ಮಸ್ಕತ್ನಲ್ಲಿ ಪುತ್ತಿಗೆಶ್ರೀಗಳಿಂದ ಗೀತಾಜಯಂತಿ
Team Udayavani, Dec 8, 2019, 10:16 PM IST
ಉಡುಪಿ: ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಓಮನ್ನ ಮಸ್ಕತ್ನಲ್ಲಿ ರವಿವಾರ ಗೀತಾ ಜಯಂತಿಯನ್ನು ಆಚರಿಸಿದರು.
ಮಸ್ಕತ್ನಲ್ಲಿರುವ ಗುಜರಾತಿ ಕಿಂಜಿ ಸಮುದಾಯದ ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗೀತಾ ಜಯಂತಿಯೂ, ಏಕಾದಶಿಯೂ ಆದ ಕಾರಣ ಸುದರ್ಶನ ಹೋಮವನ್ನು ನಡೆಸಿದ ಬಳಿಕ ಸ್ವಾಮೀಜಿಯವರು ತಪ್ತಮುದ್ರಾಧಾರಣೆಯನ್ನು ಭಕ್ತರಿಗೆ ನೀಡಿದರು. ಸುದರ್ಶನ ಹೋಮವನ್ನು ವೈದಿಕರು ನಡೆಸಿದರು.
ಗೀತಾಚಾರ್ಯನಾದ ಶ್ರೀಕೃಷ್ಣ ಇದೇ ದಿನ ಅಮೃತಪ್ರಾಯವಾದ ಗೀತೆಯನ್ನು ಮನುಕುಲವನ್ನು ದೃಷ್ಟಿಯಲ್ಲಿರಿಸಿಕೊಂಡು ಅರ್ಜುನನ ಮೂಲಕ ಬೋಧಿಸಿದ. ಇದೊಂದು ಅದ್ಭುತವಾದ ಮನಃಶಾಸ್ತ್ರೀಯ ಗ್ರಂಥವೆಂದು ಜಗತ್ತಿನಾದ್ಯಂತ ವಿದ್ವಾಂಸರು ಕೊಂಡಾಡಿದ್ದಾರೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದಿನೇ ದಿನೇ ಹೆಚ್ಚುತ್ತಿರುವ ಸಾಮಾಜಿಕ, ಮಾನಸಿಕ ಸಮಸ್ಯೆಗಳನ್ನು ನೀಗಿಕೊಳ್ಳಬಹುದು ಎಂದು ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.