![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jul 8, 2024, 11:33 PM IST
ಕಾಪು: ಕಟಪಾಡಿ ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಕದ್ದೊಯ್ದ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಜು. 6ರಿಂದ 7ರ ಮುಂಜಾನೆಯ ನಡುವೆ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ದೈವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದಿದ್ದು ಕಾಣಿಕೆ ಡಬ್ಬಿಯನ್ನು ಒಡೆದು ಅದ ರಲ್ಲಿದ್ದ 4 ಸಾವಿರ ರೂಪಾಯಿ ಹಾಗೂ ಆವರಣದಲ್ಲಿರುವ ಚಾಮುಂಡಿ ಗುಡಿ ಹಾಗೂ ಕೊರಗಜ್ಜನ ಗುಡಿಯ ಬೀಗ ವನ್ನು ಮುರಿದು ಹುಂಡಿ ಯಲ್ಲಿದ್ದ 1 ಸಾವಿರ ರೂ.ಗಳನ್ನು ಕಳವುಗೈದಿದ್ದಾರೆ.
ಜು. 6ರಂದು ರಾತ್ರಿ 11.20ರ ವೇಳೆಗೆ ಕಳವು ನಡೆದಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ದೈವಸ್ಥಾನದ ಸದಸ್ಯ ಸುಂದರ ನೀಡಿರುವ ಮಾಹಿತಿಯಂತೆ ಅಧ್ಯಕ್ಷ ಸದಾನಂದ ನೀಡಿ ರುವ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು
ಉಡುಪಿ: ಚಿಟ್ಪಾಡಿಯ ಕಸ್ತೂರ್ಬಾ ನಗರದ ಡಯಾನ ಥಿಯೇಟರ್ ಎದುರು ಇರುವ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಜು. 4ರ ರಾತ್ರಿಯಿಂದ ಜು. 5ರ ಮುಂಜಾನೆಯ ನಡುವೆ ಒಡೆದು ಸಾವಿರ ರೂ.ಗಳನ್ನು ಕಳವು ಮಾಡಲಾಗಿದೆ ಎಂದು ದೈವಸ್ಥಾನದ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.