Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ
Team Udayavani, Sep 19, 2024, 1:00 AM IST
ಅರ್ಜುನನ ಮೇಲಿನ ಪ್ರೀತಿಯಿಂದ ಗುಟ್ಟಿನ ವಿಷಯವನ್ನು ಹೇಳುತ್ತೇನೆ (ಗುಹ್ಯತಮಂ) ಎಂದು ಕೃಷ್ಣ ಹೇಳುತ್ತಾನೆ. ಬಹಿರಂಗವಾಗಿ ಹೇಳಿ ಅನಂತರ ಇದು ಗುಟ್ಟು ಎಂದು ಹೇಳುವುದರಲ್ಲಿ ಅರ್ಥವಿದೆಯೆ ಎಂಬ ಸಂಶಯ ಬರುತ್ತದೆ. ಹೇಳುವುದು ಬೇರೆ, ಉಪದೇಶ ಕೊಡುವುದು ಬೇರೆ ಎಂಬ ಪರಿಜ್ಞಾನ ಬೇಕು. ಅರ್ಜುನ ನಿರ್ಮತ್ಸರಿಯಾದುದೂ ಪ್ರೀತಿಗೆ ಇನ್ನೊಂದು ಕಾರಣ. ಅನಸೂಯನಾದ ಕಾರಣ ನಿನಗೆ ಹೇಳುತ್ತಿದ್ದೇನೆ ಎಂಬುದು ಕೃಷ್ಣನ ಮಾತು.
“ನಿರ್ಮತ್ಸರಾಣಾಂ’ = ಅಸೂಯೆ. ಮತ್ಸರವೆಂದರೇನು? =ಮತ್ತಃ ಸರತೇತಿ ಮತ್ಸರಃ. ಒಬ್ಬ ತನಗಿಂತ ಮುಂದೆ ಹೋಗುತ್ತಾನೆ ಎಂದಾಗ ಹೊಟ್ಟೆಕಿಚ್ಚು ಉತ್ಪತ್ತಿಯಾಗುತ್ತದೆ. ರಾಮ ಪಟ್ಟಾಭಿಷೇಕ ಆಗುವಾಗ ಮಂಥರೆ ಏನೇ ಚುಚ್ಚಿಕೊಟ್ಟರೂ ಕೈಕೇಯಿ ಬಗ್ಗಲಿಲ್ಲ. “ರಾಮ ರಾಜನಾದರೆ ಆಗಲಿ, ನನಗೆ ಸಂತೋಷ’ ಎಂದೇ ಕೈಕೇಯಿ ವಾದವಾಗಿತ್ತು. ಕೊನೆಯಲ್ಲಿ ಮಂಥರೆ ಮತ್ಸರಬೀಜ ಬಿತ್ತುತ್ತಾಳೆ. “ಮುಂದೆ ರಾಜಮಾತೆ ಯಾರು ಆಗುತ್ತಾರೆ? ಕೌಸಲ್ಯೆೆ. ಆಗ ನಿನಗೆ ಏನು ಮಾನ್ಯತೆ ಸಿಗುತ್ತದೆ?’. ಈ ದುರುಪದೇಶ ಕೇಳಿದ ಮೇಲೆ ಕೈಕೇಯಿ ಮನಸ್ಸು ವ್ಯಗ್ರವಾಯಿತು, ಅನಸೂಯಳಾಗಿದ್ದವಳು ಅಸೂಯಾಪರಳಾದಳು.
ಪಾಂಡವರು ರಾಜಸೂಯ ಯಾಗ ಮಾಡಿದಾಗ ಬಂದ ಅಪಾರ ಸಂಪತ್ತನ್ನು ನೋಡಿ ಲೆಕ್ಕಾಧಿಕಾರಿಯಾದ ದುರ್ಯೋಧನನಿಗೆ ಅಸೂಯೆ ಉಂಟಾಯಿತು, ಇದುವೇ ಮಹಾಭಾರತದ ಬೆಳವಣಿಗೆಗೆ ಕಾರಣವಾಯಿತು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.