![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 23, 2021, 3:50 AM IST
ಉಡುಪಿ: ಅಮೆರಿಕದ ಸಿಯಾಟಲ್ ನಗರದಲ್ಲಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪುತ್ತಿಗೆ ಮಠದ 9ನೇ ಶಾಖೆ ವೆಂಕಟಕೃಷ್ಣ ವೃಂದಾವನ ಹೆಸರಿನಲ್ಲಿ ಲೋಕರ್ಪಣೆಗೊಳಿಸಿದರು.
ಸಹ್ಯಾದ್ರಿ ಕನ್ನಡ ಸಂಘದ ಸಕ್ರಿಯ ಸದಸ್ಯರು, ಭಾರತೀಯ ಸಂಘಟನೆಗಳು ಮತ್ತು ಭಕ್ತರು ಕಾರ್ಯಕ್ರಮ ಆಯೋಜಿಸಿದ್ದು, ಸಿಯಾಟಲ್ ನಗರದ ಕೃಷ್ಣ ಭಕ್ತರ 5 ವರ್ಷದ ಕನಸು ನನಸಾಗಿದೆ.
ಇಲ್ಲಿ ಪುತ್ತಿಗೆ ಮಠದ ಇಬ್ಬರು ಶಿಷ್ಯರು ಪೂಜೆ ಮತ್ತು ಪೌರೋಹಿತ್ಯಾದಿ ಸೇವೆಗಳನ್ನು ನಿರ್ವಹಿಸಲು ನಿಯೋಜಿತರಾಗಿದ್ದಾರೆ ಎಂದು ಪುತ್ತಿಗೆ ಮಠದ ಸಾಗರೋತ್ತರ ಸಂಯೋಜಕ ಮುಖ್ಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.