ಮೂರು ವರ್ಷದಲ್ಲಿ 25ಕ್ಕೂ ಅಧಿಕ ಅಪಘಾತ: 9 ಸಾವು

ರಾ.ಹೆ.: ಉಚ್ಚಿಲ ಜಂಕ್ಷನ್‌; ವಾಹನ ಸವಾರರಿಗೆ ಟೆನ್ಶನ್‌

Team Udayavani, Apr 30, 2022, 12:33 PM IST

uchila

ಕಾಪು: ರಾ. ಹೆ. 66ರ ಉಚ್ಚಿಲ ಜಂಕ್ಷನ್‌ ನಿರಂತರ ಅಪಘಾತದ ತಾಣವಾಗಿ ಗುರುತಿಸಲ್ಪಡುತ್ತಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಯ ವೇಳೆ ತೆರೆಯಲಾಗಿದ್ದ ಮೂಳೂರು ಮತ್ತು ಎರ್ಮಾಳು ಜಂಕ್ಷನ್‌ (ಡೈವರ್ಷನ್‌) ಜತೆಗೆ ಜನರ ಬೇಡಿಕೆಯ ಮೇರೆಗೆ ಉಚ್ಚಿಲ – ಪಣಿಯೂರು ರಸ್ತೆ ಜತೆ ಸೇರುವ ಜಂಕ್ಷನ್‌ನಲ್ಲಿ ಪ್ರತ್ಯೇಕವಾಗಿ ಡೈವರ್ಷನ್‌ ತೆರೆದುಕೊಡಲಾಗಿದೆ. ಇಲ್ಲಿ ನಾಲ್ಕೂ ದಿಕ್ಕುಗಳಿಂದ ವಾಹನಗಳು ಏಕಕಾಲಕ್ಕೆ ಸಾಗಿ ಬಂದು ಹೆದ್ದಾರಿಯನ್ನು ಪ್ರವೇಶಿಸು ತ್ತಿರುವ ಪರಿಣಾಮ ನಿರಂತರ ಅಪಘಾತಗಳು ಸಂಭವಿಸುತ್ತಿವೆ.

ರಾ. ಹೆ. 66ರ ಉಚ್ಚಿಲ ಜಂಕ್ಷನ್‌ನ ಆಸುಪಾಸಿನಲ್ಲಿ 2019ರಿಂದ 2021 ರವೆರೆಗೆ 20 ಅಪಘಾತಗಳು ಸಂಭವಿಸಿದ್ದು ಅದರಲ್ಲಿ 8 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. 32 ವಾಹನಗಳು ಜಖಂಗೊಂಡಿವೆ. 2022ರಲ್ಲೂ ಐದು ಅಪಘಾತಗಳು ಸಂಭವಿಸಿದ್ದು ಓರ್ವ ಮೃತಪಟ್ಟು ಐದು ಮಂದಿ ಗಾಯಗೊಂಡಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗದೆ ವಾಹನಗಳು ಜಖಂಗೊಂಡು, ರಾಜಿಯಲ್ಲಿ ಇತ್ಯರ್ಥಗೊಂಡ ಪ್ರಕರಣಗಳು ಬಹಳಷ್ಟಿವೆ.

ಉಪಯುಕ್ತ ಜಂಕ್ಷನ್‌

ಉಚ್ಚಿಲ ಜಂಕ್ಷನ್‌ ಹಲವು ಊರುಗಳಿಗೆ ಸಂಪರ್ಕ ಒದಗಿಸಿ ಕೊಡುವ ಮುಖ್ಯ ಪ್ರದೇಶವಾಗಿದೆ. ಎಲ್ಲೂರು, ಪಣಿಯೂರಿನಿಂದ ಉಡುಪಿ ಮತ್ತು ಮಂಗಳೂರಿಗೆ ತೆರಳುವ ವಾಹನಗಳು, ಎರ್ಮಾಳು, ಮೂಳೂರು, ಉಚ್ಚಿಲದಿಂದ ವಿವಿಧೆಡೆಗೆ ತೆರಳುವ ವಾಹನಗಳು, ಉಚ್ಚಿಲ ಕರಾವಳಿ ಭಾಗದಿಂದ ಉಡುಪಿ ಮತ್ತು ಮಂಗಳೂರಿಗೆ ತೆರಳುವ ವಾಹನ ಸವಾರರು ಈ ಜಂಕ್ಷನ್‌ ಅನ್ನು ಬಹಳವಾಗಿ ಅವಲಂಬಿಸಿದ್ದಾರೆ. ಈ ಹಿಂದೆ ಉಚ್ಚಿಲ ಜಂಕ್ಷನ್‌ ತೆರೆಯುವ ಮುನ್ನ ಈ ಎಲ್ಲ ಕಡೆಗಳಿಂದ ಬರುವ ವಾಹನ ಸವಾರರು ಉಡುಪಿಗೆ ತೆರಳುವವರು ಮತ್ತು ಮಂಗಳೂರಿಗೆ ತೆರಳುವವರು ಮೂಳೂರು ಅಥವಾ ಎರ್ಮಾಳು ಜಂಕ್ಷನ್‌ನ್ನು ಅವಲಂಬಿಸುವಂತಾಗಿತ್ತು.

