Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ
Team Udayavani, Sep 24, 2024, 12:55 AM IST
ಮೋಕ್ಷಕ್ಕೆ ಜ್ಞಾನ, ಭಕ್ತಿ, ವೈರಾಗ್ಯಗಳು ಮುಖ್ಯವಾದರೂ ಶ್ರೀಮದಾಚಾರ್ಯರು ಭಾಷ್ಯದಲ್ಲಿ ಭಕ್ತಿಯನ್ನು ಎತ್ತಿ ಹಿಡಿದದ್ದು ಏಕೆ? ಆರಂಭದಲ್ಲಿ ಮೂಢಭಕ್ತಿಯೇ ಆಗಿದ್ದರೂ ಮುಂದಿನ ಮೋಕ್ಷದ ವರೆಗಿನ ಬೆಳವಣಿಗೆಗೆ ಇದು ಬಹಳ ಪ್ರಯೋಜನಕಾರಿಯಾಗಲಿದೆ.
ಮೂಢಭಕ್ತಿಯಿಂದ ಆರಂಭದಲ್ಲಿ ದೇವಸ್ಥಾನಕ್ಕೆ ಹೋಗುವುದೇ ಆಗಿದ್ದರೂ ಇದುವೇ ಟರ್ನಿಂಗ್ ಪಾಯಿಂಟ್ ಆಗಿರುತ್ತದೆ. ಇಂತಹ ಸಂದರ್ಭ ಒಂದು ಬಗೆಯ ಸೆಳೆತ ಉಂಟಾಗುತ್ತದೆ. ಭಕ್ತಿಯ ಸೆಳೆತದಿಂದಲೇ ದೇವಸ್ಥಾನಕ್ಕೆ ಹೋಗಲು ಆರಂಭವಾಗುತ್ತದೆ. ದೇವರ ಮಹಿಮೆಯನ್ನು ಕೇಳಿ ಪ್ರೀತಿ, ಕಾಳಜಿ ಮೊದಲು ಶುರುವಾಗುತ್ತದೆ. ಒಳ್ಳೆಯ ವಿಷಯದಲ್ಲಿ ಆಸಕ್ತಿ ಇದ್ದರೆ ಅದನ್ನು ನೋಡಬೇಕು ಅಂದೆನಿಸುತ್ತದೆ. ಯಾವ ಜೀವಿಯ ಸ್ವಭಾವ ಹೇಗಿದೆಯೋ ಹಾಗೆ ಆಸಕ್ತಿ ಬೆಳೆಯುತ್ತದೆ. ಇದು ಎಲ್ಲರ ಅನುಭವಕ್ಕೆ ಬರುವ ವಿಷಯ. ಈಗ ತೀವ್ರ ಚರ್ಚೆಯಲ್ಲಿರುವ ಎಡಪಂಥ, ಬಲಪಂಥಕ್ಕೂ ಇದು ಅನ್ವಯ. ಯಾರೂ ಕೂಡ ಚಿಕ್ಕ ಪ್ರಾಯದಲ್ಲಿಯೇ ಎಡಪಂಥದವರೋ, ಬಲಪಂಥದವರೋ ಆಗಿರುವುದಿಲ್ಲ. ಆತನ/ಆಕೆಯ ಸ್ವಭಾವಕ್ಕೆ ತಕ್ಕುದಾಗಿ ಅಂತಹ ವಿಷಯದ ಒಲವು ಹೆಚ್ಚುತ್ತದೆ.
ಆ ವಿಷಯಗಳನ್ನು ಪ್ರತಿಪಾದಿಸುವವರ ಮೇಲೆ ಗೌರವ ಮೂಡುತ್ತದೆ. ಅವರನ್ನು ಕಾಣಬೇಕೆಂದೆನಿಸುತ್ತದೆ. ಮುಂದೆ ನಾಯಕರಾಗುತ್ತಾರೆ. ಹೀಗೆ ಆರಂಭದಲ್ಲಿದ್ದ ಮೂಢಭಕ್ತಿ ಶುದ್ಧಭಕ್ತಿಯಾಗಿ ಮಾರ್ಪಾಟಾಗಿ ಮೋಕ್ಷದಲ್ಲಿಯೂ ಇರುತ್ತದೆ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Shivamogga: ತಿರುಪತಿ ಲಡ್ಡಿಗೆ ಅಪಚಾರ: ಕೂಡಲಿ ಶ್ರೀಗಳಿಂದ 3 ದಿನ ಉಪವಾಸ ವ್ರತ
High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್
High Court: ಕೋರ್ಟ್ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ
Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ
Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.