ಸಂಚಲನವಿಲ್ಲದ ಬಾವಿಯಲ್ಲಿ ವಿಷಗಾಳಿ; ಹೆಚ್ಚುತ್ತಿರುವ ಬಾವಿ ದುರಂತ!


Team Udayavani, Jun 10, 2019, 6:10 AM IST

bavi-duranta

ಮಲ್ಪೆ: ನೀರಿನ ಸಂಚಲನವಿಲ್ಲದ ಆಳವಾದ ಬಾವಿಗಳಲ್ಲಿ ವಿಷಗಾಳಿ, ಆಮ್ಲಜನಕ ಲಭಿಸದ ಬಾವಿಗೆ ಇಳಿದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪುವ ದುರಂತಗಳು, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಇತೀ¤ಚಿನ ದಿನಗಳಲ್ಲಿ ಹೆಚ್ಚುತ್ತಿವೆ.

ಯಾವುದೇ ರೀತಿಯ ಮುಂಜಾಗ್ರತೆ ಪಾಲಿಸದೆ ಬಾವಿಗಿಳಿಯುವುದು ಇಂತಹ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿದೆ.

ಈಗ ಬೇಸಗೆಯಲ್ಲಿ ಎಲ್ಲ ಬಾವಿಗಳಲ್ಲೂ ನೀರು ಬತ್ತಿ ಹೋಗಿದೆ. ಮನೆಯವರು ಬಾವಿಯ ಕೆಸರು, ಮಣ್ಣು ತೆಗೆಯಲೆಂದು ಕಾರ್ಮಿಕರನ್ನು ಗೊತ್ತುಪಡಿಸುತ್ತಾರೆ. ಸಾಕಷ್ಟು ಮಾಹಿತಿ ಇಲ್ಲದ ಕಾರ್ಮಿಕರು ಇಂತಹ ಆಳವಾದ ಬಾವಿಗೆ ಇಳಿದು ಆಮ್ಲಜನಕದ ಉಸಿರಾಟದ ಸಮಸ್ಯೆಗೆ ಸಿಲುಕುತ್ತಾರೆ. ಅತಿ ಹೆಚ್ಚು ಆಳದ ಬಾವಿಗಳಲ್ಲಿ ಅಮ್ಲಜನಕದ ಕೊರತೆ ಸೃಷ್ಟಿಯಾಗುತ್ತದೆ.

ಇದನ್ನು ಮನಗಾಣದೆ ಅಥವಾ ಮುಂಜಾಗ್ರತಾ ಕ್ರಮ ಅನುಸರಿಸದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಕೆಲವು ಕಾರ್ಮಿಕರು ಮದ್ಯ ಸೇವಿಸಿ ಬಾವಿಗಿಳಿದು ಅಪಾಯಕ್ಕೆ ಸಿಲುಕುತ್ತಾರೆ.

ಬಾವಿಗಿಳಿಯುವ ಮುನ್ನ ದೀಪ ಇರಿಸಿ
ಮುಚ್ಚಿದ ಮತ್ತು ಆಳವಾದ ಬಾವಿಗೆ ಇಳಿಯುವ ಮುನ್ನ ಅದರೊಳಗೆ ಆಮ್ಲಜನಕ ಇದೆಯೇ ಎಂದು ಮೊದಲು ಖಾತರಿ ಪಡಿಸಿ, ಬಳಿಕವಷ್ಟೇ ಬಾವಿಗೆ ಇಳಿಯ ಬೇಕು. ಬಾವಿಗೆ ಇಳಿಯುವ ಮುನ್ನ ಮೇಣದ ಬತ್ತಿಯನ್ನು ಉರಿಸಿ ಹಗ್ಗದ ಸಹಾಯದಿಂದ ಬಾವಿಗಿಳಿಸಬೇಕು. ಈ ವೇಳೆ ಬೆಂಕಿ ನಂದದೆ ಬಾವಿಯ
ನೀರಿನ ಮಟ್ಟದ ತನಕ ತಲುಪಿದಲ್ಲಿ ಅ ಬಾವಿಯಲ್ಲಿ ಆಮ್ಲಜನಕ ಇದೆ ಎಂದು ಖಾತರಿ. ಉರಿಯುವ ಮೇಣದ ಬತ್ತಿಯನ್ನು ಬಾವಿಗೆ ಇಳಿಸುತ್ತಿರುವಂತೆಯೇ ಬೆಂಕಿ ನಂದಿ ಹೋದರೆ ಬಾವಿಯ ಕೆಳಭಾಗದಲ್ಲಿ ಆಮ್ಲಜನಕದ ಕೊರತೆ ಇದೆ ಎಂದು ಅರ್ಥ ಎಂದು ಬಾವಿ ನಿರ್ವಹಣೆ ಮಾಡುವ ಹರೀಶ್‌ ಅವರು ತಿಳಿಸುತ್ತಾರೆ.

