ಶ್ರೀ ನವಗ್ರಹ ಪೂಜಾ ಪದ್ಧತಿ ಗ್ರಂಥ ಲೋಕಾರ್ಪಣೆ
Team Udayavani, Jul 5, 2017, 3:45 AM IST
ಶಿರ್ವ: ದೇವ ದೇವತೆಗಳ ಆರಾಧನೆಗೆ ವೇದ ಪ್ರತಿಪಾದ್ಯವಾದ ವಿಧಾನವೇ ಯಾಗ. ಭೂಗೋಳದಲ್ಲಿರುವ ಸಕಲ ಚರಾಚರ ಸೃಷ್ಠಿಯನ್ನು ಖಗೋಳದಲ್ಲಿರುವ ಗ್ರಹಗಳು ನಿಯಂತ್ರಿಸುತ್ತವೆ. ಇಡೀ ಜಗತ್ತಿನ ಆಗುಹೋಗುಗಳು ಗ್ರಹಗಳ ಸಂಚಾರಗತಿಯನ್ನು ಅವಲಂಬಿಸಿದ್ದು, ನವಗ್ರಹರ ಅನುಗ್ರಹದಿಂದ ಲೋಕ ಸುಭೀಕ್ಷೆ ಹಾಗೂ ಮನು ಕುಲದ ಉದ್ಧಾರವಾಗುವುದು ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಅವರು ಹಿರಿಯಡಕ ಮೂಲ ಪುತ್ತಿಗೆ ಮಠದಲ್ಲಿ ತಂತ್ರಿಶ್ರೀ ಪ್ರತಿಷ್ಠಾನದ ದ್ವಿತೀಯ ಕುಸುಮ ಶ್ರೀ ನವಗ್ರಹ ಪೂಜಾ ಪದ್ಧತಿಃ ಎಂಬ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನವಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ತಂತ್ರಿ ಶ್ರೀ ಪ್ರತಿಷ್ಠಾನದ ಸಂಚಾಲಕ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಆಗಮ ಪಂಡಿತ ಬ್ರಹ್ಮಶ್ರೀ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರು ವಹಿಸಿದ್ದರು.
ಸಂಗ್ರಾಹಕ ಅನಂತಮೂರ್ತಿ ಬೆಳ್ಳರ್ಪಾಡಿ, ಸಹಾಯಕ ಸಂಗ್ರಾಹಕ ಬೆಳ್ಳಿಬೆಟ್ಟು ಗಣೇಶ್ ಭಟ್, ಬೆಂಗಳೂರಿನ ಉದ್ಯಮಿ ಸುಧಾಕರ್,ವಿದ್ವಾನ್ ಕೊಡವೂರು ಸೀತಾರಾಮ ಆಚಾರ್ಯ,ವಿದ್ವಾನ್ ಶೀರೂರು ರಾಮದಾಸ ಭಟ್,ಹರಿಕೃಷ್ಣ ಕೇಂಜ ಮತ್ತಿತರರು ಉಪಸ್ಥಿತರಿದ್ದರು. ಪುತ್ತಿಗೆ ವಿದ್ಯಾಪೀಠದ ಮಹಾಪ್ರಬಂಧಕ ಚಂದ್ರಪ್ರಕಾಶ್ ಸ್ವಾಗತಿಸಿ, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ, ವಿದ್ವಾನ್ ಗೋವರ್ಧನ ಭಟ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.