಕಸ್‌ ಮಾಡಿ ಅಪಾಯದ ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಇತ್ತು. 2 ವರುಷಗಳ ಹಿಂದೆ ತಾಯಿಯೊಡನೆ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ಬಾಲಕಿ ಕಾಲು ಜಾರಿ ಹೊಳೆಗೆ ಬಿದ್ದು ನೀರುಪಾಲಾಗಿ ಮೃತಪಟ್ಟಿದ್ದಳು. ತದನಂತರ ವಯೋವೃದ್ಧರು ಸಹಿತ ಅನೇಕ ಮಂದಿ ಕಾಲು ಜಾರಿ ನೀರಿಗೆ ಬಿದ್ದು ಬದುಕುಳಿದ ಘಟನೆ ನಡೆದಿತ್ತು. ಗ್ರಾಮಸ್ಥರ ಮನವಿಯಂತೆ ಮಾಜಿ ಶಾಸಕರು ಕಿರು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಗೊಳಿಸಿದ್ದರು.

ಪೂರ್ಣಗೊಳ್ಳದ ರಿವಿಟ್‌ಮೆಂಟ್‌ ಕಾಮಗಾರಿ
ಕಿರು ಸೇತುವೆಯನ್ನು ಪೂರ್ಣ ಗೊಳಿಸಿರುವ ಕರಾವಳಿ ಅಭಿವೃದ್ಧಿ ಪ್ರಾ ಕಾರ ಮುಂದುವರಿದ 2 ಪಾರ್ಶ್ವದಲ್ಲಿನ ತಡೆಬೇಲಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸದೇ ಕೈಚೆಲ್ಲಿ ಕುಳಿತಿರುವುದು ಅಲ್ಲಿನ ನಿವಾಸಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಸೇತುವೆಯ 2 ಪಾರ್ಶ್ವದಲ್ಲಿನ ಮಣ್ಣಿನ ತಡೆ ಗೋಡೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ.

ತಾತ್ಕಾಲಿಕ ನೆಲೆಯಲ್ಲಿ ಪಾದಚಾರಿಗಳಿಗೆ ಸಾಗಲು ನಿರ್ಮಿಸಲಾಗಿರುವ ಮರದ ದಿಣ್ಣೆಗಳು ಕುಸಿದಿದ್ದು ಅಪಾಯದ ಅಂಚಿನಲ್ಲಿವೆ. ಇದಕ್ಕೊಂದು ಪೂರ್ಣ ಪ್ರಮಾಣದ ತಡೆಬೇಲಿ ನಿರ್ಮಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಂಪರ್ಕ ಕಡಿಯುವ ಭೀತಿ ಇದೆ.

ಶಾಸಕರಿಗೆ ಮನವಿ
ನಿರುಪಯೋಗಿ ಸೇತುವೆಯನ್ನು ರಿವಿಟ್‌ಮೆಂಟ್‌ ಮಾಡಿ ಪೂರ್ಣಗೊಳಿಸಲು ಲಕ್ಷಾಂತರ ರೂ. ವೆಚ್ಚ ತಗಲುವುದು. ಪಂ.ನಿಂದ ಅಷ್ಟೊಂದು ಸಂಪನ್ಮೂಲ ಕ್ರೋಡೀಕರಣ ಅಸಾಧ್ಯ. ಬೈಂದೂರು ಶಾಸಕರಿಗೆ ಮನವಿ ಸಲ್ಲಿಸಲಾಗುವುದು.
– ಸಂತೋಷ ಮಡಿವಾಳ,
ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.

ಪರ್ಯಾಯ ವ್ಯವಸ್ಥೆ
ಸನ್ಯಾಸಿ ಬೆಟ್ಟುವಿನ ಕಿರು ಸೇತುವೆಯ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸುವಲ್ಲಿ ಕ್ರಮ ಕೈಗೊಳ್ಳುತ್ತೇನೆ. ಆ ಭಾಗದ ನಿವಾಸಿಗಳ ಆತಂಕ ಬಗೆ ಹರಿಸಲಾಗುವುದು.
-ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ಕ್ಷೇತ್ರ

ಸಂಪನ್ಮೂಲ ಕೊರತೆ
3 ವರ್ಷಗಳ ಹಿಂದೆ ಕಿರು ಸೇತುವೆ ನಿರ್ಮಾಣಗೊಂಡಿದೆ. ಪೂರ್ಣಗೊಳಿಸಲು ಆ ಸಂಪನ್ಮೂಲ ಕೊರತೆ ಇದೆ. ಶಾಸಕರು ಹಾಗೂ ಜಿ.ಪಂ. ನೆರವಿನೊಂದಿಗೆ ಮಿಕ್ಕುಳಿದ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು.
– ಉದಯ.ಜಿ ಪೂಜಾರಿ,
ತಾ.ಪಂ. ಸದಸ್ಯರು

– ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.