ನದಿ ದಾಟಲು ಕಟ್ಟಿನಾಡಿ – ರಾಮನಹಕ್ಲು ನಿವಾಸಿಗಳ ಸಂಕಷ್ಟ
ಮಳೆಗಾಲದಲ್ಲಿ ಮುರಿದು ಬಿದ್ದ ಕಿರು ಸೇತುವೆ ಇನ್ನೂ ದುರಸ್ತಿಯಾಗಿಲ್ಲ
Team Udayavani, Feb 7, 2020, 5:36 AM IST
ಹಳ್ಳಿಹೊಳೆ: ದೇವರಬಾಳುವಿನಿಂದ ಕಬ್ಬಿನಾಲುವಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ರಾಮನಹಕ್ಲು ಬಳಿ ನಿರ್ಮಿಸಿದ್ದ ಕಿರು ಸೇತುವೆ ಕಾಮಗಾರಿ ಪೂರ್ಣಗೊಂಡ 15 ದಿನದೊಳಗೆ ಕುಸಿದು ಬಿದ್ದಿದೆ. ಸೇತುವೆ ಕುಸಿದು 6-7 ತಿಂಗಳಾದರೂ, ಇನ್ನೂ ಮರು ನಿರ್ಮಾಣಕ್ಕೆ ಮಾತ್ರ ಯಾರೂ ಮುಂದಾಗಿಲ್ಲ. ನಕ್ಸಲ್ ಬಾಧಿತ ದೇವರಬಾಳು ಸಮೀಪದ ರಾಮನಹಕ್ಲು, ಕಟ್ಟಿನಾಡಿ ಪ್ರದೇಶದ ಜನರ ವ್ಯಥೆಯಿದು.
ಇದು ಆಳುವ ವರ್ಗದವರ ನಿರ್ಲಕ್ಷéವೋ ? ಗುತ್ತಿಗೆ ವಹಿಸಿಕೊಂಡವರ ಬೇಜಾವಾಬ್ದಾರಿತನವೋ ? ಒಟ್ಟಿನಲ್ಲಿ ಕಟ್ಟಿನಾಡಿ ಹಾಗೂ ರಾಮನಹಕ್ಲು ಭಾಗದ ನಿವಾಸಿಗಳು ಮಾತ್ರ ನಿತ್ಯ ನದಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಈಗಾದರೂ ನದಿಯಲ್ಲಿ ನೀರು ಕಡಿಮೆ ಇದೆ. ನದಿ ದಾಟಲು ಸಮಸ್ಯೆಯಿಲ್ಲ. ಆದರೆ ಮಳೆಗಾಲದಲ್ಲಿ ಅಡಿಕೆ ಮರವನ್ನು ಹಾಕಿ ನಿರ್ಮಿಸಿದ ಕಾಲು ಸಂಕದಲ್ಲಿ ಸಂಕಷ್ಟದಿಂದ ನಡೆಯಬೇಕಾದ ಅನಿವ್ಯಾತೆ ಇಲ್ಲಿನ ಜನರದ್ದು.
ಇಲ್ಲಿನ ಜನರಿಗೆ ನಡೆದಾಡಲು ಸರಿಯಾದ ರಸ್ತೆ ಸಂಪರ್ಕವಿಲ್ಲ. ಕಿರು ಸೇತುವೆಯೊಂದು ಮಂಜೂರಾಗಿ, ಕಾಮಗಾರಿ ನಡೆದು, ಇನ್ನೇನು ಸಂಪರ್ಕಕ್ಕೆ ತೆರೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಕಳಪೆ ಕಾಮಗಾರಿಯಿಂದಾಗಿ ಮುರಿದು ಬಿದ್ದಿತ್ತು. ಇನ್ನೇನು ಸೇತುವೆಯ ಕನಸು ಈಡೇರುತ್ತದೆ ಎನ್ನುವ ಕನವರಿಕೆಯಲ್ಲಿದ್ದ ಕಟ್ಟಿನಾಡಿ, ರಾಮನಹಕ್ಲು ಭಾಗದ 30-35 ಕುಟುಂಬಗಳಿಗೆ ಈಗಲೂ ಸೇತುವೆ ಬೇಡಿಕೆ ಮಾತ್ರ ಕನಸಾಗಿಯೇ ಉಳಿದಿದೆ.
