ಯುವ ಬಲದಿಂದ ಭ್ರಷ್ಟಾಚಾರ ನಿಯಂತ್ರಣ
Team Udayavani, Apr 10, 2017, 3:31 PM IST
ಉಡುಪಿ: ಯುವಕರಿಂದ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ ಎಂದು ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಹೇಳಿದರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ರವಿವಾರ ಪಿ. ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಬಹುಮಾನ ವಿತರಿಸಿ ಮಾತನಾಡಿದ ಅವರು, ಕೆಟ್ಟ ಆಡಳಿತ, ಭ್ರಷ್ಟಾಚಾರ ಕೊನೆಗಾಣಿಸಲು ಯುವಕರು ಸಹಕರಿಸಬೇಕು ಎಂದರು.
ಯುವ ನ್ಯಾಯವಾದಿಗಳು ಕಠಿನಶ್ರಮಪಟ್ಟು ಹೊಸ ಹೊಸ ಶೋಧನೆಗಳಿಗೆ ತೊಡಗಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ನ್ಯಾ| ಶೆಟ್ಟಿ ಹೇಳಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಕೇರಳದ ನ್ಯಾ| ದಾಮ ಶೇಷಾದ್ರಿ ನಾಯ್ಡು, ಕರ್ನಾಟಕದ ನ್ಯಾ| ಮನೋಹರ ಬಿಜೂರು ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರಿನ ಹಿರಿಯ ನ್ಯಾಯವಾದಿಗಳಾದ ಎಂ.ವಿ. ಶಂಕರ ಭಟ್, ಸೀತಾರಾಮ ಶೆಟ್ಟಿ ಶುಭಕೋರಿದರು.
ಜಯಂತಿ ಶಿವಾಜಿ ಶೆಟ್ಟಿ, ಪ್ರಾಧ್ಯಾಪಕರಾದ ರೋಹಿತ್ ಅಮೀನ್, ನಿರ್ಮಲಾ ಕುಮಾರಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ| ಪ್ರಕಾಶ್ ಕಣಿವೆ ಸ್ವಾಗತಿಸಿ ನಿವೇದಿತಾ ಜಿ. ಬಾಳಿಗಾ ವಂದಿಸಿದರು. ಆಯಿಶಾರಾವ್ ಕಾರ್ಯಕ್ರಮ ನಿರ್ವಹಿಸಿದರು. ಡಾರಿಲ್ ಕ್ಲೆತ್, ಅಶ್ವಿನಿ, ಗೀತಾ ಶೆಣೈ, ರಚನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಅಮೆರಿಕದಲ್ಲಿ ಜನವರಿಯಿಂದ ಎಪ್ರಿಲ್ ವರೆಗೆ ಜನಿಸಿದವರು ಬುದ್ಧಿವಂತರಂತೆ! ಅಮೆರಿಕದಲ್ಲಿ ಜನವರಿಯಿಂದ ಎಪ್ರಿಲ್ ವರೆಗೆ ಜನಿಸಿದವರು ಬುದ್ಧಿವಂತರು ಎಂಬ ಮಾತಿದೆ. ಏಕೆ? ಅಲ್ಲಿ ಆರು ವರ್ಷವಾಗದೆ ಶಾಲೆಗೆ ಸೇರಿಸುವಂತಿಲ್ಲ. ಡಿ. 31ರೊಳಗೆ ಜನಿಸಿದವರನ್ನು ಶಾಲೆಗೆ ಸೇರಿಸುವಾಗ ವರ್ಷಾರಂಭದಲ್ಲಿ ಜನಿಸಿದ ಮಕ್ಕಳು ದೈಹಿಕ, ಪ್ರಬುದ್ಧತೆಯಲ್ಲಿ ವರ್ಷಾಂತ್ಯಕ್ಕೆ ಹುಟ್ಟಿದವರಿಗಿಂತ ಹೆಚ್ಚು ಸಮರ್ಥರಿರುತ್ತಾರೆ. ಹೀಗಾಗಿ ಯೋಜನಾಬದ್ಧವಾಗಿ ಅಲ್ಲಿ ಮಕ್ಕಳು ಜನಿಸುವಂತೆ ಜಾಣ್ಮೆ ತೋರುತ್ತಾರೆ.
– ನ್ಯಾ| ದಾಮ ಶೇಷಾದ್ರಿ ನಾಯ್ಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.