Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Team Udayavani, Nov 21, 2024, 12:15 AM IST
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ|| (2-11) ಸತ್ತವರ ಬಗ್ಗೆ ದುಃಖ ಪಡುವುದಾದರೆ ಇದ್ದವರ ಬಗ್ಗೆಯೂ ದುಃಖ ಪಡಬೇಕು. ಅಳುವುದಾದರೆ ಎರಡಕ್ಕೂ ಅಳಬೇಕು. ಪ್ರಾಣ ಹೋದವರ ಬಗ್ಗೆ, ಪ್ರಾಣ ಹೋಗದೆ ಇದ್ದವರ ಬಗೆಗಾಗಲೀ ಪಂಡಿತರಾದವರು ದುಃಖ ಪಡುವುದಿಲ್ಲ ಎನ್ನುತ್ತಾನೆ ಕೃಷ್ಣ. ಸಾಯುತ್ತಾನೆ ಎಂದರೆ ಯಾರಾದರೂ ದುಃಖಪಡುವುದುಂಟೆ? ಸತ್ತ (ಭೂತಕಾಲ) ಎಂದಾಗಲೇ ದುಃಖಪಡುವುದು.ಆದ್ದರಿಂದಲೇ ಗತಅಗತ (ಗತಾಸೂನಗತಾಸೂಂಶ್ಚ) ಎನ್ನುವುದು. ಗತಾ ಎನ್ನುವ ಬದಲು ಮೃತ ಎಂದು ಹೇಳಬಹುದಿತ್ತು. ಪ್ರಾಣ ಹೋದ ಮೇಲೆ ದುಃಖ ಎನ್ನುವುದರ ಸೂಚನೆ ಇದು. ಮರಣ= ಕಾಣದೆ ಇರುವುದು. ಕಣ್ಣು, ಕಿವಿ ಹೋದರೆ ಮರಣ ಎನ್ನುವುದಿಲ್ಲ. “ಮುಖ್ಯಪ್ರಾಣ’ ಹೋದರೆ ಮರಣ.
ಪ್ರಾಣಾಪಾನವ್ಯಾನೋದಾನಸಮಾನ- ಈ ಐದೂ ಪ್ರಾಣಗಳು ಹೋದ ಮೇಲೆ ಸತ್ತ ಎಂದಾಗುವುದು. ಪಂಚಪ್ರಾಣಗಳು ಹೋಗಿಬಿಟ್ಟರೆ ಪಂಡಿತರು ದುಃಖಪಡುವುದಿಲ್ಲ. “ಸತ್ತವನನ್ನು, ಸಾಯದೆ ಇದ್ದವನನ್ನು’ ಎನ್ನಬಹುದಿತ್ತು. ದುಃಖ ಯಾವಾಗ ಆಗುತ್ತದೆ ಎಂದರೆ “ನನಗೊಬ್ಬನಿಗೆ ಮಾತ್ರ ದುಃಖವಾಯಿತು’ ಎಂದಾಗ. ಎಲ್ಲರೂ ಸಾಯುತ್ತಾರೆ, ನಾನೂ ಸಾಯುತ್ತೇನೆ ಎಂದು ಪಂಡಿತರಿಗೆ ಗೊತ್ತು. ಆದ್ದರಿಂದಲೇ ಏಕವಚನದಲ್ಲಿ ಹೇಳಿದ್ದರೆ ತಪ್ಪಲ್ಲದಿದ್ದರೂ ಬಹುವಚನವನ್ನು ಶ್ರೀಕೃಷ್ಣ ಹೇಳಿದ್ದ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಹಾಡಹಗಲೇ ಭಾಮೈದನಿಂದ ಬಾವನ ಮೇಲೆ ಮಾರಣಾಂತಿಕ ಹಲ್ಲೆ…
Naxal Surrender: ಶರಣಾದ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ
Naxal Surrender: ಕೊನೆಗೂ ನಿತ್ಯದ ಭಯ ತಪ್ಪಿತು: ಸಹೋದರ ವಿಠಲ ಪೂಜಾರಿ
Udupi: ಡಿಜಿಟಲ್ ಅರೆಸ್ಟ್ ವಂಚನೆ; ಆರೋಪಿ ಸೆರೆ
Padubidri:ಆಸ್ಪತ್ರೆಯಿಂದ ಮರಳುತ್ತಿದ್ದಾಗ ರಿಕ್ಷಾ ಪಲ್ಟಿ; ರೋಗಿ ಮತ್ತೆ ಆಸ್ಪತ್ರೆಗೆ ದಾಖಲು!
MUST WATCH
ಹೊಸ ಸೇರ್ಪಡೆ
Udupi; ಶ್ರೀ ಕೃಷ್ಣ ಮಠ: ಮಧ್ವ ನವಮಿ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
World Cancer ದಿನದ ಅಂಗವಾಗಿ ಕ್ಯಾನ್ಸರ್ ಗೆದ್ದವರಿಗೆ ಪಿಕಲ್ಬಾಲ್ ಪಂದ್ಯಾವಳಿ ಆಯೋಜನೆ
Sweet Recipes: ಮನೆಯಲ್ಲಿ ಶುಭ ಸಮಾರಂಭ ಇದ್ದರೆ ಈ ಸಿಹಿ ಖಾದ್ಯ ಒಮ್ಮೆ ಟ್ರೈ ಮಾಡಿ ನೋಡಿ…
BJP Rift;ಯಡಿಯೂರಪ್ಪ, ಮಗನ ಕರ್ಮಕಾಂಡಗಳ ಬಗ್ಗೆ ಹೇಳಲು ನಾಳೆ ದೆಹಲಿಗೆ: ಯತ್ನಾಳ್