ಉದಯವಾಣಿ ಸುವರ್ಣೋತ್ತರ ಸಂಭ್ರಮ : ಪತ್ರಿಕಾ ರಂಗದ ದಿಗ್ಗಜರ ಸಂಸ್ಮರಣೆ

ಕರಾವಳಿಗರು ಕನಸುಗಾರರಷ್ಟೇ ಅಲ್ಲ...

Team Udayavani, Nov 8, 2022, 11:25 AM IST

ಉದಯವಾಣಿ ಸುವರ್ಣೋತ್ತರ ಸಂಭ್ರಮ : ಪತ್ರಿಕಾ ರಂಗದ ದಿಗ್ಗಜರ ಸಂಸ್ಮರಣೆ

ಉಡುಪಿ : ಕರಾವಳಿಯ ಜನರು ಕನಸುಗಾರರು. ಕಂಡ ಕನಸನ್ನು ನನಸು ಮಾಡಲು ಕಾರ್ಯನಿರತ ವಾಗುವ ಪ್ರಯತ್ನಶೀಲರು ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಹೇಳಿದ್ದಾರೆ.

ಉದಯವಾಣಿ ಸುವರ್ಣೋ ತ್ತರ ಸಂಭ್ರಮದಂಗವಾಗಿ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ರವೀಂದ್ರ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಣಿಪಾಲದಲ್ಲಿ ಅರಳಿ ವಿವಿಧೆಡೆ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಧೀಮಂತ ಹಿರಿಯ 6 ಮಂದಿ ಸಾಧಕರ ಜನ್ಮಶತ ಮಾನೋತ್ತರ ಸಂಸ್ಮರಣೆ ಕಾರ್ಯ ಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಾವಳಿಗರು ಕನಸುಗಾರರಾದ ಕಾರಣವೇ ಬ್ಯಾಂಕ್‌, ಶಿಕ್ಷಣ, ವೈದ್ಯಕೀಯ, ಪತ್ರಿಕೋದ್ಯಮ ರಂಗ- ಹೀಗೆ ಎಲ್ಲವೂ ಈ ನೆಲದಲ್ಲಿ ಹುಟ್ಟಿ ಬೆಳೆದಿವೆ ಎಂದರು.

ಯುವ ಪೀಳಿಗೆಗೆ ಸ್ಫೂರ್ತಿ
52 ವರ್ಷಗಳ ಹಿಂದೆ “ಉದಯ ವಾಣಿ’, 50 ವರ್ಷಗಳ ಹಿಂದೆ “ತುಷಾರ’, 40 ವರ್ಷಗಳ ಹಿಂದೆ ತರಂಗ, “ತುಂತುರು’ ಆರಂಭವಾ ಗಿತ್ತು. 75 ವರ್ಷಗಳ ಹಿಂದೆ ಇದೇ ಮಣಿಪಾಲದಲ್ಲಿ ಈ ಆರು ಮಂದಿ ದಿಗ್ಗಜರು ಮುದ್ರಣದ ಜತೆಗೆ ಪತ್ರಿಕೆ ಆರಂಭಿಸಿದ್ದರು. ಸುದ್ದಿ ಸಂಗ್ರಹ, ಪ್ರಸಾರ, ವಿತರಣೆ ಎಲ್ಲವನ್ನು ಆ ಕಾಲದಲ್ಲಿ ಹೇಗೆ ಮಾಡುತ್ತಿದ್ದರು ಎಂಬುದನ್ನು ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಶ್ರೇಷ್ಠ ಸಾಧಕರನ್ನು ಗುರುತಿಸಿ, ಕುಟುಂಬ ವರ್ಗವನ್ನು ಗೌರವಿಸುವ ಮೂಲಕ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಂಡಂತಾಗಿದೆ ಎಂದರು.
ಬೊಮ್ಮಾಯಿ ಅವರನ್ನು ಎಂಜಿಎಂ ಕಾಲೇಜಿನ ವತಿಯಿಂದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಪೈ, ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಸಮ್ಮಾನಿಸಿದರು.

ಕರಾವಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಉದಯವಾಣಿ ಆಗ್ರಹ
ಕರಾವಳಿಯ ಕೈಗಾರಿಕೆ ಪ್ರದೇಶಗಳ ವಸ್ತು ಸ್ಥಿತಿಯ ಅವಲೋಕನ ಕುರಿತು “ಉದಯವಾಣಿ’ ಸರಣಿ ರೂಪದಲ್ಲಿ ಪ್ರಕಟಿಸಿದ ವರದಿಯ ಕಿರು ಪುಸ್ತಕವನ್ನು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿ, ಈ ವರದಿಗಳನ್ನು ಗಮನಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ವಿಚಾರ ಸಂಕಿರಣ
ಬೆಳಗ್ಗೆ ಆರುಮಂದಿ ಪತ್ರಿಕಾ ರಂಗದ ದಿಗ್ಗಜರ ಕುರಿತ ವಿಚಾರ ಗೋಷ್ಠಿಯನ್ನು ಜಿಲ್ಲಾಧಿಕಾರಿ ಕೂರ್ಮಾರಾವ್‌ ಉದ್ಘಾಟಿಸಿ, ಹಿರಿಯ ಸಾಧಕರ ಸಾಧನೆಯನ್ನು ಸ್ಮರಿಸಿದರು. ಜಿ.ಪಂ. ಸಿಇಒ ಪ್ರಸನ್ನ ಎಚ್‌. ಹಾಜರಿದ್ದರು. ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್‌ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಗೋಷ್ಠಿಯಲ್ಲಿ ಎಸ್‌.ಯು. ಪಣಿಯಾಡಿಯವರ ಬಗ್ಗೆ ಸಾಹಿತಿ ಪ್ರೊ| ಮುರಳೀಧರ ಉಪಾಧ್ಯ, ಪಾವೆಂ ಆಚಾರ್ಯರ ಕುರಿತು ಪಾ.ವೆಂ. ಆಚಾರ್ಯ ಟ್ರಸ್ಟ್ ನಿರ್ವಾಹಕ ವಿಶ್ವಸ್ತೆ ಬೆಂಗಳೂರಿನ ಛಾಯಾ ಉಪಾಧ್ಯ, ಕಮಲ್‌ ಹೈದರ್‌ ಬಗ್ಗೆ ಪ್ರೊ| ಕೆ.ಪಿ. ರಾವ್‌, ಬನ್ನಂಜೆ ರಾಮಾಚಾರ್ಯರ ಬಗ್ಗೆ ಲೇಖಕ ಡಾ| ಶ್ರೀಕಾಂತ್‌ ರಾವ್‌ ಸಿದ್ದಾಪುರ, ಬೈಕಾಡಿ ಕೃಷ್ಣಯ್ಯ ಅವರ ಬಗ್ಗೆ ಸಾಹಿತಿ ಬೆಳಗೋಡು ರಮೇಶ್‌ ಭಟ್‌, ಎಂ.ವಿ. ಹೆಗ್ಡೆಯವರ ಬಗ್ಗೆ ಸಂಶೋಧಕ ಡಾ| ಅನಿಲ್‌ ಕುಮಾರ್‌ ಶೆಟ್ಟಿ ವಿಚಾರ ಮಂಡಿಸಿದರು.

ಸಾಧಕರ ಕುಟುಂಬ ವರ್ಗಕ್ಕೆ ಗೌರವ
ಪತ್ರಿಕ ರಂಗದ ಸಾಧಕರಾದ ಎಂ.ವಿ. ಹೆಗ್ಡೆ ಅವರ ಪರವಾಗಿ ಅವರ ಪುತ್ರ ಡಾ| ಸನತ್‌ ಹೆಗ್ಡೆ, ಬನ್ನಂಜೆ ರಾಮಾಚಾರ್ಯರ ಪುತ್ರ ಸರ್ವಜ್ಞ ಬನ್ನಂಜೆ, ಕಮಲ್‌ ಹೈದರ್‌ ಅವರ ಬಂಧು ಇಕ್ಬಾಲ್‌ ಅಹಮ್ಮದ್‌ ಬೆಂಗಳೂರು, ಬೈಕಾಡಿ ಕೃಷ್ಣಯ್ಯ ಅವರ ಪುತ್ರ ಬಿ. ನರಹರಿ, ಎಸ್‌.ಯು. ಪಣಿಯಾಡಿಯವರ ಪರವಾಗಿ ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್‌, ಪಾವೆಂ ಆಚಾರ್ಯರ ಮೊಮ್ಮಗಳಾದ ಛಾಯಾ ಉಪಾಧ್ಯ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮ್ಮಾನಿಸಿದರು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.