Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ
Team Udayavani, Sep 20, 2024, 1:44 AM IST
ಅರ್ಜುನನಿಗೆ ಶ್ರೀಕೃಷ್ಣ ಗೀತೋಪದೇಶ ಮಾಡಬೇಕಾಗಿ ಬಂದ ಮೂಲವೂ ಶಕುನಿಯ ಮತ್ಸರದ ಪ್ರೇರಣೆಯೇ.. ಬುದ್ಧಿವಂತರು ದುಷ್ಟರಾದರೆ ಬಹಳ ಕಷ್ಟ. ಇಡೀ ಮಹಾಭಾರತದಲ್ಲಿ ದುರ್ಯೋಧನನಿಗಿಂತ ಶಕುನಿ ಪಾತ್ರ ಕೆಟ್ಟತನದ್ದು. ಜಗತ್ತಿನಲ್ಲಿ ಶಕುನಿಗಳ ಸಂಖ್ಯೆ ಬಹಳಷ್ಟಿವೆ.
ರಾಜಕೀಯದಲ್ಲಿ ಶಕುನಿಗಳ ಪಾತ್ರವೇ ಅಪಾರ. ಆತ ಯುದ್ಧವಿಲ್ಲದೆ ರಾಜ್ಯವನ್ನು ಗೆದ್ದು ತಂದುಕೊಡುತ್ತೇನೆ ಎಂದು ದುರ್ಯೋಧನನಿಗೆ ದುಬೋìಧನೆ ಕೊಡುತ್ತಾನೆ. ಅದು ಕಪಟದ ಪಗಡೆಯಾಟದ ಮೂಲಕ. ಅಸೂಯೆಯನ್ನು ದಾಟಿ ಇರುವುದು ಕಷ್ಟ. ಸಜ್ಜನರನ್ನೂ ಇದು ಕಾಡುತ್ತದೆ. ಅಸೂಯೆ ಇಲ್ಲದ್ದರಿಂದಲೇ ಅರ್ಜುನ ಯುದ್ಧದಿಂದ ಹಿಂದಕ್ಕೆ ಸರಿದದ್ದು.
ಅಸೂಯೆಗೆ ಮೂಲಕಾರಣ ಅಹಂಕಾರ. ಕೇವಲ ಅಸೂಯೆ ಮಾತ್ರವಲ್ಲ, ಕಾಮ, ಕ್ರೋಧ, ಲೋಭ, ಮೋಹ, ಮದ ಎಲ್ಲವೂ ಅಹಂಕಾರದಿಂದಲೇ ಬರುವುದು. ಕೊನೆಯ ಉತ್ಪನ್ನವೇ ಮತ್ಸರ. ಅರಿಷಡ್ವೆ„ರಿಗಳಿಗೆ ಮೂಲವೇ ಅಹಂ. ಕೊನೆಯದಾದ ಮತ್ಸರವನ್ನು ಬಿಟ್ಟರೆ ಶೇ.100ರಷ್ಟು ಸಜ್ಜನ ಆಗುತ್ತಾರೆ. ಆದರೆ ಬಿಡುವುದೇ ಕಷ್ಟ. ಸೀತಾಪಹರಣದ ಮೂಲವೂ ಇಲ್ಲೇ ಇದೆ. ಶೂರ್ಪನಖಿ ಗೂ ಸೀತೆಯನ್ನು ನೋಡಿ ಅಸೂಯೆ ಮೂಡಿ ರಾವಣನಿಗೆ ಚುಚ್ಚಿಕೊಟ್ಟದ್ದರಿಂದ ಮುಂದಿನ ಬೆಳವಣಿಗೆಗೆ ಕಾರಣವಾಯಿತು. ಒಬ್ಬ ವ್ಯಕ್ತಿಯಲ್ಲಿ ಅಸೂಯೆ ಮೂಡಿತೆಂದರೆ ಮತ್ತೆ ಹಿಂದಿರುಗಿಸುವುದು ಕಷ್ಟ. ಒಮ್ಮೆ ಮೊಸರಾದರೆ ಮತ್ತೆ ಹಾಲು ಮಾಡಲಾಗದು.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.