ಕಾಲು ಸಂಕ ಆಸರೆ
ಸುಮಾರು 15 – 20 ವರ್ಷಗಳಿಗೂ ಹೆಚ್ಚು ಕಾಲದಿಂದ ಬೇಡಿಕೆಯಾಗಿದ್ದ ದೇವರಬಾಳು ಮತ್ತು ರಾಮನಹಕ್ಲು ಸಂಪರ್ಕದ ಕಿರು ಸೇತುವೆಯು ಕಳೆದ ವರ್ಷದ ಜೂ. 21ರಂದು ಸ್ಲಾÂಬ್ ಕೆಳಭಾಗಕ್ಕೆ ಅಳವಡಿಸಿದ್ದ ಪೋಲ್ಸ್ ತೆಗೆದಾಗ ಕುಸಿದಿತ್ತು. ಆ ಬಳಿಕ ಇಲ್ಲಿನ ಜನರೇ ಸೇರಿ ಸೇತುವೆ ಕಂಬಗಳಿಗೆ ಅಡಿಕೆ ಮರವನ್ನು ಹಾಕಿ ನಿರ್ಮಿಸಿದ್ದ ಕಾಲು ಸಂಕವೇ ಇಲ್ಲಿನ ಜನರಿಗೆ ಈ ಕಬ್ಬಿಹಿತ್ಲು ಹೊಳೆ ದಾಟಲು ಆಸರೆಯಾಗಿದೆ.
ದ್ವೀಪದಂತಿರುವ ಊರು
ಹಳ್ಳಿಹೊಳೆ ಗ್ರಾಮದ ದೇವರಬಾಳು ಸಮೀಪದ ಈ ರಾಮನಹಕ್ಲು ಹಾಗೂ ಕಟ್ಟಿನಾಡಿ ಊರುಗಳೆರಡು ಕೂಡ ಸುತ್ತಲೂ ನದಿಗಳಿಂದ ಆವೃತ್ತವಾಗಿದ್ದು, ದ್ವೀಪದಂತಿದೆ. ಈ ಊರುಗಳೆರಡರ ಸುತ್ತ ಚಕ್ರ ನದಿ ಹಾಗೂ ಕಬ್ಬಿಹಿತ್ಲು ಹೊಳೆ ಹರಿಯುತ್ತಿದೆ. ಈ ನದಿಗಳೆರಡಕ್ಕೂ ಸರಿಯಾದ ಸೇತುವೆ ನಿರ್ಮಾಣವಾಗದ ಕಾರಣ ಸರಿಯಾದ ರಸ್ತೆ ಸಂಪರ್ಕವೂ ಆಗಿಲ್ಲ.
ಮಳೆಗಾಲಕ್ಕೆ ಮುನ್ನ ದುರಸ್ತಿಯಾಗಲಿ
ರಾಮನಹಕ್ಲು, ಕಟ್ಟಿನಾಡಿ ಭಾಗದ ಜನರಿಗೆ ದೇವರಬಾಳು, ಚಕ್ರಾ ಮೈದಾನಕ್ಕೆ ತೆರಳಲು ಈ ಕಿರು ಸೇತುವೆಯಾಗಿದ್ದರೆ ಬಹಳಷ್ಟು ಅನುಕೂಲವಾಗುತ್ತಿತ್ತು. ಈ ಭಾಗದಿಂದ ದೇವರಬಾಳುವಿನ ಶಾಲೆಗೆ ಹೋಗುವ ಮಕ್ಕಳು, ಕೂಲಿ ಕೆಲಸಕ್ಕೆ ಹೋಗುವ ಜನರು ಇದ್ದಾರೆ. ಅವರಿಗೆಲ್ಲ ಮಳೆಗಾಲದಲ್ಲಿ ಬಹಳಷ್ಟು ಸಮಸ್ಯೆಯಾಗುತ್ತಿದೆ. ಈಗ ನಾವೇ ಸೇರಿ ಒಂದು ಕಾಲು ಸಂಕವನ್ನು ನಿರ್ಮಿಸಿದ್ದೇವೆ. ಮುಂದಿನ ಮಳೆಗಾಲಕ್ಕೂ ಮೊದಲು ಈ ಮುರಿದು ಬಿದ್ದ ಸೇತುವೆಯನ್ನು ದುರಸ್ತಿ ಮಾಡಿದರೆ ಪ್ರಯೋಜನವಾದೀತು.