ಪರಿಹಾರ ಹೇಗೆ ?
ಬಾವಿಯೊಳಗೆ ಆಮ್ಲಜನಕ ಲಭಿಸಬೇಕಾದರೆ ನೀರನ್ನು ಹಗ್ಗದ ಸಹಾಯದಿಂದ ಕೊಡಪಾನದಲ್ಲಿ ಸೇದುವ ಮೂಲಕ ತೆಗೆಯಬೇಕು. ಕೊಡಪಾನವನ್ನು ಹಲವು ಬಾರಿ ನೀರಿನ ಮೇಲೆ ಕೆಳಗೆ ಮಾಡಿದಾಗ ನೀರಿನಲ್ಲಿ ಸಂಚಲನವಾಗುತ್ತದೆ.
ಮರದ ಕೊಂಬೆ ಬಳಸಿ ಅದನ್ನು ಹಲವು ಬಾರಿ ಬಾವಿಯೊಳಗೆ ಇಳಿಸಿ ಮೇಲೆ ಕೆಳಗೆ ಮಾಡಿದಾಗಲೂ ಬಾವಿಯೊಳಗೆ ಆಮ್ಲಜನಕ ಹೆಚ್ಚಾಗುತ್ತದೆ ಮತ್ತು ಬಾವಿಯ ಅಡಿಭಾಗದಿಂದ ಉತ್ಪತ್ತಿಯಾಗುವ ವಿಷವಾಯು ಬಾವಿಯಿಂದ ಹೊರ ತಳ್ಳಲೂ ಇದು ಸಹಕಾರಿಯಾಗುತ್ತದೆ.

ಸೇದುವ ಬಾವಿಯಲ್ಲಿ ಸಮಸ್ಯೆ ಇಲ್ಲ
ಈ ಹಿಂದೆ ಬಾವಿಯಲ್ಲಿ ಕೊಡಪಾನ ಅಥವಾ ಬಾಲ್ದಿಯಿಂದ ನೀರನ್ನು ಸೇದುತ್ತಿರುವಾಗ ನೀರಿನಲ್ಲಿ ಸಂಚಲವಾಗುತ್ತಿತ್ತು. ಆಲ್ಲಿ ಉಸಿರಾಟಕ್ಕೆ ಬೇಕಾಗುವ ಆಮ್ಲಜನಕವನ್ನು ಹೆಚ್ಚುವಂತೆ ಮಾಡುತ್ತಿತ್ತು. ಈಗ ಬಹುತೇಕ ಎಲ್ಲ ಕಡೆ ಮೋಟಾರು ಪಂಪ್‌ಸೆಟ್‌ ಮೂಲಕ ನೀರು ತೆಗೆಯುವುದರಿಂದ ಬಾವಿಯಲ್ಲಿ ನೀರಿನ ಸಂಚಲನ ಉಂಟಾಗದೆ, ವಿಷಗಾಳಿ ಹೊರಹೋಗದೇ ಬಾವಿಯಲ್ಲಿ ಉಳಿದುಕೊಳ್ಳುತ್ತದೆ.

ಮುಂಜಾಗ್ರತಾ ಕ್ರಮ ಅಗತ್ಯ
25 ಅಡಿಗಿಂತ ಜಾಸ್ತಿ ಇರುವ ರಿಂಗ್‌ ಬಾವಿ, ಮನೆಗೆ ತಾಗಿಕೊಂಡಿರುವ ಮುಚ್ಚಿದ ಬಾವಿ, ನೀರಿಲ್ಲದ ಸಂಪು ಟ್ಯಾಂಕ್‌, ದೊಡ್ಡ ಟ್ಯಾಂಕ್‌ಗಳು, ನೀರಿಲ್ಲದ ಬಾವಿ, ಅತಿ ಆಳವಾದ ಬಾವಿಗಳಿಗೆ ಇಳಿಯುವುದು ಅಪಾಯಕಾರಿ. ಗುಡ್ಡಸಾಲು, ಮುರಗಳು ಇರುವ ಬಾವಿಯಲ್ಲಿ ಈ ಸಮಸ್ಯೆಗಳು ಜಾಸ್ತಿ ಇರುತ್ತದೆ. ತೆರೆದ ದೊಡ್ಡ ಬಾವಿಗಳು, ಮರಳು ಸಾಲಿನಲ್ಲಿರುವ ಬಾವಿಗಳಲ್ಲಿ ಸಮಸ್ಯೆ ಕಡಿಮೆ. ಇಂತಹ ಕೆಲವು ಸೂಕ್ಷ ವಿಚಾರಗಳು ಮನೆಯವರಿಗೂ ತಿಳಿದಿರುವುದಿಲ್ಲ. ಬಾವಿ ಕೆಲಸಕ್ಕೆ ಬಂದ ವ್ಯಕ್ತಿಗೂ ಗೊತ್ತಿರುವುದಿಲ್ಲ. ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ.
-ಹರೀಶ್‌ ಕೆ. ಕೊಡವೂರು, ಬಾವಿ ಕೆಲಸದ ನಿರ್ವಾಹಕರು

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Udupi: ಮದ್ಯ ಸೇವಿಸಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.