Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ
Team Udayavani, Sep 27, 2024, 2:05 AM IST
ಅಪರೋಕ್ಷಜ್ಞಾನದ ಬಳಿಕವೇ ಮೋಕ್ಷ ಖಚಿತವಾಗುವುದು. ಇದು ದೊರೆಯುವುದು ಭಕ್ತಿ ಮೂಲದಿಂದಲೇ. ಅಪರೋಕ್ಷಜ್ಞಾನಕ್ಕಿಂತ ಮೊದಲು “ದೇವರು ಇದ್ದಾನೋ? ಇಲ್ಲವೋ?’ ಎಂಬ ಸಂಶಯ ಬರುತ್ತದೆ. ಅನಂತರ ಸಂಶಯದ ಪ್ರಶ್ನೆ ಇರುವುದಿಲ್ಲ. ಆದರೆ ಅಭ್ಯಾಸಬಲದಿಂದ ಸಾಧಕ ಭಕ್ತಿಯನ್ನು ಹೊಂದಿರುತ್ತಾನೆ.
ಅಪರೋಕ್ಷಜ್ಞಾನದಬಳಿಕವೂ ಭಕ್ತಿ ಇರುವುದರಿಂದಲೇ ಮೋಕ್ಷ ಪ್ರಾಪ್ತಿಯಾಗುವುದು. ಪಾಂಡವಾದಿಗಳು ಮೋಕ್ಷದ ಎಲ್ಲ ಅರ್ಹತೆ ಹೊಂದಿದ್ದರೂ ಶ್ರವಣಾದಿ ಕರ್ಮಗಳನ್ನು ನಡೆಸಿದ್ದರು. ಮೋಕ್ಷ ಹೊಂದುವವರಲ್ಲಿ ಮೂರು ಬಗೆ. ಮನುಷ್ಯರು ಕನಿಷ್ಠ ದರ್ಜೆಯವರು, ಇವರಿಗಿಂತ ಋಷಿಗಳು, ಅನಂತರ ದೇವತೆಗಳು ಶ್ರೇಷ್ಠರು. ಋಷಿ ಸ್ಥಾನವು ಸಾಧನರೂಪವಾಗಿದ್ದರೆ, ದೇವತೆಗಳು ಮತ್ತು ಮನುಷ್ಯರದ್ದು ಜೀವಸ್ವಭಾವವಾಗಿದೆ. ಏಕೆಂದರೆ ಋಷಿ ಸ್ಥಾನವು ತಪಸ್ಸು ಮಾಡಿ ಬಂದಿರುವುದು.
ಮನುಷ್ಯೋತ್ತಮರೇ ಋಷಿಗಳು. ಇವರಲ್ಲಿ ಬ್ರಹ್ಮಋಷಿ, ದೇವಋಷಿ, ರಾಜರ್ಷಿಗಳೆಂಬ ವಿಧಗಳಿವೆ. ದೇವತೆಗಳಲ್ಲಿ ವಿಧಗಳಿವೆ. ಬ್ರಹ್ಮದರ್ಶನವಾದ ಬಳಿಕವೂ ದೇವತೆಗಳು ಶ್ರವಣಾದಿಗಳನ್ನು ಬಿಡುವುದಿಲ್ಲ. ಅದೇಕೆಂದರೆ ಸುಖಾಧಿಕ್ಯಕ್ಕಾಗಿ. ಈ ಜಗತ್ತು ಸೃಷ್ಟಿಯಾಗುವ ಮುನ್ನ ಇದ್ದದ್ದು ದೇವರೊಬ್ಬನೆ. “ಏಕೋ ನಾರಾಯಣಃ ನ ಬ್ರಹ್ಮನ ಚ ಶಂಕರಃ’…ಮೊದಲು ಬಂದ ಭಗವಂತ ಜಗತ್ತು ಸೃಷ್ಟಿಸಿದ, ಅದರಲ್ಲಿ ಜೀವಿಗಳನ್ನು ಸೃಷ್ಟಿಸತೊಡಗಿದ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಕಂದಾಯ ಸೇವೆ ವ್ಯತ್ಯಯ
Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್: ಅಬ್ರಹಾಂ
Udupi: ಜೀನ್ ಚಿಕಿತ್ಸೆ, ನಿಖರ ಔಷಧ ಸಮ್ಮೇಳನ: ಡಾ| ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಸಮ್ಮಾನ
New Industrial Area Construction: ಭೂ ಸ್ವಾಧೀನ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
CM ರಾಜೀನಾಮೆ ನೀಡುವುದು ಸೂಕ್ತ: ಸಂಸದ ಕೋಟ ಶ್ರೀನಿವಾಸ ಪೂಜಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.