ಕಲ್ಮಾಡಿ ಬಳಿಯ ದೇವರಕೆರೆ ಕೆಸರಿನಿಂದ ಮುಕ್ತ
ಹೂಳೆತ್ತಲು ಪಣತೊಟ್ಟ ಗ್ರಾಮಸ್ಥರು
Team Udayavani, Jun 8, 2019, 6:00 AM IST
ಮಲ್ಪೆ: ಮಳೆಯ ಕೊರತೆಯಿಂದಾಗಿ ಎಲ್ಲಡೆ ನೀರಿಗೆ ಹಾಹಾಕಾರ. ಅಕ್ಷರಶಃ ನೀರಿನ ಬರ ಕಾಡುತ್ತಿದೆ. ಈಗೀಗ ಜನರಿಗೆ ಇದರ ಕಾರಣವೂ ಅರಿವಾಗುತ್ತಿದೆ. ಜನರು ಈಗ ನೀರಿನ ಮೂಲವನ್ನು ಹುಡುಕಿಕೊಂಡು ಹೋಗುವಂತಾಗಿದೆ. ಈ ನಿಟ್ಟಿನಲ್ಲಿ ಪಾಳುಬಿದ್ದಿರುವ ಕೆರೆ ಹೂಳನ್ನು ತೆರವುಗೊಳಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿದೆ.
ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ನಗರಸಭೆ ಕಲ್ಮಾಡಿ ವಾರ್ಡ್ಗೆ ತಾಗಿ ಕೊಂಡಿರುವ ಪುರಾತನವಾದ ದೇವರಕರೆ ಇದ್ದು ಇದರ ಅಭಿವೃದ್ಧಿಗೆ ಇಲ್ಲಿನ ಜನರು ಮುಂದಾಗಿದ್ದಾರೆ. ನಗರಸಭಾ ಸದಸ್ಯ ಸುಂದರ ಜೆ. ಕಲ್ಮಾಡಿ ಅವರ ನೇತೃತ್ವದಲ್ಲಿ ಸ್ಥಳಿಯರೊಡಗೂಡಿ ಒಂದು ವಾರಗಳ ಕಾಲ ಕರಸೇವೆಯ ಮೂಲಕ ಹೂಳೆತ್ತುವ ಕಾರ್ಯವನ್ನು ನಡೆಸಲಾಗಿದೆ. ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೋದ್ ಸಾಲ್ಯಾನ್, ಸದಸ್ಯರಾದ ಭಾರತೀ ಭಾಸ್ಕರ್, ದಯಾಶಿನಿ, ಶೋಭಾ ಕಲ್ಮಾಡಿ ಜತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರು ಪೂರ್ಣ ಸಹಕಾರವನ್ನು ನೀಡಿದ್ದಾರೆ. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಕೆರೆ ಅಭಿವೃದ್ದಿ ಜಿ.ಪಂ.ನಿಂದ ಅನುದಾನವನ್ನು ಒದಗಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.
ಸುಮಾರು 2.5 ಎಕ್ರೆ ವಿಸ್ತೀರ್ಣವನ್ನು ಹೊಂದಿದ ಈ ಪುರಾತನವಾದ ಕೆರೆಯನ್ನು 18ವರ್ಷಗಳ ಹಿಂದೆ ಹೂಳನ್ನು ತೆರೆವುಗೊಳಿಸಿ ಅಭಿವೃದ್ಧಿಪಡಿಸಲಾಗಿತ್ತು. ಮುಂದೆ ಇದು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿತ್ತು.
ಕೆಲವು ವರ್ಷಗಳಿಂದ ಇಚೇಗೆ ಈ ಕೆರೆ ಉಪಯೋಗವಾಗದೆ ಕೆರೆಯಲ್ಲಿ ಕಪ್ಪು ಹೂಳು ತುಂಬಿಕೊಂಡಿದ್ದು ನೀರು ನಿಲ್ಲುತ್ತಿರಲಿಲ್ಲ. ವಾರದ ಹಿಂದೆ ಗ್ರಾಮದ ಜನರ ಸಹಕಾರದಲ್ಲಿ ಕೆರೆಯ ಸುತ್ತ ಬೆಳೆದಿರುವ ಹುಲ್ಲು ಕಡ್ಡಿಗಳು, ಕಡಿದು ಜೆಸಿಬಿ, ಕ್ರೇನ್ಗಳ ಮೂಲಕ ಹೂಳನ್ನು ತೆರವುಗೊಳಿಸಲಾಯಿತು. ಇದೀಗ ಮತ್ತೆ ಶುದ್ಧ ನೀರು ತುಂಬಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್ ಅಸಮಾಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.