Udupi; ಗೀತಾರ್ಥ ಚಿಂತನೆ 58-ಒಳ್ಳೆಯ ಕೆಲಸ, ಕೆಟ್ಟ ಕೆಲಸ: ಸಜ್ಜನ, ದುರ್ಜನ ಲಕ್ಷಣ


Team Udayavani, Oct 8, 2024, 1:14 AM IST

puttige-2

ದೂರವಿರುವ ಪಾಂಡವರ ಸೈನ್ಯವನ್ನು ಈ ಸೈನ್ಯವೆಂದು (ಇದಂ), ಹತ್ತಿರವಿದ್ದ ಕೌರವರ ಸೈನ್ಯವನ್ನು ಆ ಸೈನ್ಯವೆಂದು (ತತ್‌) ದುರ್ಯೋಧನ ಹೇಳುತ್ತಾನೆ. ನನ್ನ ಸೈನ್ಯ ಅಪರ್ಯಾಪ್ತವಾಗಿದೆ ಎಂದೂ, ನಮ್ಮ ಬಲ ದುರ್ಬಲವಾಗಿದೆ ಎಂದೂ ನಾಯಕರನ್ನುದ್ದೇಶಿಸಿ ಹೇಳುತ್ತಾನೆ. ನಾನೇ ನಾಯಕ ಎಂಬರ್ಥ ಇಲ್ಲಿದೆ. ದುಯೋಧನನ ಮನಃಸ್ಥಿತಿ ಹೇಗೆಂದರೆ “ಒಳ್ಳೆಯದೆಲ್ಲ ನನ್ನಿಂದ, ಕೆಟ್ಟದ್ದೆಲ್ಲ ನಿಮ್ಮಿಂದ’ ಎಂಬಂತೆ.

“ಒಳ್ಳೆಯದಾದರೆ ಗುರು, ದೇವರಿಂದ, ಕೆಟ್ಟದ್ದಾದರೆ ನಮ್ಮಿಂದ’ ಎನ್ನುವುದು ಸಜ್ಜನರ ಲಕ್ಷಣ. ದುಯೋಧನ ಸೇನಾನಾಯಕರಾದ ಭೀಷ್ಮಾಚಾರ್ಯರನ್ನು ರಕ್ಷಿಸಲು ಗುಂಪಿನವರಿಗೆ ಹೇಳುತ್ತಾನೆ. ಅಂದರೆ ಭೀಷ್ಮರ ಮೇಲೆ ಆತನಿಗೆ ಮನಸ್ಸಿರಲಿಲ್ಲ. ಹಿರಿಯರಾದ ಕಾರಣ ಬಿಡಲು ಆಗದೆ ಸೇನಾಪತಿಯಾಗಿ ಮಾಡಿದ್ದಾನೆ. ಆತ ಭೀಷ್ಮರಿಗಿಂತಲೂ ದ್ರೋಣರಿಗೆ ಹತ್ತಿರವಾಗಿದ್ದ. ಭೀಷ್ಮರು ಪಾಂಡವಪಕ್ಷಪಾತಿ ಎಂದು ದುರ್ಯೋಧನ ತಿಳಿದುಕೊಂಡಿದ್ದ. ವಯಸ್ಸಾಗಿದ್ದರೂ ಭೀಷ್ಮರು ಆ ಕಾಲದಲ್ಲಿ ನಂಬರ್‌ 1 ವೀರರು. ಅವರ ಮುಖ್ಯ ಉದ್ದೇಶ ಸಿಂಹಾಸನ, ವಂಶದ ರಕ್ಷಣೆ. ದುರ್ಯೋಧನ ಹೇಳಿದ್ದನ್ನು ಕೇಳಿಸಿಕೊಂಡ ಭೀಷ್ಮರು ಶಂಖನಾದವನ್ನು (ಸಿಂಹನಾದ) ಮೊಳಗಿಸಿದರು. ತತ್‌ಕ್ಷಣವೇ ಕೃಷ್ಣಾರ್ಜುನರು ಶಂಖವನ್ನು ಊದಿದರು. ಅಂದರೆ ಮೊದಲು ಯುದ್ಧವನ್ನು ಸಾರಿದವರು ಕೌರವರು ಎಂಬುದು ಶಂಖನಾದದಿಂದ ಸಾಬೀತಾಗುತ್ತದೆ. ಜಗಳದಲ್ಲಿ ಮೊದಲು ಆರಂಭಿಸಿದವನೇ ಆರೋಪಿ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

Tejasvi

Govt. Bungalow: ತೇಜಸ್ವಿ ಯಾದವ್ ತೆರವುಗೈದ ಸರಕಾರಿ ಬಂಗಲೆಯಲ್ಲಿ ಸೋಫಾ, ಎಸಿ ನಾಪತ್ತೆ!

1-dd-abbb

Dipa Karmakar; 31 ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಜಿಮ್ನಾಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

1

Bramavara: ಪೊಲೀಸರಿಗೆ ತಿಳಿಸದೆ ಅಂತ್ಯಕ್ರಿಯೆ; ದೂರು ದಾಖಲು

byndoor

Kundapura: ಸ್ಕೂಟಿ ಸ್ಕಿಡ್‌; ತಂದೆ-ಮಗನಿಗೆ ಗಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

1-gk

Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.