ಮಳೆಗಾಲಕ್ಕೆ ಕೊಂಕಣ ರೈಲ್ವೇ ಸರ್ವಸನ್ನದ್ಧ


Team Udayavani, Jun 4, 2021, 6:53 AM IST

ಮಳೆಗಾಲಕ್ಕೆ ಕೊಂಕಣ ರೈಲ್ವೇ  ಸರ್ವಸನ್ನದ್ಧ

ಉಡುಪಿ: ಮಳೆಗಾಲದ ಋತುವಿಗೆ ಕೊಂಕಣ ರೈಲ್ವೇ ಸರ್ವಸನ್ನದ್ಧವಾಗಿದೆ.  ಕೊಲಾಡ್‌ನಿಂದ ತೋಕೂರು ವರೆಗಿನ 740 ಕಿ.ಮೀ. ದೂರದ ಮಾರ್ಗದಲ್ಲಿ ಎಲ್ಲ ಸುರಕ್ಷಾ ಕ್ರಮಗಳನ್ನೂ ಅಳವಡಿಸಲಾಗಿದೆ. ಮಳೆ ನೀರು ಹರಿಯುವ ತೋಡನ್ನು ಸರಿಪಡಿಸಲಾಗಿದ್ದು ಮಣ್ಣು ಜರಿತವಾಗುವ ಕಡೆ ಗಮನಹರಿಸಿ ಕಾಮಗಾರಿ ನಡೆಸಲಾಗಿದೆ.

ರೈಲುಗಳ ಸುಗಮ ಸಂಚಾರಕ್ಕಾಗಿ ಮಳೆಗಾಲದಲ್ಲಿ 681 ಸಿಬಂದಿ ಗಸ್ತು ನಡೆಸಲಿದ್ದು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ 24 ಗಂಟೆಯೂ ಗಸ್ತು ತಿರುಗಲಿದ್ದಾರೆ. ಇಂತಹ ಕಡೆ ವೇಗ ನಿಯಂತ್ರಣವನ್ನು ಕಾಯ್ದು ಕೊಳ್ಳಲಾಗುವುದು. ಯಾವುದೇ ತುರ್ತು ಸಂದರ್ಭಗಳಲ್ಲಿ ನಿಭಾಯಿಸುವ ತಂಡಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.

ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕಾಮಗಾರಿ ನಡೆಸಿದ ಪರಿಣಾಮ ಬಂಡೆಗಳು ಉರುಳಿ ರೈಲು ಸೇವೆಗೆ ಧಕ್ಕೆಯಾದ ನಿದರ್ಶನಗಳಿಲ್ಲ.

ಅತಿಯಾದ ಮಳೆ ಸುರಿಯುವ ಸಂದರ್ಭ 40 ಕಿ.ಮೀ. ವೇಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ. ರತ್ನಾಗಿರಿ ಮತ್ತು ವೆರ್ನಾದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ತುರ್ತು ವೈದ್ಯಕೀಯ ನೆರವನ್ನು ಒಳಗೊಂಡ ಎಆರ್‌ಎಂವಿ (ಆಕ್ಸಿಡೆಂಟ್‌ ರಿಲೀಫ್ ಮೆಡಿಕಲ್‌ ವ್ಯಾನ್‌) ಸಿದ್ಧವಾಗಿದೆ. ವೆರ್ನಾದಲ್ಲಿ ಎಆರ್‌ಟಿಯನ್ನೂ (ಆಕ್ಸಿಡೆಂಟ್‌ ರಿಲೀಫ್ ಟ್ರೈನ್‌) ಇರಿಸಲಾಗಿದೆ.

ಎಲ್ಲ ಸುರಕ್ಷಾ ಶ್ರೇಣಿಯ ಸಿಬಂದಿ ನಿಯಂತ್ರಣ ಕಚೇರಿ/ನಿಲ್ದಾಣವನ್ನು ತುರ್ತು ಸಂದರ್ಭ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಮೊಬೈಲ್‌ ದೂರವಾಣಿಯನ್ನು ಕೊಡಲಾಗಿದೆ. ಲೋಕೋ ಪೈಲಟ್‌ ಮತ್ತು ಗಾರ್ಡ್‌ಗಳಿಗೆ ವಾಕಿ ಟಾಕಿ ಒದಗಿಸಲಾಗಿದೆ.

ಮಡಗಾಂವ್‌, ಚಿಪ್ಳೂಣ್‌, ರತ್ನಾಗಿರಿ, ವಿಲ್ವಾಡೆ, ಕನಕವಾಲಿ, ಮಾಂಗಾಂವ್‌, ಕಾರವಾರ, ಭಟ್ಕಳ, ಉಡುಪಿಯಲ್ಲಿ ಮಳೆ ಮಾಪನಯಂತ್ರವನ್ನು ಅಳವಡಿಸ ಲಾಗಿದೆ. ಕಾಳಿ ನದಿ (ಮಾಂಗಾಂವ್‌  – ವೀರ್‌ ನಡುವೆ), ಸಾವಿತ್ರಿ  ನದಿ (ವೀರ್‌ ಸಾಪೆ ವಮಾನೆ ನಡುವೆ), ವಶಿಷ್ಟಿ ನದಿ (ಚಿಪ್ಳೂಣ್‌-  ಕಮಾತೆ ನಡುವೆ) ಪ್ರವಾಹ ಎಚ್ಚರಿಕೆ ವ್ಯವಸ್ಥೆ ರೂಪಿಸಲಾಗಿದೆ.  ಗಾಳಿಯ ಪ್ರಮಾಣ ಅರಿಯಲೂ 4 ಕಡೆ ಅನೆಮೊಮೀಟರ್‌  ಅಳವಡಿಸ ಲಾಗಿದೆ.

24×7 ನಿಯಂತ್ರಣ ಕೊಠಡಿ ಬೇಲಾಪುರ, ರತ್ನಾಗಿರಿ, ಮಡಗಾಂವ್‌ನಲ್ಲಿ 24×7 ಸಮಯದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ. ಜೂ. 10ರಿಂದ ಅ. 31ರ ವರೆಗೆ ಮಳೆಗಾಲದ ವೇಳಾಪಟ್ಟಿಯಂತೆ ರೈಲುಗಳನ್ನು ಓಡಿಸಲಾಗುವುದು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.