Udupi ಗೀತಾರ್ಥ ಚಿಂತನೆ-7; ಸಕಲಜೀವರಾಶಿಗಳ ಉದ್ಧಾರದ ಗುರಿ
Team Udayavani, Aug 16, 2024, 12:35 AM IST
ವೇದಗಳನ್ನು ಅರಿಯದವರಿಗೂ ವೇದಜ್ಞಾನವನ್ನು ಮಹಾಭಾರತದಲ್ಲಿ ಸಿಗುವಂತೆ ಮಾಡಿದ್ದು, ಎಲ್ಲರೂ ಭಗವಂತನ ಪದತಲದ ಸೇವೆಯನ್ನು ಸಲ್ಲಿಸಬಹುದಾದ ಮಾರ್ಗವನ್ನು ತೋರಿಸಿದ್ದು ವೇದವ್ಯಾಸರು ಮಾಡಿದ ಬಹುದೊಡ್ಡ ಲೋಕೋಪಕಾರಕತ್ವ. ದೇವತೆಗಳು ಪ್ರಾರ್ಥಿಸುವಾಗ ಮನುಷ್ಯರ ಉದ್ಧಾರಕ್ಕಾಗಿ ಎಂಬ ಬೇಡಿಕೆ ಸಲ್ಲಿಸಿದ್ದರೂ ಸರ್ವಪ್ರಾಣಿಗಳಿಗೂ ಒಳಿತಾಗುವ ಗುರಿ ಅವತಾರದ ಮೂಲದಲ್ಲಿದೆ. ಕೆಲವು ಪ್ರಾಣಿಗಳು ಸ್ವಭಾವತಃ ಪ್ರಾಣಿಗಳಲ್ಲ.
ಉದಾಹರಣೆ ಹೇಳುವುದಾದರೆ ಜಡಭರತರು ಜಿಂಕೆಯಾದದ್ದು. ಇದು ಭಗವಂತನಿಗೆ ಸರ್ವಜೀವಿಗಳ ಮೇಲಿರುವ ವಾತ್ಸಲ್ಯವನ್ನು ತೋರಿಸುತ್ತದೆ. 84 ಲಕ್ಷ ಜೀವರಾಶಿಗಳಲ್ಲಿ ಕೊನೆಯ ಸ್ತರದ ಜೀವ “ತೃಣ’ದ್ದು. ಅದಕ್ಕಾಗಿಯೇ “ತೃಣಸಮಾನ’ ಎಂಬ ಮಾತು ಬಂದದ್ದು. ಕೇವಲ ಇಷ್ಟೇ ಅಲ್ಲ ಭಗವದವತಾರದಲ್ಲಿ ಬ್ರಹ್ಮರುದ್ರಾದಿ ದೇವತೆಗಳ ಲಕ್ಷ್ಯವೂ ಇದೆ. ಕೇವಲ ಮನುಷ್ಯರ ಮಟ್ಟಿಗಾಗಿದ್ದರೆ ಬ್ರಹ್ಮದೇವರು ಅವತಾರವೆತ್ತಿದ್ದರೆ ಸಾಕಿತ್ತು.
ಬ್ರಹ್ಮನಿಗೂ ಅಗತ್ಯವಾದ್ದರಿಂದ ಭಗವಂತನೇ ಬರಬೇಕಾಗಿತ್ತು. ಈ ಅಂಶ “ನಾರಾಯಣಾಷ್ಟಾಕ್ಷರಕಲ್ಪ’ದಲ್ಲಿದೆ ಎಂಬ ಪ್ರಮಾಣವನ್ನು ಶ್ರೀಮದಾಚಾರ್ಯರು ತೋರಿಸಿದ್ದಾರೆ. ಜೀವರಾಶಿಗಳಲ್ಲಿ ಕೊನೆಯದಾದ “ತೃಣ’ದಿಂದ ತೊಡಗಿ, ಹಿರಿಯನಾದ ಬ್ರಹ್ಮನ ವರೆಗೆ ಗಮನವಿರಿಸಿಕೊಂಡು ವೇದವ್ಯಾಸರ ಅವತಾರವಾಯಿತು. ಯತಿಗಳಾಗಲೀ, ಗೃಹಸ್ಥರಾಗಲೀ ಅಗಲಿದವರಿಗೆ ತರ್ಪಣ ಕೊಡುವಾಗ “ಆಬ್ರಹ್ಮಸ್ತಂಬಪರ್ಯಂತಂ ದೇವರ್ಷಿಪಿತೃಮಾನವಾಃ|’ ಎಂದು ಹೇಳುವುದಿದೆ. ತೃಣದಿಂದ ತೊಡಗಿ ಬ್ರಹ್ಮನವರೆಗೆ ಸಕಲ ಜೀವಿಗಳಿಗೆ ತೃಪ್ತಿಯಾಗುವಂತೆ ಹಾರೈಸುವ ಉದಾತ್ತ ಚಿಂತನೆಯ ಮಂತ್ರವಿದು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.