Udupi: ಪರಿಸರ ಸ್ನೇಹಿ ಸಿಎನ್‌ಜಿ ಬಸ್‌ ಸಂಚಾರ-ಸಿಎನ್‌ಜಿ ಲಭ್ಯತೆ ಸಮಸ್ಯೆ


Team Udayavani, May 2, 2024, 2:28 PM IST

Udayavani Kannada Newspaper

ಉಡುಪಿ: ಪರಿಸರ ಸ್ನೇಹಿ ವಾಹನಗಳಿಗೆ ಸರಕಾರ ಉತ್ತೇಜನ ನೀಡುತ್ತಿದ್ದು, ರಸ್ತೆಗಳಲ್ಲಿ ಎಲೆಕ್ಟ್ರಿಕ್‌ ಹಾಗೂ ಸಿಎನ್‌ಜಿ ಲಘು ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಕರಾವಳಿ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಖಾಸಗಿ ಬಸ್‌ಗಳು ಕೂಡ ಸಿಎನ್‌ಜಿ ಬಳಸಿ ಬಸ್‌ಗಳನ್ನು ಓಡಿಸಲು ಮುಂದಾಗುತ್ತಿದ್ದು, ಈಗಾಗಲೇ ಅಂಬಿಕಾ ಹೆಸರಿನ ಖಾಸಗಿ ಬಸ್‌ ಸಿಎನ್‌ಜಿ
ಮೂಲಕ ಚಲಿಸಿ ಪರಿಸರ ಸ್ನೇಹಿ ಬಸ್‌ ಎನಿಸಿಕೊಂಡಿದೆ.

1978ರಲ್ಲಿ ಮೊದಲ ಉಡುಪಿ-ಕುಂದಾಪುರ ಮಾರ್ಗಕ್ಕೆ ಮೊದಲ ಖಾಸಗಿ ಬಸ್‌ ಸೇವೆ ಆರಂಭಿಸಿದ ಮಲ್ಪೆಯ ಎಂಡಿ ಶ್ರೀಧರ್‌ ಅವರ ನೆನಪಿಗಾಗಿ ಅವರ ಪುತ್ರ ಬಸ್‌ ಮಾಲಕ ಎಂ.ಎಸ್‌.ಸೂರಜ್‌ ಅವರು ಬಸ್‌ಗೆ ಸಿಎನ್‌ಜಿ ಅಳವಡಿಸುವ ಮೂಲಕ ಪರಿಸರ ಸ್ನೇಹಿ ಜತೆಗೆ ಲಾಭದಾಯಕವನ್ನಾಗಿಸಿದ್ದಾರೆ. ಇವರ ಬಳಿ ವಿವಿಧ ರೂಟ್‌ಗಳಿಗೆ ಸಂಚರಿಸುವ ಒಟ್ಟು 7 ಬಸ್‌ಗಳಿದ್ದು, ಈ ಪೈಕಿ ಉಡುಪಿ ಒಂದು ಬಸ್‌ಗೆ ಸಿಎನ್‌ಜಿ ಅಳವಡಿಕೆ ಮಾಡಿದ್ದಾರೆ. ಇದರಿಂದ ದಿನಕ್ಕೆ 800 ರೂ.ಗಳಿಂದ 1,000 ರೂ.ಗಳಷ್ಟು ಹಣ ಉಳಿತಾಯವಾಗುತ್ತದೆಯಂತೆ.

ಡೀಸೆಲ್‌ ಬಸ್‌ಗಳು ಒಂದು ಲೀ.ಗೆ 3.70 ರಿಂದ 4.1 ರಷ್ಟು ಮೈಲೇಜ್‌ ನೀಡಿದರೆ ಸಿಎನ್‌ಜಿ ಬಸ್‌ಗಳು 5.5ರಿಂದ 6ರಷ್ಟು ಮೈಲೇಜ್‌ ನೀಡುತ್ತದೆ. ಡೀಸೆಲ್‌ ಬಸ್‌ ಗೆ ಹೋಲಿಸಿದರೆ ಸಿಎನ್‌ಜಿ ವೆಚ್ಚವೂ ಕಡಿಮೆಯಿದೆ.

ನಿರ್ವಹಣೆ ಸುಲಭ
ಡೀಸೆಲ್‌ ಎಂಜಿನ್‌ ಬಸ್‌ಗಳಲ್ಲಿ ನಿರ್ವಹಣೆ ದುಬಾರಿ. ಟರ್ಬೊ, ಇಂಟರ್‌ಕೂಲರ್‌ಗಳ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಸಿಎನ್‌ಜಿ ಬಸ್‌ಗಳಲ್ಲಿ 3 ಸಿಲಿಂಡರ್‌ಗಳನ್ನು ಅಳವಡಿಸಲಾಗಿದ್ದು, ಸ್ಪಾರ್ಕ್‌ ಪ್ಲಗ್‌ಗಳನ್ನು ಆದ್ಯತೆ ಮೇರೆಗೆ ಬದಲಾಯಿಸಿದರೆ ಸಾಕು. ಉಳಿದಂತೆ ಹೆಚ್ಚಿನ ನಿರ್ವಹಣೆಯಿಲ್ಲ. ಪರಿಸರ ಮಾಲಿನ್ಯವೂ ಉಂಟಾಗುವುದಿಲ್ಲ. ಶಬ್ದ ಮಾಲಿನ್ಯವೂ ಕಡಿಮೆ. ನಗರ ಸಂಚಾರಕ್ಕೆ ಬಹು ಉಪಯೋಗವಾಗಿದೆ.

