![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 9, 2024, 7:00 PM IST
ಮಣಿಪಾಲ: ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ Udayavani.com ಹಾಗೂ ಮಂಗಳೂರು ಬಿಜೈನ ಐ ಯಾಮ್ ಜಯಲಕ್ಷ್ಮೀ, ಸಹ ಪ್ರಾಯೋಜಕರಾದ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್, ನಂದಿನಿ ಜತೆಗೂಡಿ ಆಯೋಜಿಸಿದ್ದ “ನಮ್ಮನೆ ಕೃಷ್ಣ-2024” ಪುಟಾಣಿ ಮಕ್ಕಳ ರೀಲ್ಸ್ ಸ್ಪರ್ಧೆ ಏರ್ಪಡಿಸಲಾಗಿದ್ದು ಅದರಂತೆ ಮೆಚ್ಚುಗೆ ಗಳಿಸಿದ ಹದಿನೈದು ರೀಲ್ಸ್ ಗಳಲ್ಲಿ 13ನೇ ರೀಲ್ಸ್ ಅನ್ನು ಇಂದು ಸೋಮವಾರ (ಸೆ.09) ಪ್ರಸಾರ ಮಾಡುತ್ತಿದ್ದೇವೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಒಂದು ವರ್ಷದಿಂದ ಐದು ವರ್ಷದೊಳಗಿನ ಮಕ್ಕಳ ರೀಲ್ಸ್ ಅನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ನಮ್ಮನೆ ಕೃಷ್ಣ ರೀಲ್ಸ್ ಸ್ಪರ್ಧೆಗೆ ನಮ್ಮ ಊಹೆಗೂ ಮೀರಿ ರೀಲ್ಸ್ ಗಳು ಬಂದಿದ್ದವು. ಇದರಲ್ಲಿ ಆಯ್ಕೆಯಾದ ಹದಿನೈದು ರೀಲ್ಸ್ ಗಳನ್ನು ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 21ರವರೆಗೆ ದಿನಾ ಒಂದರಂತೆ Udayavani.Com, ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನಲ್ ನಲ್ಲಿ ಸಂಜೆ 7ಗಂಟೆಗೆ ಪ್ರಸಾರವಾಗಲಿದೆ.
ಅದರಂತೆ ಇಂದು (ಸೆ.09) ಮೆಚ್ಚುಗೆ ಗಳಿಸಿದ 13ನೇ ರೀಲ್ಸ್ ಅನ್ನು ಪ್ರಸಾರಮಾಡಲಿದ್ದು ಉಡುಪಿ ಜಿಲ್ಲೆಯ, ಕಾಪು ತಾಲೂಕಿನ ಮಲ್ಲಾರು ಗ್ರಾಮದ ಸಚಿನ್ ಎಸ್ ಹಾಗೂ ವಿಲ್ಮಾ ಜೆಸಿಂತಾ ಮೊಂಟೆರೊ ಅವರ ಒಂದು ವರ್ಷ ನಾಲ್ಕು ತಿಂಗಳ ಮಗು ಸವಿನ್ ಸಚಿನ್ ಶೆಟ್ಟಿ ಅವರದ್ದಾಗಿದೆ.
ಆಯ್ಕೆಯಾದ ಮೂರು ರೀಲ್ಸ್ ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಆಯ್ದ 12 ರೀಲ್ಸ್ ಸೇರಿದಂತೆ ಎಲ್ಲಾ ಬಹುಮಾನ ವಿಜೇತರಿಗೆ ಆಕರ್ಷಕ ಗಿಫ್ಟ್ ಹ್ಯಾಂಪರ್ಸ್ ನೀಡಲಾಗುತ್ತದೆ.
View this post on Instagram
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.