ಅಪಘಾತ ಇಳಿಮುಖ ಸಾಧ್ಯತೆ

ಅವೈಜ್ಞಾನಿಕ ಚತುಷ್ಪಥ ಕಾಮಗಾರಿ ಮತ್ತು ಸರ್ವಿಸ್‌ ರಸ್ತೆಯ ಕೊರತೆಯಿಂದಾಗಿ ನಿರಂತರವಾಗಿ ಅಪಘಾತಗಳು ಸಂಭವಿಸುವಂತಾಗಿದೆ. ಸ್ಥಳೀಯಾಡಳಿತ, ರಿಕ್ಷಾ ಚಾಲಕರ ಸಹಿತವಾಗಿ ವಾಹನ ಸವಾರರ ನಿರಂತರ ಒತ್ತಡ ಮತ್ತು ಸ್ಥಳೀಯರ ಪ್ರತಿಭಟನ ಎಚ್ಚರಿಕೆಯ ಬಳಿಕ ಉಚ್ಚಿಲದಲ್ಲಿ ಕೊನೆಗೂ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಂಡು ಸರ್ವಿಸ್‌ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಆರಂಭಗೊಂಡ ಬಳಿಕ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆಯೂ ಇಳಿಮುಖವಾಗುವ ನಿರೀಕ್ಷೆಯಿದೆ.

ಅನುದಾನ ಕೋರಿ ಪತ್ರ

ಸುಸಜ್ಜಿತ ಸಂತೆ ಮಾರ್ಕೆಟ್‌ ಮತ್ತುಮೀನು ಮಾರ್ಕೆಟ್‌ ನಿರ್ಮಾಣಕ್ಕೆ ಮುಂದಿನ ಆರ್ಥಿಕ ವರ್ಷದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ಸರಕಾರ, ಶಾಸಕರು ಮತ್ತು ಮೀನುಗಾರಿಕಾ ಇಲಾಖೆಗೆ ಅನುದಾನ ಕೋರಿ ಪತ್ರ ಬರೆಯಲಾಗುವುದು. ಆ ಮೂಲಕ ಜಂಕ್ಷನ್‌ನಲ್ಲಿ ಕಾಡುತ್ತಿರುವ ಟ್ರಾಫಿಕ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. -ಕುಶಾಲಿನಿ ವಿ.ಎಸ್, ಪಿಡಿಒ, ಉಚ್ಚಿಲ ಗ್ರಾ.ಪಂ.

ಸಮಸ್ಯೆ ನಿಯಂತ್ರಿಸಲು ಕ್ರಮ

ಸಿಗ್ನಲ್‌ ಅಳವಡಿಕೆ, ಹಂಪ್ಸ್‌ ಅಳವಡಿಕೆ ಅಸಾಧ್ಯ. ಹೆದ್ದಾರಿಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್‌ ಗಳನ್ನು ಇರಿಸಿ ವೇಗ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಗ್ರಾ.ಪಂ., ಹೆದ್ದಾರಿ ಇಲಾಖೆ, ಗುತ್ತಿಗೆದಾರರು, ಪಿಡಬ್ಲ್ಯುಡಿ ಇಲಾಖೆ ಸಹಿತವಾಗಿ ಸಂಬಂಧಪಟ್ಟವರ ಜತೆಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. -ಅಶೋಕ್‌ ಕುಮಾರ್‌, ಪಡುಬಿದ್ರಿ ಪಿಎಸ್‌ಐ

ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.