ಕಳಪೆ ಕಾಮಗಾರಿ ಆರೋಪ
ನಕ್ಸಲ್ ಪ್ಯಾಕೇಜ್ನಡಿ ರಾಮನಹಕ್ಲು ಹಾಗೂ ಕಟ್ಟಿನಾಡಿ ನಿವಾಸಿಗಳ ಅನುಕೂಲಕ್ಕೆಂದು ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ 35 ಅಡಿ ಉದ್ದ ಹಾಗೂ 6 ಅಡಿ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ ನಡೆದಿತ್ತು. ಆದರೆ ಅದು ಉದ್ಘಾಟನೆಗೊಳ್ಳುವ ಮೊದಲೇ ಮುರಿದು ಬಿದ್ದಿತ್ತು. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುವುದು ಸ್ಥಳೀಯರ ಆರೋಪ.
ಹೆಚ್ಚಿನ ಮಾಹಿತಿಯಿಲ್ಲ
ಟೆಂಡರ್ ಆಗುವ ಮೊದಲೇ ಗುತ್ತಿಗೆದಾರರು ಕೆಲಸ ಮಾಡಲು ಆರಂಭ ಮಾಡಿದ್ದಾರೆ. ಆದರೆ ಇದಕ್ಕೆ ಮಂಜೂರಾದ ಎಲ್ಲ ಅನುದಾನ ಇನ್ನೂ ಕೂಡ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ಬಿಡುಗಡೆಯಾಗಿಲ್ಲ ಎನ್ನುವ ಮಾಹಿತಿಯಿದೆ. ನಕ್ಸಲ್ ಪ್ಯಾಕೇಜ್ ಅಥವಾ ಬೇರೆ ಯಾವ ಯೋಜನೆಯಡಿ ಮಂಜೂರಾಗಿದೆ ಎನ್ನುವ ಬಗ್ಗೆ ಪಂಚಾಯತ್ಗೆ ಹೆಚ್ಚಿನ ಮಾಹಿತಿಯಿಲ್ಲ.
– ಸುದರ್ಶನ್,
ಪಿಡಿಒ ಹಳ್ಳಿಹೊಳೆ ಗ್ರಾ.ಪಂ.
ಹೊಸ ಕಿರು ಸೇತುವೆಗೆ ಪ್ರಯತ್ನ
ಹಿಂದಿನ ಅವಧಿಯಲ್ಲಿ ಆಗಿದ್ದ ಕಿರು ಸೇತುವೆ ಕಳೆದ ವರ್ಷ ಮುರಿದು ಬಿದ್ದಿತ್ತು. ಅದಕ್ಕೆ ಪರ್ಯಾಯವಾಗಿ ಕಟ್ಟಿನಾಡಿ ಹಾಗೂ ರಾಮನಹಕ್ಲು ಭಾಗದ ನಿವಾಸಿಗಳಿಗೆ ಪ್ರಯೋಜನವಾಗಲು ಹೊಸ ಕಿರು ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ,
ಬೈಂದೂರು ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್ ಭೇಟಿ
Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು
Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ
Navarathiri: ಉಚ್ಚಿಲ ದಸರಾ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Bengaluru: ಕೆಎಸ್ಆರ್ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್ ಸಂಚಾರ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Bengaluru: ಆನ್ಲೈನ್ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.