
ಕಂದಾಯ ಇಲಾಖೆ 11- ಇ ನಕ್ಷೆ 5,953 ಅರ್ಜಿ ಬಾಕಿ
ಆಕಾರ ಬಂದ್, ಪಹಣಿ, ಸರ್ವೇ ನಂಬರ್ ವ್ಯತ್ಯಾಸ
Team Udayavani, Oct 29, 2020, 4:22 AM IST

ಸಾಂದರ್ಭಿಕ ಚಿತ್ರ
ಉಡುಪಿ: ಭೂಮಿ ಮಾರಾಟ ಹಾಗೂ ಸಾಲ ಪಡೆಯಲು ಸಂಬಂಧಿಸಿದ ಪ್ರಮುಖ ದಾಖಲೆಯಾದ 11 -ಇ ನಕ್ಷೆ ಪಡೆಯಲು ಭೂ ಮಾಲಕರು ಪರದಾಡುತ್ತಿದ್ದಾರೆ.
ಸಾರ್ವಜನಿಕರ ಅಲೆದಾಟ
ಸಾರ್ವಜನಿಕರು 11 -ಇ ನಕ್ಷೆ ಕೋರಿ ಸಹಾಯಕ ಭೂ ದಾಖಲೆ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದಾಗ, ದಾಖಲೆಯಲ್ಲಿ ಆಕಾರ ಬಂದ್ ಮತ್ತು ಪಹಣಿ ದಾಖಲೆ ವ್ಯತ್ಯಾಸವಿದ್ದಲ್ಲಿ ಅಥವಾ ಪಹಣಿ ಲೋಪ-ದೋಷ ಇರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ಗೆ
ಕಡತವನ್ನು ವರ್ಗಾಯಿಸಲಾಗುತ್ತದೆ. ಇಂತಹ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ತ್ವರಿತ ಅರ್ಜಿ ವಿಲೇವಾರಿ ಮಾಡದ ಪರಿಣಾಮ ಜನರು 4-5 ವರ್ಷ ಗಳಿಂದ ತಾಲೂಕು ಕಚೇರಿಗಳಿಗೆ ಅಲೆದಾಡುವಂತಾಗಿದೆ.
ಸಮಸ್ಯೆ ಏನು?
ಸರ್ವೇ ನಂಬರ್, ಆಕಾರ ಬಂದ್, ಪಹಣಿ ವಿಸ್ತೀರ್ಣ ಈ ಮೂರು ದಾಖಲೆಗಳಲ್ಲಿ ಒಂದಕ್ಕೊಂದು ವ್ಯತ್ಯಾಸ ಕಂಡುಬಂದಂತೆ ಅರ್ಜಿಗಳ ವಿಲೇ ವಾರಿಗೆ ತೊಡಕುಂಟಾಗುತ್ತದೆ. ಸಾರ್ವ ಜನಿಕರು “ಇ’ ನಕ್ಷೆಗೂ ಮೊದಲೇ ದಸ್ತಾವೇಜು ಮೂಲಕ ಜಮೀನುಗಳು ವಹಿವಾಟುಗೊಂಡಿರುವಂತಹ ಪ್ರಕರಣದಲ್ಲಿ ಅರ್ಜಿ ವಿಲೇವಾರಿಗೆ ಸಮಸ್ಯೆಯಾಗಿದೆ. “ಇ’ ನಕ್ಷೆಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಕಾರ ಬಂದ್ ವಿಸ್ತೀರ್ಣ, ಪಹಣಿ ವಿಸ್ತೀರ್ಣ ಹೆಚ್ಚಾಗಿರುತ್ತದೆ. ಈ ಸಂದರ್ಭ ಪಹಣಿಯ ವಿಸ್ತೀರ್ಣ ಕಡಿತಗೊಳಿಸಲು ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ. ಇದಕ್ಕೆ ಒಪ್ಪದ ಪಹಣಿದಾರರು ಆಕ್ಷೇಪಣೆ ಸಲ್ಲಿಸುತ್ತಿರುವುದ ರಿಂದ ಇತ್ಯರ್ಥ ಮಾಡುವುದು ಇಲಾ ಖೆಗೂ ತಲೆನೋವಾಗಿದೆ. ಕಂದಾಯ ಸಂಬಂಧಿತ ಸೇವೆಯಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆದರೆ ಕಂದಾಯ ವಿಭಾಗದಲ್ಲಿ ಭೂಮಿ, ಕೃಷಿ ಜಮೀನು ಮಾರಾಟಕ್ಕೆ ಸಂಬಂಧಿಸಿ ಪ್ರಮುಖ ದಾಖಲೆಯಾದ 11-ಇ ನಕ್ಷೆ ಪಡೆ ಯಲು ಸಾರ್ವಜನಿಕರಿಗೆ ಸಾಕಷ್ಟು ತೊಡಕುಂಟಾಗಿದೆ.
324 ಅರ್ಜಿ ಮಾತ್ರ ವಿಲೇವಾರಿ
ಜಿಲ್ಲೆಯಲ್ಲಿ 11 – ಇ ನಕ್ಷೆಗೆ ಸಂಬಂಧಿಸಿ ಸೆಪ್ಟಂಬರ್ನಲ್ಲಿ ಹೊಸದಾಗಿ 356 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ ಕಳೆದ ತಿಂಗಳವರೆಗೆ 324 ಅರ್ಜಿಗಳು ವಿಲೇವಾರಿಯಾಗಿ 5,953 ಅರ್ಜಿಗಳು ಬಾಕಿಯಿವೆ. ಆಕಾರ ಬಂದ್, ಪಹಣಿ, ಸರ್ವೇ ನಂಬರ್ ವ್ಯತ್ಯಾಸಗಳಿಂದಾಗಿ ಅರ್ಜಿಗಳು ಬಾಕಿ ಇವೆ. ಕುಂದಾಪುರ 1,250, ಉಡುಪಿ 824, ಕಾರ್ಕಳ 710, ಬೈಂದೂರು 1,381, ಬ್ರಹ್ಮಾವರ 717, ಕಾಪು 699, ಹೆಬ್ರಿಯಲ್ಲಿ 372 ಅರ್ಜಿಗಳು ಬಾಕಿ ಇವೆ.
ಆದ್ಯತೆ ಮೇರೆಗೆ ವಿಲೇವಾರಿ
ಸರ್ವೇ ನಂಬರ್, ಆಕಾರ ಬಂದ್, ಪಹಣಿ ವಿಸ್ತೀರ್ಣ ದಾಖಲೆಗಳಲ್ಲಿ ಒಂದಕ್ಕೊಂದು ವ್ಯತ್ಯಾಸ ಕಂಡುಬಂದಂತಹ ಅರ್ಜಿಗಳ ವಿಲೇವಾರಿಗೆ ಮಾತ್ರ ತೊಡಕುಂಟಾಗಿದೆ. ಆದ್ಯತೆ ಮೇರೆಗೆ ಪ್ರಕರಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ
ಸೂಚನೆ ನೀಡಲಾಗಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ

BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.