ದಾರಿ ತಪ್ಪಿ ಅಲೆಯುತ್ತಿದ್ದ ತೆಲಂಗಾಣ ನಿವಾಸಿ ಪೊಲೀಸರ ಸಹಾಯದಿಂದ ಮನೆಗೆ
Team Udayavani, Jun 16, 2018, 11:04 AM IST
ಕೋಟ: ಶಬರಿಮಲೆಗೆ ತೀರ್ಥಯಾತ್ರೆ ಹೊರಟಿದ್ದ ತೆಲಂಗಾಣದ ನಿವಾಸಿಯೊಬ್ಬರು ದಿಕ್ಕು ತಪ್ಪಿ ಕುಂದಾಪುರದಲ್ಲಿ ಬಸ್ಸಿನಿಂದ ಇಳಿದು ಒಂದು ವಾರದಿಂದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮೊಳಹಳ್ಳಿ ಮುಂತಾದ ಕಡೆ ತಿರುಗಾಡುತ್ತಿದ್ದು, ಪೊಲೀಸರು ಆತನ ವಿಳಾಸವನ್ನು ಪತ್ತೆ ಹಚ್ಚಿ ಶುಕ್ರವಾರ ಮನೆಗೆ ಸೇರಿಸಿದರು.
ತೆಲಂಗಾಣದ ಕೊಂಡಾಪುರ ನಿವಾಸಿ ಬಿ.ಶೇಖರ್ ಅವರು ಎಂಟು ದಿನಗಳ ಹಿಂದೆ ಊರಿನಿಂದ ಶಬರಿ ಮಲೆಗೆ ಹೊರಟಿದ್ದು, ದಿಕ್ಕು ತಪ್ಪಿ ಕುಂದಾಪುರದಲ್ಲಿ ಇಳಿದಿದ್ದಾರೆ. ಅನಂತರ ಕಾಲ್ನಡಿಗೆಯಲ್ಲಿ ಸಾಗಿ ಹುಣ್ಸೆಮಕ್ಕಿ, ಬಿದ್ಕಲ್ಕಟ್ಟೆ, ಮೊಳಹಳ್ಳಿಯಲ್ಲಿ ತಿರುಗಾಡುತ್ತಿದ್ದು, ಸ್ಥಳೀಯರು ಮಾನಸಿಕ ಅಸ್ವಸ್ಥನಿರಬಹುದು ಎಂದು ಭಾವಿಸಿದ್ದರು.
ಗುರುವಾರ ಸಂಜೆ ಸ್ಥಳೀಯರೊಬ್ಬರು ಕೋಟ ಪೊಲೀಸರಿಗೆ ವಿಚಾರ ತಿಳಿಸಿದ್ದು, ಪೊಲೀಸರು ಆ ವ್ಯಕ್ತಿಯನ್ನು ಠಾಣೆಗೆ ಕರೆತಂದಿದ್ದಾರೆ. ಸರಿಯಾಗಿ ಆಹಾರವಿಲ್ಲದೆ ತೀವ್ರ ಅಸ್ವಸ್ಥಗೊಂಡಿದ್ದ ಈತನಿಗೆ ಪೊಲೀಸರು ಊಟ ನೀಡಿ ವಿಚಾರಿಸಿದಾಗ ಅಣ್ಣನ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಆತನಲ್ಲಿ ಮೊಬೈಲ್ ಇಲ್ಲದಿದ್ದರಿಂದ ಪೊಲೀಸರು ಆ ಸಂಖ್ಯೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಶೇಖರ್ನ ಅಣ್ಣ ಹನುಮಂತ ಹಾಗೂ ಸ್ನೇಹಿತ ಶೇಖರ್ ಅವರು ಠಾಣೆಗೆ ಆಗಮಿಸಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿ ಊರಿಗೆ ಕರೆದೊಯ್ದರು.
ಈತ ನನ್ನು ಮನೆ ಸೇರಿಸುವ ಪ್ರಯತ್ನದಲ್ಲಿ ಕೋಟ ಉಪ ನಿರೀಕ್ಷಕ ಸಂತೋಷ್ ಎ.ಕಾಯ್ಕಿಣಿ, ಸಿಬಂದಿ ವರ್ಗದ ಸೂರ್ಯ ಹಾಲಾಡಿ, ಮಂಜುನಾಥ, ಸತೀಶ್, ರಾಮಣ್ಣ ಶ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್ ಸ್ಪೋರ್ಟ್ಸ್ ಮತ್ತೆ ಆರಂಭ
Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ
Basroor- ಕುಂದಾಪುರ ಹೆದ್ದಾರಿ ಬದಿ ಹುಲ್ಲು ಕಟಾವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.