![CT Ravi](https://www.udayavani.com/wp-content/uploads/2024/12/CT-Ravi-1-415x269.jpg)
ಖಾಸಗಿ ಪರೀಕ್ಷೆ: ಮೇಸ್ತ್ರಿಯಿಂದ ವ್ಯಾಪಾರಿವರೆಗೂ…
Team Udayavani, Mar 24, 2018, 6:25 AM IST
![230318use3.jpg](https://www.udayavani.com/wp-content/uploads/2018/03/24/230318use3.jpg)
ಉಡುಪಿ: ಹೇಗಾದರೂ ಎಸೆಸೆಲ್ಸಿ ಪರೀಕ್ಷೆ ಪಾಸು ಮಾಡಬೇಕೆಂಬ ಅದಮ್ಯ ಉತ್ಸಾಹ, ಅದಕ್ಕಾಗಿ ನಡೆಸಿದ ಶ್ರಮಕ್ಕೆ ಈ ಬಾರಿ ಫಲ ದೊರೆತೀತೆಂಬ ನಿರೀಕ್ಷೆ.
ಮಾ.23ರಂದು ಆರಂಭಗೊಂಡ ಎಸೆಸೆಲ್ಸಿ ಪರೀಕ್ಷೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದವರಲ್ಲಿ ಅನೇಕ ಮಂದಿ ನಾನಾ ವಿಧದ ಉದ್ಯೋಗ ಮಾಡಿಕೊಂಡಿರುವವರಿದ್ದರು. ಖಾಸಗಿ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳಲ್ಲಿ ಒಂದಾಗಿದ್ದ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ 191 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ತರುಣ ತರುಣಿಯರಿಂದ ಮೊದಲ್ಗೊಂಡು 38 ವರ್ಷ, 54 ವರ್ಷ ದಾಟಿದವರು ಕೂಡ ಪರೀಕ್ಷೆ ಬರೆದರು. ಪರೀಕ್ಷೆ ಮುಗಿಸಿ ಹೊರ ಬಂದವರ ಪೈಕಿ ಕೆಲವರನ್ನು “ಉದಯವಾಣಿ’ ಮಾತನಾಡಿಸಿದಾಗ ಖುಷಿಯಿಂದಲೇ ಪ್ರತಿಕ್ರಿಯಿಸಿದರು.”ಇಂದಿನ ಪರೀಕ್ಷೆ ಸುಲಭವಾಗಿತ್ತು. ತೇರ್ಗಡೆಯಾಗುವ ನಿರೀಕ್ಷೆ ಇದೆ. ನಾನು ಮೇಸ್ತ್ರಿಯಾಗಿ ಕಳೆದ 8-9 ವರ್ಷಗಳಿಂದ ದುಡಿಯುತ್ತಿದ್ದೇನೆ. ಹೇಗಾದರೂ ಎಸೆಸೆಲ್ಸಿ ಪಾಸ್ ಮಾಡಬೇಕು. ಕನಿಷ್ಠ ವಾಹನ ಚಾಲಕನಾಗಿ ದುಡಿಯಬೇಕು, ಇಲ್ಲವೆ ಬೇರೆ ಯಾವುದಾದರೂ ಕೆಲಸಕ್ಕೆ ಪ್ರಯತ್ನಿಸುವ ಯೋಚನೆ ಇದೆ’ ಎಂದು ಶಂಕರ ನಾರಾಯಣದ ರವಿ ಅವರು ಹೇಳಿದರು.
ಕಾರ್ಕಳ ಮನೋಜ್ ಅವರು ಸಣ್ಣ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದು ಅವರು ಕೂಡ ಪರೀಕ್ಷೆ ಬರೆದರು. “ಇದೊಂದು ನಮಗೆ ದೊರೆತಿರುವ ಅವಕಾಶ. ಖಾಸಗಿಯಾಗಿ ಪರೀಕ್ಷೆ ಬರೆಯುವವರನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸುವಂತಾಗಬೇಕು. ಯಾಕೆಂದರೆ ಅವರಲ್ಲಿ ಅನೇಕರ ಉದ್ಯೋಗದ ಜತೆಗೆ ವಿದ್ಯಾಭ್ಯಾಸ ಮಾಡುವವರು’ ಎಂದರು ಮನೋಜ್.
ಇತರ ವಿದ್ಯಾರ್ಥಿಗಳು ಶಾಲಾ ಕಟ್ಟಡದ ಮೊದಲ ಮಹಡಿಯಲ್ಲಿ ಪರೀಕ್ಷೆ ಬರೆದರು. ವಿಕಲಚೇತನ ವಿದ್ಯಾರ್ಥಿಗೆ ಶಾಲೆಯ ತಳಮಹಡಿಯಲ್ಲಿಯೇ ಪ್ರತ್ಯೇಕವಾಗಿ ಅವಕಾಶ ಮಾಡಿಕೊಡಲಾಯಿತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಿಸಿಟಿವಿ ಕಣ್ಗಾವಲಿತ್ತು.
ಉತ್ತಮ ಅವಕಾಶ
ನೂರಾರು ಮಂದಿ ಉದ್ಯೋಗ ಮಾಡಿಕೊಳ್ಳುತ್ತಲೇ ಪರೀಕ್ಷೆ ಬರೆಯಲು ಬಯಸುತ್ತಾರೆ. ಇಂತವರಿಗೆ ಖಾಸಗಿಯಾಗಿ ಬರೆಯುವ ಅವಕಾಶದಿಂದ ಅನುಕೂಲವಾಗಿದೆ. ಎಸೆಸೆಲ್ಸಿ ವಿದ್ಯಾಭ್ಯಾಸ ಈಗ ಅತ್ಯಗತ್ಯ. ಹಾಗಾಗಿ ಖಾಸಗಿಯಾಗಿ ಪರೀಕ್ಷೆ ಬರೆಯುವವರು ಕೂಡ ಅನೇಕ ಮಂದಿ ಇದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದು ಸಾಧನೆ ಮಾಡಿದವರು ಹಲವರಿದ್ದಾರೆ.
-ಉಮೇಶ್ ನಾೖಕ್,
ಸ್ನೇಹ ಟ್ಯೂಟೋರಿಯಲ್ಸ್ ಪ್ರಾಂಶುಪಾಲ
ಟಾಪ್ ನ್ಯೂಸ್
![CT Ravi](https://www.udayavani.com/wp-content/uploads/2024/12/CT-Ravi-1-415x269.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![CT Ravi](https://www.udayavani.com/wp-content/uploads/2024/12/CT-Ravi-1-150x97.jpg)
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
![Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು](https://www.udayavani.com/wp-content/uploads/2024/12/10-23-150x90.jpg)
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
![dhankar (2)](https://www.udayavani.com/wp-content/uploads/2024/12/dhankar-2-1-150x91.jpg)
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
![Yakshagana Tenku](https://www.udayavani.com/wp-content/uploads/2024/12/Yakshagana-Tenku-150x99.jpg)
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
![Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್](https://www.udayavani.com/wp-content/uploads/2024/12/8-27-150x90.jpg)
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.