ಸಬ್ಸಿಡಿ ಕೊರತೆ
ಪರಿಸರ ಸ್ನೇಹಿ ವಾಹನ ಉತ್ತೇಜಿಸುತ್ತಿರುವ ಸರಕಾರಿ ಸಿಎನ್‌ಜಿ ವಾಹನಕ್ಕೆ ಯಾವುದೇ ಸಬ್ಸಿಡಿ ನೀಡದಿರುವ ಕಾರಣ ಕೆಲವರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ದರವೂ ದುಬಾರಿಯಾಗಿದೆ. ಎಲೆಕ್ಟ್ರಿಕ್‌ ವಾಹನ ಕೊಂಡುಕೊಳ್ಳುವವರಿಗೆ ಮೊದಲಿಗೆ ಸಬ್ಸಿಡಿ ನೀಡಿದ್ದ ಸರಕಾರ ಬಳಿಕ ಅದರಲ್ಲಿ ಅರ್ಧದಷ್ಟನ್ನು ಸ್ಥಗಿತಗೊಳಿಸಿತು. ದರವನ್ನಾದರೂ ಕಡಿಮೆ ಮಾಡಿದರೆ ಮತ್ತಷ್ಟು ಪರಿಸರ ಸ್ನೇಹಿ ವಾಹನಗಳು ರಸ್ತೆಗೆ ಇಳಿಯಲಿವೆ.

ಸಿಎನ್‌ಜಿ ಲಭ್ಯತೆ ಸಮಸ್ಯೆ
ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಸಿಎನ್‌ಜಿ ಪೂರೈಕೆಯಾಗದ ಕಾರಣ ಕೆಲವೊಮ್ಮೆ ವ್ಯತ್ಯಯ ಉಂಟಾಗುತ್ತಿದೆ. ಮಂಗಳೂರು, ಕುಂದಾಪುರ, ಪಡುಬಿದ್ರಿ ಸಿಎನ್‌ಜಿ ಪಂಪ್‌ಗ್ಳಿಗೆ ಹೋಲಿಸಿದರೆ ಉಡುಪಿಯಲ್ಲಿ ಸಿಎನ್‌ಜಿ ದರ 3 ರೂ.ಅಧಿಕವಿದೆ. ಅದಾನಿ ಸಂಸ್ಥೆಯ ಮೂಲಕ ಉಡುಪಿ ಜಿಲ್ಲೆಗೆ ಸಿಎನ್‌ಜಿ ಪೂರೈಕೆಯಾಗುತ್ತಿದ್ದು, ಜಿಲ್ಲೆಯ ಎಲ್ಲ ಕಡೆಯೂ ಏಕರೂಪದ ದರ ನಿಗದಿ ಮಾಡುವ ಬಗ್ಗೆ ಸಂಸ್ಥೆಯ ಮುಖ್ಯಸ್ಥರಿಗೂ ಮನವರಿಕೆ ಮಾಡಲಾಗಿದೆ ಎನ್ನುತ್ತಾರೆ ಬಸ್‌ ಮಾಲಕರು.

ಮತ್ತಷ್ಟು ಪ್ರೋತ್ಸಾಹ ಬೇಕಿದೆ
ಡೀಸೆಲ್‌ ಬಸ್‌ಗೆ ಹೋಲಿಸಿದರೆ ಸಿಎನ್‌ಜಿ ಬಸ್‌ ದರ ಸುಮಾರು 3ರಿಂದ 3.5 ಲ.ರೂ.ಗಳಷ್ಟು ದುಬಾರಿ. ಆದರೆ ದೈನಂದಿನ ನಿರ್ವಹಣೆ ಕಡಿಮೆ. ಇಂಧನದ ಹಣದಲ್ಲಿಯೂ ಉಳಿತಾಯವಾಗಲಿದೆ. ಸಿಎನ್‌ಜಿ ಬಸ್‌ಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ಸಿಎನ್‌ಜಿ ಸ್ಟೇಷನ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಜತೆಗೆ ಸರಕಾರ ಹೊಸ ವಾಹನ ಖರೀದಿಸುವವರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು.
ಎಂ.ಎಸ್‌.ಸೂರಜ್‌, ಬಸ್‌ ಮಾಲಕರು

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.